ಯೋಧರ ಮಧ್ಯೆ‌ ಘರ್ಷಣೆ.. ಓರ್ವ ಯೋಧನ ಸಾವು, ಇಬ್ಬರಿಗೆ ಗಾಯ

ಕ್ಷುಲ್ಲಕ ಕಾರಣಕ್ಕೆ ಕ್ಯಾಂಪ್​ನಲ್ಲಿ ಮೂವರು ಯೋಧನ ನಡುವೆ ಜಗಳ ಉಂಟಾಗಿದೆ. ಆ ಗಲಾಟೆ ತಾರಕ್ಕೇರಿದ್ದು ಮೂವರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಘರ್ಷಣೆಯಲ್ಲಿ ಯೋಧ ಪ್ರಮೋದ್​ ಕುಮಾರ್​ ಮೃತಪಟ್ಟಿದ್ದು ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಯೋಧರ ಮಧ್ಯೆ‌ ಘರ್ಷಣೆ.. ಓರ್ವ ಯೋಧನ ಸಾವು, ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Jan 29, 2021 | 3:34 PM

ಛತ್ತೀಸ್​​ಗಢ​​: ಯೋಧರ ಮಧ್ಯೆ‌ ಘರ್ಷಣೆ ಉಂಟಾಗಿ ಓರ್ವ ಮೃತಪಟ್ಟಿದ್ದು ಇಬ್ಬರಿಗೆ ಗಾಯವಾಗಿರುವ ಘಟನೆ ಛತ್ತೀಸ್​​ಗಢದ ಬಸ್ತಾರ್​ ಜಿಲ್ಲೆಯಲ್ಲಿ ನಡೆದಿದೆ. ಕ್ಯಾಂಪ್​ನಲ್ಲಿ ಒಬ್ಬರ ಮೇಲೊಬ್ಬರು ಪರಸ್ಪರ ಗುಂಡು ಹಾರಿಸಿಕೊಂಡು ಯೋಧರು ಘರ್ಷಣೆ ಮಾಡಿಕೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಕ್ಯಾಂಪ್​ನಲ್ಲಿ ಮೂವರು ಯೋಧನ ನಡುವೆ ಜಗಳ ಉಂಟಾಗಿದೆ. ಆ ಗಲಾಟೆ ತಾರಕ್ಕೇರಿದ್ದು ಮೂವರು ಪರಸ್ಪರ ಗುಂಡು ಹಾರಿಸಿಕೊಂಡಿದ್ದಾರೆ. ಘರ್ಷಣೆಯಲ್ಲಿ ಯೋಧ ಪ್ರಮೋದ್​ ಕುಮಾರ್​ ಮೃತಪಟ್ಟಿದ್ದು ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳು ಯೋಧರನ್ನು ರಾಯಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಸ್ತರ‌ಜಿಲ್ಲಾ ಕೇಷಕಾಲ್ 241 CRPF ಬೆಟಾಲಿಯನ್​ಗೆ ಸೇರಿದ ಯೋಧರು, ಇನ್ನು ಘಟನೆ ವೇಳೆ ಗುಂಡು ಹಾರಿಸಿದ್ದು ಗಿರೀಶ್ ಕುಮಾರ್ ಎಂದು ತಿಳಿದು ಬಂದಿದ್ದು ಆತನನ್ನು ಬಂಧಿಸಲಾಗಿದೆ. ಘಟನೆ ನಂತರ ಕ್ಯಾಂಪ್​ನಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಒಂದೇ ಜೀವನ-ಮೂರು ಬದುಕು! ಈ ‘‘ಕೃಷಿ ಯೋಧ’’ನ ಸಾಧನೆ ಎಲ್ಲರಿಗೂ ಮಾದರಿ..

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us