Sign In

By signing in or creating an account, you agree with Associated Broadcasting Company's Terms & Conditions and Privacy Policy.

Wheat Sale: ಇ-ಹರಾಜಿನಲ್ಲಿ ಎರಡೇ ದಿನದಲ್ಲಿ 9 ಲಕ್ಷ ಟನ್ ಗೋಧಿ ಮಾರಾಟ

e-Auction of Wheat: ಇ-ಹರಾಜಿನಲ್ಲಿ ಭಾರತೀಯ ಆಹಾರ ನಿಗಮ (ಎಫ್​ಸಿಐ) ಎರಡು ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಟನ್​ಗಳಷ್ಟು ಗೋಧಿ ಧಾನ್ಯವನ್ನು ಮಾರಾಟ ಮಾಡಿದೆ. ಗೋಧಿ ಬೆಲೆ ಏರಿಕೆಯಾಗದಂತೆ ನಿಯಂತ್ರಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ.

Wheat Sale: ಇ-ಹರಾಜಿನಲ್ಲಿ ಎರಡೇ ದಿನದಲ್ಲಿ 9 ಲಕ್ಷ ಟನ್ ಗೋಧಿ ಮಾರಾಟ
ಗೋಧಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Feb 03, 2023 | 3:17 PM

ನವದೆಹಲಿ: ಹರಾಜಿನಲ್ಲಿ ಭಾರತೀಯ ಆಹಾರ ನಿಗಮ (FCI- Food Corporation of India) ಎರಡು ದಿನದಲ್ಲಿ 9 ಲಕ್ಷಕ್ಕೂ ಹೆಚ್ಚು ಟನ್​ಗಳಷ್ಟು ಗೋಧಿ ಧಾನ್ಯವನ್ನು ಮಾರಾಟ ಮಾಡಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿ 22 ಲಕ್ಷ ಟನ್​ಗಳಷ್ಟು ಗೋಧಿಯನ್ನು ಸಂಗ್ರಹಿಸಿ ಕೇಂದ್ರ ಸರ್ಕಾರ ಇಆಕ್ಷನ್​ಗೆ (e Auction) ಇಟ್ಟಿದೆ. ಈ ಪೈಕಿ 9.2 ಲಕ್ಷ ಟನ್​ಗಳಷ್ಟು ಗೋದಿ ಎರಡು ದಿನದಲ್ಲಿ ಮಾರಾಟವಾಗಿದೆ.

ದೇಶಾದ್ಯಂತ ಇಹರಾಜು ನಡೆಯುತ್ತಿದೆ. ಆರಂಭದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಿಡ್ಡರ್​ಗಳು ಹರಾಜಿನಲ್ಲಿ ಪಾಲ್ಗೊಂಡಿರುವುದು ತಿಳಿದುಬಂದಿದೆ. ಪ್ರತೀ ಬುಧವಾರ ಗೋಧಿ ಮಾರಾಟಕ್ಕೆ ಇ ಹರಾಜು ನಡೆಯಲಿದೆ. ಇದು ಮಾರ್ಚ್ ಎರಡನೇ ವಾರದವರೆಗೂ ಮುಂದುವರಿಯಲಿದೆ.

ಗೋಧಿ ಬೆಲೆ ದುಬಾರಿಯಾಗುವುದನ್ನು ತಪ್ಪಿಸಲು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಇಹರಾಜಿನ ವ್ಯವಸ್ಥೆ ಮಾಡಿದೆ. ಮೊದಲ ವಾರದಲ್ಲೇ ಇದರ ಪರಿಣಾಮ ಎದ್ದು ಕಾಣುತ್ತಿದ್ದು, ಗೋಧಿ ಬೆಲೆಯಲ್ಲಿ ಶೇ. 10ಕ್ಕೂ ಹೆಚ್ಚು ಇಳಿಕೆ ಆಗಿದೆ ಎಂಬ ಮಾಹಿತಿಯನ್ನು ಸಚಿವಾಲಯ ನೀಡಿದೆ.

ಇದನ್ನೂ ಓದಿ: Toyota Car: ಭಾರತದ ಈ ಟೆಕ್ ಕಂಪನಿ ಉದ್ಯೋಗಿಗಳಿಗಿಲ್ಲ ವಜಾ ಭೀತಿ; ಸಿಕ್ಕಿತು ಟೊಯೊಟಾ ಕಾರು ಉಡುಗೊರೆ!

ಬೆಲೆ ತೀರಾ ಹೆಚ್ಚಳವಾದರೆ ರೈತರು ತಮ್ಮ ಗೋದಿಯನ್ನು ಎಫ್​ಸಿಐಗೆ ಮಾರುವುದಕ್ಕೆ ಮುಂದೆ ಬರದೇಹೋಗಬಹುದು. ಹೀಗಾದಲ್ಲಿ ಸರ್ಕಾರಕ್ಕೆ ಗೋಧಿ ಖರೀದಿ ಕಷ್ಟವಾಗುತ್ತದೆ ಎಂಬ ಲೆಕ್ಕಾಚಾರವೂ ಗೋಧಿ ಹರಾಜಿನ ಕ್ರಮದ ಹಿಂದಿದೆ. ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿ ಒಟ್ಟು 3 ಕೋಟಿ ಟನ್​ಗಳಷ್ಟು ಗೋದಿಯನ್ನು ಮಾರುವುದಾಗಿ ಜನವರಿ 25ರಂದು ಆಹಾರ ನಿಗಮ ಹೇಳಿತ್ತು. ಆಗಲೇ ಗೋಧಿ ಬೆಲೆ ಶೇ. 6ರಷ್ಟು ಇಳಿಕೆ ಕಂಡಿತ್ತು.

ಫುಡ್ ಕಾರ್ಪೊರೇಶನ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿ ಮಾಡುತ್ತದೆ. ಸಾಮಾನ್ಯವಾಗಿ ಇವುಗಳು ಸರ್ಕಾರದ ವಿವಿಧ ಆಹಾರ ಯೋಜನೆಗಳಿಗೆ ಬಳಕೆ ಆಗುತ್ತವೆ. ದೇಶದಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಾದ ಸಂದರ್ಭದಲ್ಲಿ ಆಹಾರ ನಿಗಮ ತನ್ನಲ್ಲಿರುವ ಕೆಲ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು.

Published On - 3:03 pm, Fri, 3 February 23

VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
VIDEO: ಗುಜರಾತ್ ಟೈಟಾನ್ಸ್​ ತಂಡಕ್ಕೆ ಸ್ಕೂಟರ್​ನಲ್ಲಿ ಸಿರಾಜ್ ಎಂಟ್ರಿ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಹುಲಿಗೆಮ್ಮ ದೇವಸ್ಥಾನ ಹುಂಡಿ ಎಣಿಕೆ: 40 ದಿನಗಳಲ್ಲಿ 99 ಲಕ್ಷ ರೂ. ಸಂಗ್ರಹ
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಯಾವ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸುವುದಿಲ್ಲ ಅಂತ ನಿಮಗೆ ಗೊತ್ತಾ?
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಚಂದ್ರ ಸಿಂಹ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಕೆಟ್ಟು ಹೋದ ಸಾರಿಗೆ ಬಸ್​ ವೈಪರ್: ಮಳೆಯಲ್ಲಿ ಚಲಾಯಿಸಲು ಪರದಾಡಿದ ಚಾಲಕ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಮೃಗಾಲಯದ ಪ್ರಾಣಿಗಳಿಗೂ ತಟ್ಟಿದ ಬೇಸಿಗೆ ಬಿಸಿ: ಸ್ಪ್ರಿಂಕ್ಲರ್ ವ್ಯವಸ್ಥೆ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಬಜೆಟ್​ ಅಧಿವೇಶನ ಸಂದರ್ಭದಲ್ಲೇ ವಿಧಾನಸೌಧಕ್ಕೆ ಬಂದ ಬುಸ್​ ಬುಸ್ ನಾಗಪ್ಪ..!
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್
ಸಿಎಂ ನೀಡಿರುವ ಸ್ಪಷ್ಟನೆ ರಾಜ್ಯದ ಜನತೆಗೆ ನೆಮ್ಮದಿ ನೀಡಿದೆ: ಸ್ಪೀಕರ್