AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫುಡ್ ಚಾಲೆಂಜ್! ಜಸ್ಟ್​ ಈ ಗರಿಗರಿಯಾದ ದೋಸೆ ತಿನ್ನಿರಿ, ಬಂಪರ್ ಬಹುಮಾನ ಗೆಲ್ಲಿರಿ!

ಏನು ಮನೆಯಲ್ಲಿ ಅಮ್ಮ ಹಾಕುವ ದೋಸೆಗಳಲ್ಲಿ ಹತ್ತಾರು ತಿನ್ನುವೆ ಎಂದಿರಾ!? ಹಾಗಾದರೆ ಈ ಹೋಟೆಲಿನಲ್ಲಿ ಕೊಡುವ ಈ ವಿಶೇಷ ದೋಸೆಯನ್ನು ತಿಂದರೆ, ನಿಮಗೆ ಭರ್ಜರಿ ಬಹುಮಾನ ಕೊಡುತ್ತಾರೆ!

ಫುಡ್ ಚಾಲೆಂಜ್! ಜಸ್ಟ್​ ಈ ಗರಿಗರಿಯಾದ ದೋಸೆ ತಿನ್ನಿರಿ, ಬಂಪರ್  ಬಹುಮಾನ ಗೆಲ್ಲಿರಿ!
ಗರಿಗರಿಯಾದ ದೋಸೆ ತಿನ್ನಿರಿ, ಬಹುಮಾನ ಗೆಲ್ಲಿರಿ!
ಸಾಧು ಶ್ರೀನಾಥ್​
|

Updated on: Aug 05, 2023 | 3:27 PM

Share

ವೈರಲ್ ಆಗಿರುವ ಈ ವಿಡಿಯೋಗೆ ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಏಕಾಂಗಿಯಾಗಿ ತಿನ್ನಲು ತೀವ್ರ ಹಿಂಜರಿಕೆಯನ್ನು ವ್ಯಕ್ತಪಡಿಸಿದರು. ಇದು ಒಳ್ಳೆಯ ಅವಕಾಶ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ. ನೀವು ಹಣವನ್ನು ಇಟ್ಟುಕೊಳ್ಳಿ.. ದೋಸೆ ಅನೇಕ ಜನರ ನೆಚ್ಚಿನ ಉಪಹಾರವಾಗಿದೆ. ಹೆಚ್ಚು ಮಸಾಲೆ ಇಲ್ಲದ ಮೃದುವಾದ ಮತ್ತು ಗರಿಗರಿಯಾದ ದೋಸೆಯು ಆಹಾರ ಪ್ರಿಯರಿಗೆ ಬಾಯಲ್ಲಿ ನೀರೂರಿಸುವ ಉಪಹಾರವಾಗಿದೆ. ಆದರೆ ಇಷ್ಟವಾದ ದೋಸೆ ತಿಂದರೆ ಬಹುಮಾನ ಸಿಗುತ್ತೆ ಗೊತ್ತಾ? ಹೌದು ನೀವು ಓದಿದ್ದು ಸರಿ. ದಕ್ಷಿಣ ಭಾರತದ ಪ್ರಮುಖ ಉಪಹಾರಗಳಲ್ಲಿ ದೋಸೆಯೂ ಒಂದು. ಅವರು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲೂ ದೋಸೆ ತಿನ್ನಲು ಇಷ್ಟಪಡುತ್ತಾರೆ. ಸಾದಾ ದೋಸೆ, ಸೆಟ್ ದೋಸೆ, ರವಾ ದೋಸೆ, ಮಸಾಲೆ ದೋಸೆ, ಈರುಳ್ಳಿ ದೋಸೆ ಹೀಗೆ ಒಂದೆರಡಲ್ಲ.. ಹಲವಾರು ವೆರೈಟಿಗಳಿವೆ.. ಎಷ್ಟೋ ಜನ ದೋಸೆ ತಿನ್ನಲು ಇಷ್ಟಪಡುತ್ತಾರೆ. ಬಹುತೇಕ ಹೋಟೆಲುಗಳಲ್ಲಿ ನೀವು ಹಣ ಕೊಟ್ಟು ದೋಸೆ ತಿನ್ನಬೇಕು.. ಆದರೆ ಈ ಹೋಟೆಲಿನಲ್ಲಿ ದೋಸೆ ತಿಂದರೆ ಅವರೇ ನಿಮಗೆ ದುಡ್ಡು ಕೊಡುತ್ತಾರೆ. ಏನು ಗಾಬರಿಯಿಂದ ಹೌಹಾರಿದಿರಾ? ಆದರೆ ಈ ಸುದ್ದಿಗೊಂದಿಷ್ಟು ಮಸಾಲೆ ಸೇರಿಸಿದ್ದಾರೆ. ಓದಿ ನೋಡಿ.

ದೆಹಲಿಯ ದೋಸೆಗಳಿಗಾಗಿಯೇ ಸ್ಪೆಷಲ್ ಆಗಿರುವ ಹೋಟೆಲೊಂದು ಅಂತಹ ವಿಶೇಷ ದೋಸೆ ಚಾಲೆಂಜ್ ಆಯೋಜಿಸಿದೆ. ಇಲ್ಲಿ 6 ಅಡಿ ಉದ್ದದ ದೋಸೆ ತಿಂದರೆ 11,000 ರೂಪಾಯಿ ಬಹುಮಾನವಾಗಿ ಕೊಡುತ್ತಾರೆ. ಈ ಕುರಿತು Instagram ಬ್ಲಾಗರ್ @pestolicious ಸವಿ ದೋಸೆ ಚಾಲೆಂಜ್ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Video ನೋಡಿ:

ಹೊಸದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ದೋಸೆ ಫ್ಯಾಕ್ಟರಿ ಎಂಬ ಪ್ರಸಿದ್ಧ ದೋಸೆ ರೆಸ್ಟೋರೆಂಟ್‌ನಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ವೈರಲ್ ಪೋಸ್ಟ್ ಆದ ನಂತರ ವೀಡಿಯೊ 5.7 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. 383 ಸಾವಿರ ಲೈಕ್‌ಗಳು ಬಂದಿವೆ. ವೈರಲ್ ವಿಡಿಯೋದಲ್ಲಿ 6 ಅಡಿ ಉದ್ದದ ಈ ದೋಸೆಯ ಮೇಕಿಂಗ್ ಅನ್ನು ಸಹ ತೋರಿಸಲಾಗಿದೆ. ಅಲ್ಲಿ ಏಕಕಾಲಕ್ಕೆ ಮೂರು ದೊಡ್ಡ ದೋಸೆಗಳನ್ನು ತಯಾರಿಸಲಾಯಿತು. ಚೀಸ್ ಜೊತೆಗೆ, ವಿವಿಧ ರೀತಿಯ ಮಸಾಲೆಗಳನ್ನು ಸಹ ಇದಕ್ಕೆ ಸೇರಿಸಲಾಗುತ್ತದೆ. ನಂತರ ಈ ಬೃಹತ್ ದೋಸೆಯನ್ನು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಲಾಗುತ್ತದೆ. ಆದರೆ, ಈ ದೋಸೆಯನ್ನು ಸಂಪೂರ್ಣವಾಗಿ ತಿಂದವರಿಗೆ 11,000 ರೂಪಾಯಿ ನಗದು ಬಹುಮಾನ ನೀಡಲಾಗುತ್ತದೆ. ಇದು ರೆಸ್ಟೋರೆಂಟ್‌ನ ನಿಯಮವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಈ ವಿಡಿಯೋಗೆ ನೆಟಿಜನ್‌ಗಳು ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಅವರಲ್ಲಿ ಕೆಲವರು ಏಕಾಂಗಿಯಾಗಿ ತಿನ್ನಲು ತೀವ್ರ ಹಿಂಜರಿಕೆಯಾಗುತ್ತದೆ ಎಂದಿದ್ದಾರೆ. ಬೇರೊಬ್ಬರು ಇದೊಂದು ಸದವಕಾಶ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಬ್ಬರು, ‘ಅಮ್ಮ ಅಡುಗೆ ಮನೆಯಲ್ಲಿ ದೋಸೆ ಒಯ್ಯುವಾಗ ನಾನು ತವಾದಿಂದ ನೇರವಾಗಿ 20-25 ದೋಸೆ ತಿನ್ನುತ್ತೇನೆ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಈ ರೀತಿ ಫುಡ್ ಚಾಲೆಂಜ್ ಹಾಕಿ ಜನರ ಆರೋಗ್ಯ ಹಾಳು ಮಾಡಬೇಡಿ’ ಎಂದೂ ಮತ್ತೊಬ್ಬ ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ