AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ, ಅವಳ ಹತ್ಯೆ ಮಾಡಿಬಿಟ್ಟ- ಅಸಲಿ ಕಾರಣ ತಿಳಿದರೆ ಶಾಕ್!

Hyderabad: ಕಳೆದ ಶುಕ್ರವಾರ ಆಗಸ್ಟ್​ 18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶಾಲೆ ಮುಗಿಸಿ ಬಹಳ ಹೊತ್ತಾದರೂ ಮಗು ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಚಂದ್ರಶೇಖರನಿಗೆ ಕರೆ ಮಾಡಿದರು. ಮಗು ಮಲಗಿದೆ ಎಂದು ಹೇಳಿದ್ದಾನೆ. ಮುಂದೆ... ತನ್ನ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದಾನೆ. ಹತ್ಯೆ ಮಾಡಿದ ನಂತರ ಆತ ಔಟರ್​ ರಿಂಗ್​ ರೋಡ್​​ನಲ್ಲಿ (ಓಆರ್‌ಆರ್‌) ಕಾರಿನಲ್ಲಿ ಶವವನ್ನು ಸಾಗಿಸಿ, ಪೇಟಾ ಮತ್ತು ಕೊಹೆಡಾ ನಡುವೆ ಎಲ್ಲಿಯಾದರೂ ಶವವನ್ನು ಬಿಸಾಕಲು ಜಾಗ ಹುಡುಕಾಡಿದ್ದಾನೆ. ಅಷ್ಟೇ..

ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ, ಅವಳ ಹತ್ಯೆ ಮಾಡಿಬಿಟ್ಟ- ಅಸಲಿ ಕಾರಣ ತಿಳಿದರೆ ಶಾಕ್!
ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ನಾಟಕವಾಡಿದ ತಂದೆ
ಸಾಧು ಶ್ರೀನಾಥ್​
|

Updated on: Aug 21, 2023 | 2:44 PM

Share

ತಂತ್ರಜ್ಞಾನ ಯುಗದಲ್ಲೂ ಜನರು ಮೂಢನಂಬಿಕೆಗಳನ್ನು ಬಿಡುತ್ತಿಲ್ಲ. ಅಮವಾಸ್ಯೆಯಂದು ಕ್ಷುದ್ರ ಪೂಜೆ, ನರಬಲಿಯಂತಹ ದುಷ್ಕೃತ್ಯಗಳು ನಡೆಯುತ್ತವೆ. ಈ ಮಧ್ಯೆ ಮಗಳ ಜಾತಕ ಚೆನ್ನಾಗಿಲ್ಲ, ಮುಂದೆ ಅವಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದ ತಂದೆಯೊಬ್ಬ ಮಗಳನ್ನು ಅತ್ಯಂತ ಬರ್ಬರವಾಗಿ ಕೊಂದಿದ್ದಾನೆ. ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದೆ. ವಿಜಯವಾಡ ಮೂಲದ ಕುಂದೇಟಿ ಚಂದ್ರಶೇಖರ್ (father) ಮತ್ತು ಹಿಮಬಿಂದು ದಂಪತಿಗೆ ಎಂಟು ವರ್ಷದ ಮೋಕ್ಷಜ (daughter) ಮಗುವಿದೆ. ಇಬ್ಬರೂ ಹೈದರಾಬಾದಿನಲ್ಲಿ (Hyderabad) ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ ತಮ್ಮ ಕೆಲಸವನ್ನು ಕಳಪೆಯಾಗಿ ಮಾಡುತ್ತಿದ್ದಕ್ಕಾಗಿ ಕಂಪನಿ ಅವರನ್ನು ವಜಾಗೊಳಿಸಿತು. ತಾನು ಕೆಲಸ ಕಳೆದುಕೊಂಡಿದ್ದಕ್ಕೆ ಹೆಂಡತಿಯೇ ಕಾರಣ ಎಂದು ಮೊದಲು ಅವಳತ್ತ ಕಣ್ಣು ಹಾಯಿಸಿದ ಪತಿ. ಈ ಬಗ್ಗೆ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ. ಇದರ ಕಾಟ ತಾಳದೆ, ಪತ್ನಿ ತನ್ನ ಮಗಳನ್ನು ಕರೆದುಕೊಂಡು ಬಿಎಚ್‌ಎಸ್‌ಇಎಲ್‌ನಲ್ಲಿರುವ ತನ್ನ ತವರು ಮನೆ ಸೇರಿಕೊಂಡಿದ್ದಳು. ಚಂದ್ರಶೇಖರ್ ಹೆಂಡತಿ ತವರಿಗೆ ಹೋಗಿ ವಾರಕ್ಕೆ ಎರಡು ಬಾರಿ ಮಗಳನ್ನು ಭೇಟಿಯಾಗುತ್ತಿದ್ದ. ಆ ಸಂದರ್ಭದಲ್ಲಿ ಮಗಳ ಜಾತಕ ತಿಳಿದುಕೊಂಡಿದ್ದಾನೆ. ಮುಂದೆ ಆಕೆ ಕಷ್ಟಗಳನ್ನು ಅನುಭವಿಸುತ್ತಾಳೆ ಎಂದು ತಿಳಿದುಕೊಂಡ ಅಪ್ಪ, ತನ್ನ ಮಗಳು ಮುಂದೆ ಕಷ್ಟ ಪಡುವುದು ಬೇಡವೆಂದು, ಹೆಂಡತಿಯೇ ಒಂಟಿಯಾಗಿ ನರಕ ನೋಡಬೇಕು ಎಂಬ ಆಲೋಚನೆಯಿಂದ ಮೋಕ್ಷಜಳನ್ನು ಸಾಯಿಸಲು ನಿರ್ಧರಿಸಿದ್ದಾನೆ.

ಕಳೆದ ಶುಕ್ರವಾರ ಆಗಸ್ಟ್​ 18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಶಾಲೆ ಮುಗಿಸಿ ಬಹಳ ಹೊತ್ತಾದರೂ ಮಗು ಮನೆಗೆ ಬಂದಿರಲಿಲ್ಲ. ಕುಟುಂಬಸ್ಥರು ಚಂದ್ರಶೇಖರನಿಗೆ ಕರೆ ಮಾಡಿದರು. ಮಗು ಮಲಗಿದೆ ಎಂದು ಹೇಳಿದ್ದಾನೆ. ಮುಂದೆ… ತನ್ನ ಫೋನ್ ಸ್ವಿಚ್ ಆಫ್ ಮಾಡಿಟ್ಟುಕೊಂಡಿದ್ದಾನೆ. ಹತ್ಯೆ ಮಾಡಿದ ನಂತರ ಆತ ಔಟರ್​ ರಿಂಗ್​ ರೋಡ್​​ನಲ್ಲಿ (ಓಆರ್‌ಆರ್‌) ಕಾರಿನಲ್ಲಿ ಶವವನ್ನು ಸಾಗಿಸಿ, ಪೇಟಾ ಮತ್ತು ಕೊಹೆಡಾ ನಡುವೆ ಎಲ್ಲಿಯಾದರೂ ಶವವನ್ನು ಬಿಸಾಕಲು ಜಾಗ ಹುಡುಕಾಡಿದ್ದಾನೆ. ಅಷ್ಟೇ.. ಸರಿಯಾಗಿ ಅದೇ ವೇಳೆ ದಾರಿ ಮಧ್ಯೆ ರಾತ್ರಿ ಹತ್ತೂವರೆ ಗಂಟೆಗೆ ಅಪ್ಪನ ಟೈರ್ ಒಡೆದು ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಇದನ್ನೂ ಓದಿ: ಹಳೆ KSRTC ಬಸ್‌ಗಳಿಗೆ ಹೊಸ ಕಳೆ: ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಬಸ್, ವಿಶೇಷತೆ ಏನು ಗೊತ್ತಾ?

ಕಾರಿನಲ್ಲಿದ್ದ ಅಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿದ್ದವರು ಸಹಾಯಕ್ಕಾಗಿ ಚಂದ್ರಶೇಖರ್ ಬಳಿಗೆ ತೆರಳಿ, ಆತನನ್ನು ಗಮನಿಸಿದ್ದಾರೆ. ಸಹಾಯಕ್ಕಾಗಿ ಹೋದ ಆ ಸ್ಥಳೀಯರು ಚಂದ್ರಶೇಖರ್ ಅವರ ಬಟ್ಟೆಯ ಮೇಲೆ ರಕ್ತದ ಕಲೆಗಳನ್ನು ಕಂಡು ಕಾರಿನಲ್ಲಿ ಕಣ್ಣುಹಾಯಿಸಿದ್ದಾರೆ. ಅಲ್ಲಿ ಮಗುವಿನ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರೊಂದಿಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?