AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Chalo ಪ್ರತಿಭಟನಾ ನಿರತ ರೈತರಿಗಾಗಿ ಉಚಿತ ಶೂ ಪಾಲಿಷ್ ಸೇವೆ, ಕುಸ್ತಿ ಪಂದ್ಯಾವಳಿ!

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್​ ರೈತರು ತಮ್ಮ ದೆಹಲಿ ಚಲೋ ಪ್ರತಿಭಟನೆಯಿಂದ ಹಿಂದೆ ಸರಿಯುವ ಯಾವುದೇ ಸೂಚನೆ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಏಳು ಬಾರಿ ಮಾತುಕತೆ ವಿಫಲವಾಗಿದೆ. ಆದರೂ ಕೃಷಿ ಕಾಯ್ದೆಯನ್ನ ಸಂಪೂರ್ಣವಾಗಿ ರದ್ದುಪಡಿಸುವವರೆಗೂ ಧರಣಿ ವಾಪಸ್​ ಪಡೆಯೋದಿಲ್ಲ ಎಂದು ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Delhi Chalo ಪ್ರತಿಭಟನಾ ನಿರತ ರೈತರಿಗಾಗಿ ಉಚಿತ ಶೂ ಪಾಲಿಷ್ ಸೇವೆ, ಕುಸ್ತಿ ಪಂದ್ಯಾವಳಿ!
ರೈತರಿಗಾಗಿ ಉಚಿತ ಶೂ ಪಾಲಿಷ್, ಕುಸ್ತಿ ಪಂದ್ಯಾವಳಿ!
KUSHAL V
|

Updated on:Jan 10, 2021 | 11:56 PM

Share

ದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಿಡಿದೆದ್ದಿರುವ ಪಂಜಾಬ್​ ರೈತರು ತಮ್ಮ ದೆಹಲಿ ಚಲೋ ಪ್ರತಿಭಟನೆಯಿಂದ ಹಿಂದೆ ಸರಿಯುವ ಯಾವುದೇ ಸೂಚನೆ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಜೊತೆ ಏಳು ಬಾರಿ ಮಾತುಕತೆ ವಿಫಲವಾಗಿದೆ. ಆದರೂ ಕೃಷಿ ಕಾಯ್ದೆಯನ್ನ ಸಂಪೂರ್ಣವಾಗಿ ರದ್ದುಪಡಿಸುವವರೆಗೂ ಧರಣಿ ವಾಪಸ್​ ಪಡೆಯೋದಿಲ್ಲ ಎಂದು ಚಳಿಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಇತ್ತ, ಘಾಜಿಪುರ್​ ಬಳಿ ಪ್ರತಿಭಟನಾ ನಿರತ ರೈತರ ನೆರವಿಗೆ ಹಲವರು ಮುಂದಾಗಿದ್ದಾರೆ. ಅನ್ನದಾತರ ಅಳಲನ್ನು ಸರ್ಕಾರ ಆಲಿಸುವವರೆಗೂ ತಮ್ಮ ಕೈಲಾದ ಅಳಿಲು ಸೇವೆಯನ್ನು ಮಾಡಲು ಸ್ವಸಹಾಯಕರು ಮುಂದಾಗಿದ್ದಾರೆ.

ಹಾಗಾಗಿ, ಇಂದು ರೈತರಿಗೆ ಹತ್ತಿರದ ಗುರುದ್ವಾರ ಸಿಸ್​ ಗಂಜ್​ ಸಾಹೀಬ್​ನ ಸ್ವಸಹಾಯಕರು ಉಚಿತ ಶೂ ಪಾಲಿಷ್​ ಸೇವೆಯನ್ನು ಒದಗಿಸಿದರು. ನಮ್ಮ ರೈತ ಬಾಂಧವರು ಬಲು ದೂರದಿಂದ ಮಳೆ, ಚಳಿಯನ್ನು ಲೆಕ್ಕಿಸದೆ ಇಲ್ಲಿಯವರೆಗೆ ನಡೆದುಕೊಂಡೇ ಬಂದು ಧರಣಿ ನಡೆಸುತ್ತಿದ್ದಾರೆ. ಹೀಗಾಗಿ, ಕೆಸರಿನಲ್ಲಿ ಕೊಳಕಾದ ಅವರ ಶೂಗಳನ್ನು ಸ್ವಚ್ಛಗೊಳಿಸಿ, ಪಾಲಿಷ್​ ಮಾಡಲು ಬಂದಿದ್ದೇವೆ ಎಂದು ಸ್ವಸಹಾಯಕರೊಬ್ಬರು ಹೇಳಿದರು. ಜೊತೆಗೆ, ಅನ್ನದಾತರ ಋಣ ತೀರಿಸಲು ನಾವು ಇದನ್ನು ಮಾಡುತ್ತಿದ್ದೇವೆ ಎಂದು ಸಹ ಹೇಳಿದರು.

ಇದಲ್ಲದೆ, ರೈತರ ಮನರಂಜನೆಗಾಗಿ ಇಂದು ಘಾಜಿಪುರ್ ಬಳಿ ಕುಸ್ತಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಕುಸ್ತಿಪಟುಗಳ ಜಬರ್​ದಸ್ತ್​ ದಂಗಲ್​ನ ವೀಕ್ಷಿಸಿದ ರೈತರು ಸಖತ್​ ಖುಷಿಪಟ್ಟರು.

Published On - 11:54 pm, Sun, 10 January 21

Follow Us
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ