AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rafale Jets: ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳು

ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್​ ವಿಮಾನಗಳು ಹೊಸ ಬ್ಯಾಚ್​ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ.

Rafale Jets: ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ 5ನೇ ಬ್ಯಾಚ್​​ನ ರಫೇಲ್​​ ಯುದ್ಧ ವಿಮಾನಗಳು
ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳು
shruti hegde
| Edited By: |

Updated on:Apr 22, 2021 | 11:33 AM

Share

ದೆಹಲಿ: ಫ್ರಾನ್ಸ್​ ಜೊತೆ ಭಾರತ ಮಾಡಿಕೊಂಡಿರುವ ಯುದ್ಧ ವಿಮಾನಗಳ ಖರೀದಿ ಒಪ್ಪಂದದ ಪ್ರಕಾರ 5ನೇ ಬ್ಯಾಚ್​ನ ರಫೇಲ್​​ ಯುದ್ಧ ವಿಮಾನಗಳು 8,000 ಕಿಲೋ ಮೀಟರ್​ ಸಂಚರಿಸಿ ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದಿವೆ. ಈ ಕುರಿತಂತೆ ಭಾರತೀಯ ವಾಯುಪಡೆ ( ಐಎಎಫ್​ ) ಮಾಹಿತಿ ಹಂಚಿಕೊಂಡಿದೆ.

ಭಾರತಕ್ಕೆ ಬಂದಿಳಿದ ಯುದ್ಧ ವಿಮಾನಗಳ ಪೈಕಿ ನಾಲ್ಕು ರಫೇಲ್​ ವಿಮಾನಗಳು ಹೊಸ ಬ್ಯಾಚ್​ನ ಭಾಗವಾಗಿದೆ ಎಂದು ಭಾರತೀಯ ವಾಯುಪಡೆ ತಿಳಿಸಿದೆ. ಆದರೆ, ಫ್ರಾನ್ಸ್​ನಿಂದ ಭಾರತಕ್ಕೆ ಬಂದಿಳಿದ ಒಟ್ಟು ಯುದ್ಧ ವಿಮಾನಗಳ ಸಂಖ್ಯೆ ಇನ್ನೂ ತಿಳಿದು ಬಂದಿಲ್ಲ. ಫ್ರಾನ್ಸ್​ನಿಂದ ಯುದ್ಧ ವಿಮಾನಗಳು ಹೊರಟಾಗ ದಾರಿ ಮಧ್ಯದಲ್ಲಿ ಬೇಕಾದ ಇಂಧನದ ಪೂರೈಕೆಯನ್ನು ಫ್ರಾನ್ಸ್​ನ ವಾಯಪಡೆ ಮತ್ತು ಯುನೈಟೆಡ್​ ಅರಬ್​ ಎಮೀರೇಟ್ಸ್​ (ಯುಎಇ) ನೆರವು ನೀಡಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ಹಂಚಿಕೊಂಡಿದೆ.

ಫ್ರಾನ್ಸ್​ ಪ್ರವಾಸದಲ್ಲಿರುವ ಏರ್​ ಚೀಫ್​ ಮಾರ್ಷಲ್​ ಆರ್​ಕೆಎಸ್​ ಭದೌರಿಯಾ ಅವರು ಫ್ರಾನ್ಸ್​ನ ಮೆರಿಗ್ನಾಕ್​ ವಾಯುನೆಲೆಯಲ್ಲಿ ವಿಮಾನಗಳಿಗೆ ಫ್ಲ್ಯಾಗ್​ ಆಫ್​ ಮಾಡಿದ್ದರು. ಏರ್​ಚೀಫ್​ ಮಾರ್ಷಲ್​ ತಮ್ಮ ಐದು ದಿನಗಳ ಫ್ರಾನ್ಸ್​ ಪ್ರವಾಸದಲ್ಲಿ ರಫೇಲ್​ ವಿಮಾನ ತರಬೇತಿ ಕೇಂದ್ರಕ್ಕೂ ಭೇಟಿ ನೀಡಿದ್ದರು. ಏಪ್ರಿಲ್​ ತಿಂಗಳ ಮೊದಲನೇಯ ದಿನ 4ನೇ ಬ್ಯಾಚ್​ನ 3 ರಫೇಲ್​ ಯುದ್ಧ ವಿಮಾಗಳು ಭಾರತಕ್ಕೆ ಬಂದಿದ್ದವು. ಕೊವಿಡ್​ ಸಮಯದಲ್ಲಿಯೂ ಸಮಯಕ್ಕೆ ಸರಿಯಾಗಿ ವಿಮಾನಗಳನ್ನು ವಿತರಣೆ ಮಾಡಿದ ಫ್ರಾನ್ಸ್​ಗೆ ಧನ್ಯವಾದಗಳು ಎಂದು ಶ್ಲಾಘಿಸಲಾಗಿದೆ.

ಇಲ್ಲಿಯವರೆಗೆ 14 ರಫೇಲ್ ಜೆಟ್​ಗಳು ಐಎಎಫ್​ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಬ್ಯಾಚ್​ನಲ್ಲಿ ಇನ್ನಷ್ಟು ವಿಮಾನ ಸೇರ್ಪಡೆಯಾದ ನಂತರ ಈ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ. ಈಗಾಗಲೇ ಐದು ರಫೇಲ್​ ಜೆಟ್​ಗಳು ಮೊದಲ ಬ್ಯಾಚ್​ನಲ್ಲಿ ಅಂದರೆ ಕಳೆದ ಜುಲೈ 29 ರಂದು ಭಾರತಕ್ಕೆ ಬಂದಿಳಿದಿತ್ತು.

ಇದನ್ನೂ ಓದಿ: ಭಾರತಕ್ಕೆ ಬಂದಿಳಿಯಿತು ಇನ್ನೂ 3 ರಫೇಲ್​ ಯುದ್ಧ ವಿಮಾನ

(four rafale jets for india from french air base iaf chief rks bhadauria flags host)

Published On - 11:03 am, Thu, 22 April 21

ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?