AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಬಜೆಟ್​ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ

ಬಜೆಟ್​ ಪೇಪರ್​ ಪ್ರಿಂಟ್​ಗೆ ಹೋಗುವ ಮೊದಲು ಪ್ರತಿವರ್ಷ ಹಲ್ವಾ ಸಮಾರಂಭ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಬಜೆಟ್​ ಪೇಪರ್​ ಪ್ರಿಂಟ್ ಆಗುತ್ತಿಲ್ಲ. ಅದರ ಬದಲು ಇಂದು ನಿರ್ಮಲಾ ಸೀತಾರಾಮನ್​ ಯೂನಿಯನ್ ಬಜೆಟ್​ ಮೊಬೈಲ್​ ಆ್ಯಪ್​ನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಬಜೆಟ್​ ಮಂಡನೆಗೆ ಇನ್ನೊಂದು ವಾರ ಬಾಕಿ; ಪೂರ್ವಭಾವಿಯಾಗಿ ನಡೆದ ಹಲ್ವಾ ಸಮಾರಂಭ, ಮೊಬೈಲ್ ಆ್ಯಪ್ ಉದ್ಘಾಟನೆ
ಹಲ್ವಾ ಸಮಾರಂಭದಲ್ಲಿ ಪಾಲ್ಗೊಂಡ ನಿರ್ಮಲಾ ಸೀತಾರಾಮನ್​, ಅನುರಾಗ್ ಠಾಕೂರ್ ಇತರರು..
Lakshmi Hegde
| Edited By: |

Updated on: Jan 23, 2021 | 6:53 PM

Share

ನವದೆಹಲಿ: ಬಜೆಟ್​ ಪೂರ್ವಭಾವಿಯಾಗಿ ಪ್ರತಿವರ್ಷವೂ ನಡೆಯುವ ಹಲ್ವಾ ಸಮಾರಂಭ ಇಂದು ನಡೆಯಿತು. 2021-22ನೇ ಸಾಲಿನ ಬಜೆಟ್​ನ್ನು ಫೆ.1ರಂದು ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆಯವ್ಯಯ ಮಂಡಿಸಲಿದ್ದಾರೆ.

ಬಜೆಟ್​ ಪೂರ್ವ 7-10 ದಿನ ಮೊದಲು ಹಲ್ವಾ ತಯಾರಿಸುವ ಸಂಪ್ರದಾಯ ಸುಮಾರು 70 ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಇಂದು ಕೂಡ ಉತ್ತರ ಬ್ಲಾಕ್​ನಲ್ಲಿ ನಡೆದ ಹಲ್ವಾ ತಯಾರಿಕೆ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಹಲ್ವಾವನ್ನು ನಂತರ ಹಣಕಾಸು ಇಲಾಖೆಯ ಎಲ್ಲ ಸಿಬ್ಬಂದಿಗೂ ಹಂಚಲಾಯಿತು.

ಬಜೆಟ್​ ಪೇಪರ್​ ಪ್ರಿಂಟ್​ಗೆ ಹೋಗುವ ಮೊದಲು ಪ್ರತಿವರ್ಷ ಹಲ್ವಾ ಸಮಾರಂಭ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಕಾರಣದಿಂದ ಬಜೆಟ್​ ಪೇಪರ್​ ಪ್ರಿಂಟ್ ಆಗುತ್ತಿಲ್ಲ. ಅದರ ಬದಲು ಇಂದು ನಿರ್ಮಲಾ ಸೀತಾರಾಮನ್​ ಯೂನಿಯನ್ ಬಜೆಟ್​ ಮೊಬೈಲ್​ ಆ್ಯಪ್​ನ್ನು ಬಿಡುಗಡೆ ಮಾಡಿದ್ದಾರೆ. ಈ ಆ್ಯಪ್ ಮೂಲಕ ಜನಸಾಮಾನ್ಯರೂ ಬಜೆಟ್​ ಕಾಪಿಗಳನ್ನು ನೋಡಬಹುದಾಗಿದೆ.

ತಮಿಳುನಾಡಿನ ಜನ, ಸಂಸ್ಕೃತಿಯ ಮೇಲೆ ಪ್ರಧಾನಿ ಮೋದಿಗಿಲ್ಲ ಗೌರವ, ಆದರೆ ನನಗಿದು ಕುಟುಂಬದಂತೆ!: ರಾಹುಲ್ ಗಾಂಧಿ

Follow Us
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು