AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TSRTC Bus: ಉಚಿತ ಬಸ್ ಪ್ರಯಾಣದ ಎಫೆಕ್ಟ್! ಆ ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿಬಿಟ್ಟ, ಯಾಕೆ ಗೊತ್ತಾ?

ಈ ಮಧ್ಯೆ, ಬಸ್ಸಿನಿಂದ ಇಳಿದ ಅಜೀಂ ಖಾನ್ ಮತ್ತೊಂದು ಖಾಸಗಿ ವಾಹನದಲ್ಲಿ ಆರ್ ಟಿಸಿ ಬಸ್ಸನ್ನು ಹಿಂಬಾಲಿಸಿ ಆದಿಲಾಬಾದ್ ಗಡಿ ತಲುಪಿದಾಗ ಕಂಡಕ್ಟರ್ ಜೊತೆ ಮತ್ತೊಮ್ಮೆ ವಾಗ್ವಾದಕ್ಕಿಳಿದಿದ್ದಾರೆ. ಸಹ ಪ್ರಯಾಣಿಕರ ಮಾತು ಕೇಳದೆ ಅಜೀಂ ಗಲಾಟೆ ಮಾಡಿದ್ದಾರೆ. ಮತ್ತೆ ಯಾಕೆ ಹತ್ತುತ್ತೀರಿ ಎಂದು ಕಂಡಕ್ಟರ್ ನಿಲ್ಲಿಸಿದಾಗ ಸಿಟ್ಟಿಗೆದ್ದ ಅಜೀಂ ಕಂಡಕ್ಟರ್ ಕೆನ್ನೆಗೆ ಕಚ್ಚಿ ಓಡಿ ಹೋಗಿದ್ದಾನೆ!

TSRTC Bus: ಉಚಿತ ಬಸ್ ಪ್ರಯಾಣದ ಎಫೆಕ್ಟ್! ಆ ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿಬಿಟ್ಟ, ಯಾಕೆ ಗೊತ್ತಾ?
ಪುರುಷ ಪ್ರಯಾಣಿಕ ಕಂಡಕ್ಟರ್ ಕೆನ್ನೆ ಕಚ್ಚಿರುವುದು ಹೀಗೆ
ಸಾಧು ಶ್ರೀನಾಥ್​
|

Updated on: Dec 22, 2023 | 1:20 PM

Share

ಕರ್ನಾಟಕದಂತೆ ತೆಲಂಗಾಣದಲ್ಲಿಯೂ ಅಲ್ಲಿನ ನೂತನ ಕಾಂಗ್ರೆಸ್ ಸರಕಾರ ತಂದಿರುವ ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಕಲ್ಪಿಸಿದೆ. ಆದರೆ ದಿನನಿತ್ಯ ನಾನಾ ಸಮಸ್ಯೆಗಳೂ ತರುತ್ತಿದೆ. ಬಸ್‌ಗಳಲ್ಲಿ ಸೀಟು ಇಲ್ಲದ್ದಕ್ಕೆ ಜಗಳವಾಡುವುದು ಮಾಮೂಲಿಯಾಗಿದೆ. ಈಗ ಅಂತಹದ್ದೊಂದು ಜಗಳ ಬಸ್ ಕಂಡಕ್ಟರ್‌ಗೆ ಕಷ್ಟ ತಂದಿಟ್ಟಿದೆ. ಬಸ್ಸಿನಲ್ಲಿ ಸೀಟು ಸಿಗದ ಕೋಪದಲ್ಲಿ ಪ್ರಯಾಣಿಕರೊಬ್ಬರು ಕಂಡಕ್ಟರ್ ಕೆನ್ನೆಗೆ ಕಚ್ಚಿರುವ ಘಟನೆ ಆದಿಲಾಬಾದ್-ಮಹಾರಾಷ್ಟ್ರ ಗಡಿಯಲ್ಲಿ ನಡೆದಿದೆ. ಟಿಕೆಟ್ ತೆಗೆದುಕೊಂಡ ನಂತರ ನಿಂತು ಪ್ರಯಾಣಿಸಬೇಕಾ ಎಂದು ರೊಚ್ಚಿಗೆದ್ದ ಪ್ರಯಾಣಿಕರೊಬ್ಬರು ಆರ್ ಟಿಸಿ ಕಂಡಕ್ಟರ್ ಜೊತೆ ಜಗಳಕ್ಕೆ ಇಳಿದಿದ್ದಾರೆ. ಹಣ ವಾಪಸ್​ ನೀಡುವಂತೆ ಒತ್ತಾಯಿಸಿದ್ದಾರೆ. ಶೋಚನೀಯವೆಂದರೆ ಕಂಡಕ್ಟರ್ ಹಣ ಹಿಂತಿರುಗಿಸಿದರೂ ಆತನ ಮೇಲೆ ಪ್ರಯಾಣಿಕ ದಾಳಿ ಮಾಡಿದ್ದಾನೆ.

ಆದಿಲಾಬಾದ್ ಡಿಪೋಗೆ ಸೇರಿದ ಆರ್ ಟಿಸಿ ಬಸ್ ಮಹಾರಾಷ್ಟ್ರದ ಗಡಿಭಾಗದ ಪಂಡ್ರಕವಾಡಕ್ಕೆ ಹೋಗುತ್ತಿತ್ತು. ಮಹಾರಾಷ್ಟ್ರದ ಗಡಿಯಲ್ಲಿ ಬೋರಿ ಬಸ್ ನಿಲ್ದಾಣದಲ್ಲಿ ಹಸ್ನಾಪುರದ ಅಜೀಂ ಖಾನ್ ಎಂಬ ವ್ಯಕ್ತಿ ಬಸ್ ಹತ್ತಿ ಆದಿಲಾಬಾದ್‌ಗೆ ಟಿಕೆಟ್ ತೆಗೆದುಕೊಂಡಿದ್ದಾನೆ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾರಣ ಆತನಿಗೆ ಸೀಟು ಸಿಗಲಿಲ್ಲ. ಸ್ವಲ್ಪ ದೂರ ಪ್ರಯಾಣ ಮಾಡಿದ ನಂತರ… ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಸೀಟು ಕಲ್ಪಿಸಲಾಗಿದೆ. ಅದನ್ನು ನೋಡಿ ಪಿತ್ತ ನೆತ್ತಿಗೇರಿಸಿಕೊಂಡ ಪುರುಷ ಪ್ರಯಾಣಿಕ ಹಣ ಕೊಟ್ಟು ಪ್ರಯಾಣಿಸುತ್ತಿರುವ ನನಗೆ ಸೀಟು ಕೊಡದೆ, ತಡೆದಿದ್ದೀಯ. ಅವರು ಮಾತ್ರ ಸೀಟಿನಲ್ಲಿ ಕುಳಿತಿದ್ದಾರೆ ಎಂದು ಕಂಡಕ್ಟರ್ ಎನ್.ಎ. ಖಾನ್ ಜೊತೆ ಪ್ರಯಾಣಿಕ ಅಜೀಂ ಖಾನ್ ಜಗಳವಾಡಿದ್ದಾರೆ.

Also Read: ಡೀಸಲ್ ಇಲ್ಲದೇ ಅರ್ಧ ದಾರಿಯಲ್ಲೇ ನಿಂತ ಬಸ್! ಡೀಸಲ್ ಹಾಕಿಸದಷ್ಟು ಲಾಸ್ ಮಾಡಿಕೊಂಡಿದೆಯಾ KSRTC?

ಈ ಮಧ್ಯೆ, ಬಸ್ಸಿನಿಂದ ಇಳಿದ ಅಜೀಂ ಖಾನ್ ಮತ್ತೊಂದು ಖಾಸಗಿ ವಾಹನದಲ್ಲಿ ಆರ್ ಟಿಸಿ ಬಸ್ಸನ್ನು ಹಿಂಬಾಲಿಸಿ ಆದಿಲಾಬಾದ್ ಗಡಿ ತಲುಪಿದಾಗ ಕಂಡಕ್ಟರ್ ಜೊತೆ ಮತ್ತೊಮ್ಮೆ ವಾಗ್ವಾದಕ್ಕಿಳಿದಿದ್ದಾರೆ. ಸಹ ಪ್ರಯಾಣಿಕರ ಮಾತು ಕೇಳದೆ ಅಜೀಂ ಖಾನ್ ಗಲಾಟೆ ಮಾಡಿದ್ದಾರೆ. ಮತ್ತೆ ಯಾಕೆ ಹತ್ತುತ್ತೀರಿ ಎಂದು ಕಂಡಕ್ಟರ್ ನಿಲ್ಲಿಸಿದಾಗ ಸಿಟ್ಟಿಗೆದ್ದ ಅಜೀಂ ಖಾನ್ ಕಂಡಕ್ಟರ್ ಕೆನ್ನೆಗೆ ಕಚ್ಚಿ ಓಡಿ ಹೋಗಿದ್ದಾನೆ!

ಬಸ್ಸು ಅದಿಲಾಬಾದ್ ತಲುಪಿದಾಗ, ಕಂಡಕ್ಟರ್ ಎನ್.ಎ. ಖಾನ್ ಘಟನೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರನ್ನೂ ಸಂಪರ್ಕಿಸಿದ್ದಾರೆ. ದೂರನ್ನು ಸ್ವೀಕರಿಸಿದ ಟೂ ಟೌನ್​​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
​ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ಕೆಪಿಸಿಸಿ ಅಧ್ಯಕ್ಷನ ಜೊತೆಗಿನ ತಿಕ್ಕಾಟವೇ ರಾಜಣ್ಣನಿಗೆ ಮುಳುವಾಯಿತೇ?
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ವಿಷ್ಣು ಸಮಾಧಿ ಧ್ವಂಸ: ಸಾ.ರಾ. ಗೋವಿಂದು ಎದುರು ನೋವು ತೋಡಿಕೊಂಡ ಫ್ಯಾನ್ಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಸತ್ಯ ಹೇಳಿದ್ದಕ್ಕೆ ಬೆಲೆ ತೆತ್ತರ ಅಂತ ತೀರ್ಮಾನಿಸುವವರು ನಾವಲ್ಲ: ಎಸ್​ಟಿಎಸ್
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ಮಹಿಳೆಯ ಪ್ರಶ್ನೆಗೆ ಉತ್ತರ ಕೊಡಲಾಗದ ಸಿಟಿ ರವಿ ಸ್ಥಳದಿಂದ ನಿರ್ಗಮಿಸಿದರು!
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು