AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ

ದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೀಗ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಗಡಿಗಳಲ್ಲಿ ಹಾಕಿದ್ದ ಟೆಂಟ್​​ಗಳನ್ನು ತೆಗೆಯುತ್ತಿದ್ದಾರೆ. ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಕೇಂದ್ರ ಸರ್ಕಾರದಿಂದ ಅಧಿಕೃತ ಪತ್ರ ನೀಡಲಾದ ಬೆನ್ನಲ್ಲೇ  ರೈತರು ತಮ್ಮ ಆಂದೋಲನವನ್ನು ಹಿಂಪಡೆದಿದ್ದಾರೆ.  ಹಾಗೆ ಇಂದು ಸಂಜೆಯ ಒಳಗೆ ಎಲ್ಲರೂ ಗಡಿಗಳಿಂದ ಸಂಪೂರ್ಣವಾಗಿ ವಾಪಸ್​ ಆಗಲಿದ್ದಾರೆ. ಆದರೆ ಹೀಗೆ ಹೋಗುವ ಮೊದಲು ದೆಹಲಿಯ ಗಡಿಯಲ್ಲಿ ರೈತರು ಇಂದು ವಿಜಯ್​ ದಿವಸ್​ […]

Farmers Protest: ಇಂದು ಸಂಜೆಯೊಳಗೆ ಗಡಿ ಬಿಟ್ಟು ಹೊರಡುವ ರೈತರು; ವಾಪಸ್​ ಆಗುವುದಕ್ಕೂ ಮೊದಲು ವಿಜಯ ದಿವಸ್​ ಆಚರಣೆ
ರೈತ ಪ್ರತಿಭಟನೆಯ ಚಿತ್ರ
TV9 Web
| Edited By: |

Updated on:Dec 11, 2021 | 8:53 AM

Share

ದೆಹಲಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷಕ್ಕೂ ಅಧಿಕ ಕಾಲದಿಂದ ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೀಗ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾರೆ. ಗಡಿಗಳಲ್ಲಿ ಹಾಕಿದ್ದ ಟೆಂಟ್​​ಗಳನ್ನು ತೆಗೆಯುತ್ತಿದ್ದಾರೆ. ರೈತರ ಎಲ್ಲ ಬೇಡಿಕೆಗಳನ್ನೂ ಈಡೇರಿಸುವುದಾಗಿ ಕೇಂದ್ರ ಸರ್ಕಾರದಿಂದ ಅಧಿಕೃತ ಪತ್ರ ನೀಡಲಾದ ಬೆನ್ನಲ್ಲೇ  ರೈತರು ತಮ್ಮ ಆಂದೋಲನವನ್ನು ಹಿಂಪಡೆದಿದ್ದಾರೆ.  ಹಾಗೆ ಇಂದು ಸಂಜೆಯ ಒಳಗೆ ಎಲ್ಲರೂ ಗಡಿಗಳಿಂದ ಸಂಪೂರ್ಣವಾಗಿ ವಾಪಸ್​ ಆಗಲಿದ್ದಾರೆ.

ಆದರೆ ಹೀಗೆ ಹೋಗುವ ಮೊದಲು ದೆಹಲಿಯ ಗಡಿಯಲ್ಲಿ ರೈತರು ಇಂದು ವಿಜಯ್​ ದಿವಸ್​ ಆಚರಣೆ ಮಾಡುವರು. ವಿವಾದಿತ ಕೃಷಿ ಕಾಯ್ದೆಗಳ ಆಂದೋಲನದಲ್ಲಿ ತಮಗೆ ಕೇಂದ್ರದ ವಿರುದ್ಧ ಜಯ ಸಿಕ್ಕಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ವಿಜಯ್​ ದಿವಸ್ ಆಚರಣೆ ಮಾಡಿ, ತಮ್ಮ ಊರಿಗೆ ಹೋಗಲಿದ್ದಾರೆ.  ಶನಿವಾರ ದೆಹಲಿ ಗಡಿಯಲ್ಲಿ, ಎಲ್ಲ ಟೋಲ್ ಪ್ಲಾಜಾಗಳಲ್ಲಿ ಮತ್ತು ಪ್ರತಿಭಟನಾ ಸ್ಥಳಗಳಲ್ಲಿ ರೈತರು ವಿಜಯ ಮೆರವಣಿಗೆ ನಡೆಸಲಿದ್ದಾರೆ ಎಂದು ಸಂಯುಕ್ತ ಕಿಸಾನ್​ ಮೋರ್ಚಾ ಹೇಳಿದೆ.

ರೈತ ಸಂಘಟನೆಗಳು ಡಿ.10ರಂದೇ ವಿಜಯ್​ ದಿವಸ್​ ಆಚರಣೆ ಮಾಡಲು ನಿರ್ಧರಿಸಿದ್ದರು. ಆದರೆ ನಿನ್ನೆ ಭಾರತದ ಪ್ರಥಮ ಸಿಡಿಎಸ್​​ ಜನರಲ್​ ಬಿಪಿನ್​ ರಾವತ್​ ಅಂತ್ಯಕ್ರಿಯೆ ಇದ್ದ ಕಾರಣ ಒಂದು ದಿನಕ್ಕೆ ಮುಂದೂಡಿದ್ದರು. ಸದ್ಯಕ್ಕಂತೂ ರಾಷ್ಟ್ರರಾಜಧಾನಿಯ ಸಿಂಘು ಮತ್ತು ಗಾಝಿಪುರ ಗಡಿಗಳಲ್ಲಿ ರೈತರ ಚಟುವಟಿಕೆಗಳು ಹೆಚ್ಚಿವೆ. ಅಲ್ಲೀಗ ಟೆಂಟ್​​ಗಳನ್ನು ತೆಗೆಯಲಾಗುತ್ತಿದೆ. ಅದನ್ನೆಲ್ಲ ಹೊತ್ತುಕೊಂಡು ಹೋಗಲು ಟ್ರ್ಯಾಕ್ಟರ್​​ಗಳು ಬಂದು ನಿಂತಿವೆ. ಇನ್ನೊಂದೆಡೆ ಉತ್ತರ ಪ್ರದೇಶದ ಗಡ

ಏತನ್ಮಧ್ಯೆ, ರಾಷ್ಟ್ರ ರಾಜಧಾನಿಯ ಸಿಂಘು ಮತ್ತು ಗಾಜಿಪುರ ಗಡಿ ಬಿಂದುಗಳು-ಕಳೆದ 14 ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದ ಎರಡು ಸೈಟ್‌ಗಳಲ್ಲಿ ತೆರವು ಚಟುವಟಿಕೆಗಳು ಶುರುವಾಗಿವೆ. ರೈತರು ಟ್ರಕ್‌ಗಳು ಮತ್ತು ಟ್ರ್ಯಾಕ್ಟರ್‌ಗಳಲ್ಲಿ ತಮ್ಮ ಮನೆಗಳಿಗೆ ತೆರಳಲು ತಮ್ಮ ಸಿದ್ಧತೆಗಳನ್ನು ಪೂರ್ಣಗೊಳಿಸುವಲ್ಲಿ ನಿರತರಾಗಿದ್ದಾರೆ. ಟ್ರಾಲಿಗಳು. ಮತ್ತೊಂದೆಡೆ ಯುಪಿ ಗೇಟ್ ಪ್ರತಿಭಟನಾ ಸ್ಥಳವನ್ನು ಡಿಸೆಂಬರ್ 15 ರೊಳಗೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ರೈತರು ಹೇಳಿದ್ದಾರೆ. ಇನ್ನು ಯುಪಿ ಗೇಟ್​​ ಬಳಿ ನಡೆಯುತ್ತಿರುವ ಪ್ರತಿಭಟನೆನ್ನು ಡಿ.15ರೊಳಗೆ ತೆರವುಗೊಳಿಸಲಾಗುವುದು ಎಂದು ರೈತರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಡ್​​ ರೂಮ್​ನಿಂದ ಗೃಹ ಕಚೇರಿಗೆ ತೆರಳುವಾಗ ಬಿದ್ದು ಗಾಯಗೊಂಡ ವ್ಯಕ್ತಿ; ಅದು ಕೆಲಸದ ಸ್ಥಳದಲ್ಲಿ ನಡೆದ ಘಟನೆ ಎಂದ ಕೋರ್ಟ್!

Published On - 8:38 am, Sat, 11 December 21

Follow Us
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಮಧ್ಯ ರಾತ್ರಿ 2 ಗಂಟೆ ಮೇಲೆ ರಕ್ಷಿತಾ ಪ್ರೇಮ್ ಕರೆ ಮಾಡಿದ್ರು: ಧ್ರುವ ಸರ್ಜಾ
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆರೂರು PSI ಲೋಕಾಯುಕ್ತ ಬಲೆಗೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು