AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Osmania Biscuits: ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು ಅದ ತಿಂದರೆ ಸೀದಾ ಉಸ್ಮಾನಿಯಾ ಆಸ್ಪತ್ರೆಗೆ ಹೋಗಬೇಕಾದೀತು!

Hyderabad Osmania Biscuits: ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸತ್ಯಾಸತ್ಯತೆ ಮತ್ತು ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಅಧಿಕಾರಿಗಳು ಫೀಲ್ಡ್​​ ವರ್ಕ್​​​ಗೆ ಇಳಿದಿದ್ದಾರೆ. ಸುಮಾರು 35 ಸಾವಿರ ರೂ. ಮೌಲ್ಯದ ಉಸ್ಮಾನಿಯಾ ಬಿಸ್ಕತ್ ದಾಸ್ತಾನು ವಶಪಡಿಸಿಕೊಂಡಿದ್ದಾರೆ. ನಿಜವಾಗಿ ಏನಾಯಿತೆಂದರೆ, ಕಳೆದ ವಾರಾಂತ್ಯ ಹೈದರಾಬಾದಿನ ಮಿಯಾಪುರದಲ್ಲಿ ವಿನಯ್ ವಂಗಾಲ ಎಂಬ ಯುವಕ ಉಸ್ಮಾನಿಯಾ ಬಿಸ್ಕತ್ ಪ್ಯಾಕೆಟ್ ಖರೀದಿಸಿದ್ದ. ಆದರೆ ಅದು ತಿನ್ನುತ್ತಿದ್ದಾಗ ಬಿಸ್ಕೆಟ್ ನಲ್ಲಿ ನೊಣವಿತ್ತು!

Osmania Biscuits: ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು ಅದ ತಿಂದರೆ ಸೀದಾ ಉಸ್ಮಾನಿಯಾ ಆಸ್ಪತ್ರೆಗೆ ಹೋಗಬೇಕಾದೀತು!
ಉಸ್ಮಾನಿಯಾ ಬಿಸ್ಕೆಟ್ ತಿನ್ನುತ್ತೀರಾ? ಹುಷಾರು
ಸಾಧು ಶ್ರೀನಾಥ್​
|

Updated on: Sep 05, 2023 | 2:09 PM

Share

ಹೈದರಾಬಾದ್, ಸೆಪ್ಟೆಂಬರ್ 5: ಬಿರಿಯಾನಿ ಜೊತೆಗೆ ಉಸ್ಮಾನಿಯಾ ಬಿಸ್ಕತ್ ಸಹ ಹೈದರಾಬಾದ್ ನ ಜನರಿಗೆ ಮತ್ತು ಪ್ರವಾಸಿಗರಿಗೆ ಬಹಳ ಪರಿಚಿತವಾಗಿದೆ. ಉಸ್ಮಾನಿಯಾ ಬಿಸ್ಕತ್‌ಗಳು ತುಂಬಾ ರುಚಿಯಾಗಿರುವುದರಿಂದ ಅದನ್ನು ತಿನ್ನಲು ಇಷ್ಟಪಡುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸತ್ಯ ತಿಳಿದರೆ ಇನ್ನು ಮುಂದೆ ಹಾಗೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸತ್ಯಾಸತ್ಯತೆ ಮತ್ತು ಸ್ವಚ್ಛತೆ ಪಾಲಿಸುತ್ತಿಲ್ಲ ಎಂದು ಅಧಿಕಾರಿಗಳು ಫೀಲ್ಡ್​​ ವರ್ಕ್​​​ಗೆ ಇಳಿದಿದ್ದಾರೆ. ಸುಮಾರು 35 ಸಾವಿರ ರೂ. ಮೌಲ್ಯದ ಉಸ್ಮಾನಿಯಾ ಬಿಸ್ಕತ್ (Osmania Biscuits) ದಾಸ್ತಾನು ವಶಪಡಿಸಿಕೊಂಡಿದ್ದಾರೆ. ನಿಜವಾಗಿ ಏನಾಯಿತೆಂದರೆ, ಕಳೆದ ವಾರಾಂತ್ಯ ಹೈದರಾಬಾದಿನ ಮಿಯಾಪುರದಲ್ಲಿ ವಿನಯ್ ವಂಗಾಲ ಎಂಬ ಯುವಕ ಉಸ್ಮಾನಿಯಾ ಬಿಸ್ಕತ್ ಪ್ಯಾಕೆಟ್ ಖರೀದಿಸಿದ್ದ. ಆದರೆ ಅದು ತಿನ್ನುತ್ತಿದ್ದಾಗ ಬಿಸ್ಕೆಟ್ ಒಂದರಲ್ಲಿ ನೊಣ (Fly) ಇರುವುದನ್ನು ವಿನಯ್ ಗಮನಿಸಿದ್ದಾನೆ. ಅಷ್ಟೇ.. ತಕ್ಷಣ ತಮ್ಮ ಟ್ವಿಟರ್ ಖಾತೆಯಿಂದ ಸ್ಥಳೀಯ ಆಹಾರ ನಿರೀಕ್ಷಕರು ಹಾಗೂ ಆಹಾರ ಸುರಕ್ಷತಾ ಆಯುಕ್ತರಿಗೆ ಆತ ದೂರು ನೀಡಿದ್ದಾರೆ.

ವಿನಯ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಸಹಾಯಕ ಆಹಾರ ನಿಯಂತ್ರಕ ಅಧಿಕಾರಿಗಳು ಭಾನುವಾರ ಮಿಯಾಪುರದ ಅಂಗಡಿಯಲ್ಲಿ ತಪಾಸಣೆ ನಡೆಸಿದರು. ತಪಾಸಣೆಯ ಭಾಗವಾಗಿ, ಅಧಿಕಾರಿಗಳು ಮಾದರಿಗಳನ್ನು ತೆಗೆದುಕೊಂಡು ತಕ್ಷಣವೇ 36,000 ರೂಪಾಯಿ ಮೌಲ್ಯದ ಉಸ್ಮಾನಿಯಾ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ವಿನಯ್ ಟ್ವೀಟ್ ಗೆ ಸ್ಪಂದಿಸಿದ್ದಾರೆ.

ಮತ್ತೊಂದೆಡೆ, ಅಧಿಕಾರಿಗಳು ಉಸ್ಮಾನಿಯಾ ಬಿಸ್ಕತ್ ದಾಸ್ತಾನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ, ನಗರದ ಅನೇಕ ನೆಟ್ಟಿಗರು ಹೈದರಾಬಾದ್‌ನಾದ್ಯಂತ ಇಂತಹ ಅನೇಕ ಅಂಗಡಿಗಳಿದ್ದು, ಅವುಗಳನ್ನೂ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಕೇಳುತ್ತಿದ್ದಾರೆ. ಅಲ್ಲದೆ, ಉಸ್ಮಾನಿಯಾ ಬಿಸ್ಕತ್ ತಯಾರಿಕೆಯಲ್ಲಿ ಸ್ವಚ್ಛತೆ ಎಷ್ಟರಮಟ್ಟಿಗೆ ಅಧ್ವಾನವಾಗಿರುತ್ತದೆ ಎಂಬುದು ಗೊತ್ತಿದೆ, ತಯಾರಕರು ತಮ್ಮ ಕೈಗೆ ಕನಿಷ್ಠ ಗ್ಲೌಸೂ ಹಾಕಿಕೊಂಡಿರುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಅಧಿಕಾರಿಗಳ ಪ್ರತಿಕ್ರಿಯೆ ಶ್ಲಾಘನೀಯ ಎಂದೂ ಹಲವರು ಪ್ರತಿಕ್ರಿಯಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?