AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ತಮಾಷೆ ಮಾಡುತ್ತಿದ್ದೀರಾ?: ಅಂಬಿಕಾ ಸೋನಿ, ಚರಣ್‌ಜಿತ್ ಸಿಂಗ್​​ ಚನ್ನಿ ವಿರುದ್ಧ ಸುನೀಲ್ ಜಾಖರ್​​ ಗರಂ

Sunil Jakhar ಒಂದು ಸ್ವತ್ತು - ನೀವು ತಮಾಷೆ ಮಾಡುತ್ತಿದ್ದೀರಾ? ಓಹ್ ದೇವರೇ, ಅವರನ್ನು ಸಿಎಂ ಎಂದು ಮೊದಲು ಪ್ರಸ್ತಾಪಿಸಿದ ಪಿಬಿಐ ಮಹಿಳೆ ಅವರನ್ನು ಸಿಡಬ್ಲ್ಯುಸಿಯಲ್ಲಿ ರಾಷ್ಟ್ರೀಯ ಖಜಾನೆ ಎಂದು ಘೋಷಿಸಿಲ್ಲ.

ನೀವು ತಮಾಷೆ ಮಾಡುತ್ತಿದ್ದೀರಾ?: ಅಂಬಿಕಾ ಸೋನಿ, ಚರಣ್‌ಜಿತ್ ಸಿಂಗ್​​ ಚನ್ನಿ ವಿರುದ್ಧ ಸುನೀಲ್ ಜಾಖರ್​​ ಗರಂ
ಸುನಿಲ್ ಜಾಖರ್
TV9 Web
| Edited By: |

Updated on: Mar 14, 2022 | 9:28 PM

Share

ದೆಹಲಿ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ (PPCC) ಮಾಜಿ ಮುಖ್ಯಸ್ಥ ಸುನೀಲ್ ಜಾಖರ್ (Sunil Jakhar) ಅವರು ಸೋಮವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಅಂಬಿಕಾ ಸೋನಿ ಮತ್ತು ಚರಣ್‌ಜಿತ್ ಸಿಂಗ್ ಚನ್ನಿ(Charanjit Singh Channi) ಅವರನ್ನು ಹೊಣೆಯಾಗಿಸಿದ್ದು ದುರಾಸೆ ಅವರನ್ನು ಕೆಳಕ್ಕೆ ತಳ್ಳಿದೆ ಎಂದು ಹೇಳಿದ್ದಾರೆ.  ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಸೋನಿ ಅವರು ಹೈಕಮಾಂಡ್ ಚನ್ನಿ ಅವರನ್ನು ಸಿಎಂ ಎಂದು ಹೆಸರಿಸಿದ್ದರೂ ರಾಜ್ಯ ನಾಯಕತ್ವ ಬೆಂಬಲಿಸಲಿಲ್ಲ ಎಂದು ಹೇಳಿದ್ದರು. “ಒಂದು ಸ್ವತ್ತು – ನೀವು ತಮಾಷೆ ಮಾಡುತ್ತಿದ್ದೀರಾ? ಓಹ್ ದೇವರೇ, ಅವರನ್ನು ಸಿಎಂ ಎಂದು ಮೊದಲು ಪ್ರಸ್ತಾಪಿಸಿದ ಪಿಬಿಐ ಮಹಿಳೆ ಅವರನ್ನು ಸಿಡಬ್ಲ್ಯುಸಿಯಲ್ಲಿ ರಾಷ್ಟ್ರೀಯ ಖಜಾನೆ ಎಂದು ಘೋಷಿಸಿಲ್ಲ ಎಂದು ಜಾಖರ್ ಟ್ವೀಟ್ ಮಾಡಿದ್ದಾರೆ.  ಅವರಿಗೆ ಆಸ್ತಿಯಾಗಿರಬಹುದು ಆದರೆ ಪಕ್ಷಕ್ಕೆ ಅವರು ಹೊಣೆಗಾರಿಕೆ ಮಾತ್ರ. ಉನ್ನತ ಅಧಿಕಾರಿಗಳಲ್ಲ, ಆದರೆ ಅವರ ಸ್ವಂತ ದುರಾಸೆ ಅವರನ್ನು ಮತ್ತು ಪಕ್ಷವನ್ನು ಕೆಳಕ್ಕೆ ತಳ್ಳಿತು ಎಂದಿದ್ದಾರೆ ಜಾಖರ್.  ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಚನ್ನಿ ಅವರ ಸೋದರಳಿಯ ಭೂಪಿಂದರ್ ಸಿಂಗ್ ಹನಿ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ ದಾಳಿಗಳನ್ನು ಜಾಖರ್ ಉಲ್ಲೇಖಿಸಿದ್ದಾರೆ. ಫೆಬ್ರವರಿ 4 ರಂದು ಕೇಂದ್ರೀಯ ಸಂಸ್ಥೆ ಭೂಪಿಂದರ್‌ನನ್ನು ಬಂಧಿಸಿತ್ತು ಮತ್ತು ಆತನ ಬಂಧನಕ್ಕೂ ಮುನ್ನ ಶೋಧ ನಡೆಸಿದಾಗ 10 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿತ್ತು.

ಚನ್ನಿ ಮತ್ತು ಸೋನಿ ಮೇಲೆ ಜಾಖರ್ ಟೀಕಾ ಪ್ರಹಾರ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಪಂಜಾಬ್ ಮುಖ್ಯಮಂತ್ರಿಯಾಗುವ ಅವಕಾಶವನ್ನು ಸೋನಿ ಅವರು ಸಿಖ್ಖರು ರಾಜ್ಯದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಹೇಳಿ ಹಿಂದೆ ಸರಿದಿದ್ದರು. ಇದಾದ ನಂತರ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬದಲಿಗೆ ಚನ್ನಿ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿತ್ತು.

ಇದನ್ನೂ ಓದಿ: ಮಹಿಳೆಯರು ಕೇಸರಿ ದುಪಟ್ಟಾ, ಪುರುಷರು ಕೇಸರಿ ಪೇಟ ಧರಿಸಿ ಬನ್ನಿ, ನನ್ನ ಜತೆ ಪ್ರಮಾಣ ವಚನ ಸ್ವೀಕರಿಸಿ: ಭಗವಂತ್ ಮಾನ್ ಕರೆ

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ನ್ಯೂಇಯರ್​ ಸಂಭ್ರಮದ ಮಧ್ಯೆ ಪುಂಡಾಟ: ಮಹಿಳಾ ಪೊಲೀಸರ ಜತೆ ಅನುಚಿತ ವರ್ತನೆ
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕಾಲೇಜಲ್ಲಿ ಬುರ್ಖಾ ಧರಿಸಿ ಅಸಭ್ಯವಾಗಿ ಡ್ಯಾನ್ಸ್ ಮಾಡಿದ ಯುವಕರು
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ