AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸವಾರರಿಗೆ 1 ತಿಂಗಳ ರಿಲೀಫ್, ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ

ನೋ ವೇ ಜಾನ್ಸೇ ಇಲ್ಲ. ನೀವು ತಿಪ್ಪರಲಾಗ ಹಾಕಿದ್ರೂ ಫಾಸ್ಟ್​ ಟ್ಯಾಗ್‌ ಇಲ್ಲ ಅಂದ್ರೆ ಟೋಲ್‌ನಿಂದ ನಿಮ್ಮ ವಾಹನ ಮುಂದಕ್ಕೆ ಹೋಗಲ್ಲ. ಫಾಸ್ಟ್ ಟ್ಯಾಗ್ ಹಾಕದಿದ್ರೆ ನೀವು ಡಬ್ಬಲ್ ಟೋಲ್ ಕಟ್ಟಬೇಕು. ನಾವು ಕೊಟ್ಟ ಡೆಡ್‌ಲೈನ್‌ನೊಳಗೆ ನೀವು ಫಾಸ್ಟ್ ಟ್ಯಾಗ್‌ ಅಳವಡಿಸಿಕೊಳ್ಳಬೇಕು ಅಂತ ಕೇಂದ್ರ ಫುಲ್ ಖಡಕ್ ಆಗಿ ಹೇಳಿತ್ತು. ಆದ್ರೆ ಫಾಸ್ಟ್‌ ಟ್ಯಾಗ್ ಭಯದಲ್ಲಿದ್ದ ವಾಹನ ಸವಾರರಿಗೆ ಕೇಂದ್ರ ಪದೇ ಪದೇ ರಿಲೀಫ್ ನೀಡ್ತಿದೆ. ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಿಸಿದ ಕೇಂದ್ರ! ಯೆಸ್‌, ಕೇಂದ್ರ […]

ಸವಾರರಿಗೆ 1 ತಿಂಗಳ ರಿಲೀಫ್, ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಣೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 15, 2019 | 7:17 AM

Share

ನೋ ವೇ ಜಾನ್ಸೇ ಇಲ್ಲ. ನೀವು ತಿಪ್ಪರಲಾಗ ಹಾಕಿದ್ರೂ ಫಾಸ್ಟ್​ ಟ್ಯಾಗ್‌ ಇಲ್ಲ ಅಂದ್ರೆ ಟೋಲ್‌ನಿಂದ ನಿಮ್ಮ ವಾಹನ ಮುಂದಕ್ಕೆ ಹೋಗಲ್ಲ. ಫಾಸ್ಟ್ ಟ್ಯಾಗ್ ಹಾಕದಿದ್ರೆ ನೀವು ಡಬ್ಬಲ್ ಟೋಲ್ ಕಟ್ಟಬೇಕು. ನಾವು ಕೊಟ್ಟ ಡೆಡ್‌ಲೈನ್‌ನೊಳಗೆ ನೀವು ಫಾಸ್ಟ್ ಟ್ಯಾಗ್‌ ಅಳವಡಿಸಿಕೊಳ್ಳಬೇಕು ಅಂತ ಕೇಂದ್ರ ಫುಲ್ ಖಡಕ್ ಆಗಿ ಹೇಳಿತ್ತು. ಆದ್ರೆ ಫಾಸ್ಟ್‌ ಟ್ಯಾಗ್ ಭಯದಲ್ಲಿದ್ದ ವಾಹನ ಸವಾರರಿಗೆ ಕೇಂದ್ರ ಪದೇ ಪದೇ ರಿಲೀಫ್ ನೀಡ್ತಿದೆ.

ಫಾಸ್ಟ್​ ಟ್ಯಾಗ್ ಅಳವಡಿಕೆ ಗಡುವು ವಿಸ್ತರಿಸಿದ ಕೇಂದ್ರ! ಯೆಸ್‌, ಕೇಂದ್ರ ಸರ್ಕಾರ ಮೊದಲು ಡಿಸೆಂಬರ್ 1 ಫಾಸ್ಟ್ಟ್‌ಟ್ಯಾಗ್‌ ಅಳವಡಿಕೆಗೆ ಲಾಸ್ಟ್ ಡೇಟ್ ಅಂತ ಹೇಳಿತ್ತು. ನಂತ್ರ ಆ ಡೇಟನ್ನ ಡಿಸೆಂಬರ್ 15ರವರೆಗೂ ವಿಸ್ತರಿಸಿತ್ತು. ಆದ್ರೆ ಈಗ ಕೇಂದ್ರ ವಾಹನ ಸವಾರರಿಗೆ ಕೊಂಚ ರಿಲೀಫ್ ನೀಡಿದೆ. ಕೇಂದ್ರ ಫಾಸ್ಟ್ಟ್‌ ಟ್ಯಾಗ್‌ ಅಳವಡಿಕೆಗೆ ಜನವರಿ 15 ತನಕ ಕಾಲಾವಕಾಶ ನೀಡಿದೆ.

ಸವಾರರಿಗೆ ‘ಫಾಸ್ಟ್ ​ಟ್ಯಾಗ್’ನಿಂದ 1 ತಿಂಗಳ ರಿಲೀಫ್! ರಾಷ್ಟೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್‌ ಗೇಟ್ ಮೂಲಕ ಸಾಗಲು ಫಾಸ್ಟ್ಟ್‌ ಟ್ಯಾಗ್ ಸ್ಟಿಕ್ಕರ್ ಅಳವಡಿಕೆ ಕಡ್ಡಾಯ ಅಂತ ಕೇಂದ್ರ ಆದೇಶ ಹೊರಡಿಸಿತ್ತು. ಡಿಸೆಂಬರ್ 15 ಅಂದ್ರೆ ಇಂದು ಫಾಸ್ಟ್ಟ್‌ಟ್ಯಾಗ್ ಅಳವಡಿಕೆಗೆ ಲಾಸ್ಟ್ ಡೇಟ್ ಅಂತ ಹೇಳಿತ್ತು. ಆದ್ರೆ ಇದೀಗ ಆರ್‌ಎಫ್‌ಐಡಿ ಸ್ಟಕ್ಕರ್‌ ಕೊರತೆಯಿಂದ ಅರ್ಧದಷ್ಟು ಟೋಲ್‌ಗಳಲ್ಲಿ ಮಾತ್ರ ಸ್ಕ್ಯಾನರ್‌ಗಳನ್ನ ಅಳವಡಿಸಲಾಗಿದೆ. ಇನ್ನುಳಿದ ಟೋಲ್‌ಗಳಲ್ಲಿ ಸ್ಕ್ಯಾನರ್‌ ಅಳವಡಿಕೆ ಬಾಕಿ ಇದೆ. ಅಲ್ಲದೇ ಮಾಹಿತಿ ಕೊರತೆಯಿಂದ ಸಾಕಷ್ಟು ವಾಹನ ಸವಾರರು ಫಾಸ್ಟ್ಟ್‌ಟ್ಯಾಗ್ ಅಳವಡಿಸಿಕೊಂಡಿಲ್ಲ. ಹೀಗಾಗಿ ಜನವರಿ 15ರ ತನಕ ಫಾಸ್ಟ್ಟ್‌ಟ್ಯಾಗ್‌ ಅಳವಡಿಕೆಗೆ ಕೇಂದ್ರ ಡೆಡ್‌ಲೈನ್‌ ವಿಸ್ತರಿಸಲಾಗಿದೆ.

ಜನವರಿ 15 ರ ತನಕ ಗಡುವು ವಿಸ್ತರಣೆ ಮಾಡಿರುವ ಕೇಂದ್ರ ಹೆದ್ದಾರಿ ಪ್ರಾಧಿಕಾರ ಮೊದಲ ಹಂತದಲ್ಲಿ ಪ್ರತಿ ಟೋಲ್‍ನ ಶೇ.75ರಷ್ಟು ಗೇಟ್ ಗಳಿಕೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿ, ಶೇ.25ರಷ್ಟು ಗೇಟ್​ಗಳಲ್ಲಿ ನಗದು ಸ್ವೀಕರಿಸುವಂತೆ ತಿಳಿಸಿದೆ. ಅಲ್ಲದೇ ಶೇ.25ರಷ್ಟು ಗೇಟ್‍ಗಳನ್ನು ಹಂತ ಹಂತವಾಗಿ ಫಾಸ್ಟ್ ಟ್ಯಾಗ್​ಗೆ ಒಳಪಡಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ. ಆರ್‌ಎಫ್‌ಐಡಿ ಕೊರತೆಯಿಂದ ಕೇಂದ್ರ ಫಾಸ್ಟ್‌ಟ್ಯಾಗ್‌ ಅಳವಡಿಕೆ ಜನವರಿ 15ರ ತನಕ ಗಡುವು ವಿಸ್ತರಿಸಿದೆ. ಇದು ವಾಹನ ಸವಾರರಿಗೆ ಬಿಗ್ ರಿಲೀಫ್ ನೀಡಿದಂತು ಸುಳ್ಳಲ್ಲ.

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ