AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಕಾಶಿ, ಮಧ್ಯಾಹ್ನ ಭುವನೇಶ್ವರ, ಸಂಜೆ ನಾಗ್ಪುರ: ಹುಟ್ಟುಹಬ್ಬದಂದು ಮೋದಿ ಭಾಗವಹಿಸುವ ಕಾರ್ಯಕ್ರಮಗಳು ಹೀಗಿವೆ

ಪ್ರತಿ ವರ್ಷದಂತೆ, ಬಿಜೆಪಿಯು ಪಿಎಂ ಮೋದಿ ಅವರ ಜನ್ಮದಿನದಿಂದ ಪ್ರಾರಂಭವಾಗುವ ಹದಿನೈದು ದಿನಗಳನ್ನು 'ಸೇವಾ ಪಖ್ವಾರಾ' ಅಥವಾ 'ಸೇವಾ ಪರ್ವ್' ಎಂದು ಗುರುತಿಸುತ್ತದೆ. ಅವರ ಜನ್ಮದಿನದಂದು ಮತ್ತು ಅದರ ನಂತರ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಬಿಜೆಪಿ ರಾಷ್ಟ್ರವ್ಯಾಪಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ

ಬೆಳಿಗ್ಗೆ ಕಾಶಿ, ಮಧ್ಯಾಹ್ನ ಭುವನೇಶ್ವರ, ಸಂಜೆ ನಾಗ್ಪುರ: ಹುಟ್ಟುಹಬ್ಬದಂದು ಮೋದಿ ಭಾಗವಹಿಸುವ ಕಾರ್ಯಕ್ರಮಗಳು ಹೀಗಿವೆ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 3:12 PM

Share

ದೆಹಲಿ ಸೆಪ್ಟೆಂಬರ್ 16: ನಾಳೆ (ಸೆಪ್ಟೆಂಬರ್ 17ಕ್ಕೆ) ಪ್ರಧಾನಿ ನರೇಂದ್ರ ಮೋದಿ (Narendra Modi birthday) 74 ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಈ ದಿನವೂ ಅವರು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರಲಿದ್ದಾರೆ ಎಂದು ಮೂಲಗಳು ಹೇಳಿವೆ. ಕಾಶಿ ಎಂದೇ ಪ್ರಸಿದ್ಧವಾಗಿರುವ ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಪ್ರಧಾನಿ ತಮ್ಮ ದಿನವನ್ನು ಆರಂಭಿಸಲಿದ್ದಾರೆ. ಅವರು ಕಾಶಿಯ ಪ್ರಸಿದ್ಧ ವಿಶ್ವನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ. ಅವರು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದು ತಿಳಿದುಬಂದಿಲ್ಲ ಎಂದು ನ್ಯೂಸ್ 18 ವರದಿ ಮಾಡಿದೆ.

ಮಧ್ಯಾಹ್ನ ಅವರು ಒಡಿಶಾಗೆ ಬರಲಿದ್ದಾರೆ. ದೇವಸ್ಥಾನ ನಗರಿ ಭುವನೇಶ್ವರದಲ್ಲಿ ಅವರು ಮಹಿಳೆಯರಿಗೆ ಸುಭದ್ರಾ ಯೋಜನೆಯ ಮೊದಲ ಕಂತಿನ ಹಸ್ತಾಂತರಿಸಲಿದ್ದಾರೆ. 21 ರಿಂದ 60 ವರ್ಷ ವಯಸ್ಸಿನ ಒಡಿಶಾದ 1 ಕೋಟಿಗೂ ಹೆಚ್ಚು ಮಹಿಳೆಯರು ಮುಂದಿನ ಐದು ವರ್ಷಗಳಲ್ಲಿ ಸುಭದ್ರಾ ಯೋಜನೆಯಡಿ ವಾರ್ಷಿಕ 10,000 ರೂ.ಗಳ ಸಹಾಯವನ್ನು ಸೆಪ್ಟೆಂಬರ್ 17 ರಿಂದ ಮೋದಿಯವರ ಜನ್ಮದಿನದಂದು ಪಡೆಯುವ ನಿರೀಕ್ಷೆಯಿದೆ. ಈ ಯೋಜನೆಗೆ ಜಗನ್ನಾಥನ ಸಹೋದರಿ ಸುಭದ್ರಾ ಅವರ ಹೆಸರನ್ನು ಇಡಲಾಗಿದೆ.

ಇದುವರೆಗೆ ಸಿಕ್ಕಿದ ಮಾಹಿತಿ ಪ್ರಕಾರ ಪ್ರಧಾನಮಂತ್ರಿಯವರು ತಮ್ಮ ಜನ್ಮದಿನವನ್ನು ಆರ್‌ಎಸ್‌ಎಸ್ ಪ್ರಧಾನ ಕಚೇರಿ ಇರುವ ನಾಗ್ಪುರದಲ್ಲಿ ಕೊನೆಗೊಳಿಸುತ್ತಾರೆ. ಏಪ್ರಿಲ್‌ನಲ್ಲಿ ರಾಮ್‌ಟೆಕ್ ಕ್ಷೇತ್ರದಲ್ಲಿ ಲೋಕಸಭೆ ಪ್ರಚಾರದ ವೇಳೆ ಕೊನೆಯದಾಗಿ ಪ್ರಧಾನಿ ಮೋದಿ ನಾಗ್ಪುರಕ್ಕೆ ಭೇಟಿ ನೀಡಿದ್ದರು. ಮೋದಿ 3.0 ನಲ್ಲಿ ನಗರಕ್ಕೆ ಇದು ಅವರ ಮೊದಲ ಭೇಟಿಯಾಗಿದೆ. ಈ ಬಾರಿ, ಪಿಎಂ ವಿಶ್ವಕರ್ಮ ಯೋಜನೆಯ ಒಂದು ವರ್ಷವನ್ನು ಗುರುತಿಸಲು ಎಂಎಸ್‌ಎಂಇಗಳು ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಲು ಸಿದ್ಧರಾಗಿರುವ ಪ್ರಧಾನಿ ಮೋದಿ ಅವರು ವಾರ್ಧಾಗೆ ತೆರಳುವ ಮೊದಲು ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ. ಅವರು ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಭೇಟಿ ನೀಡುತ್ತಾರೆಯೇ ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

ಪ್ರಧಾನಿ ಮೋದಿಯವರ ಜನ್ಮದಿನಕ್ಕಾಗಿ ಬಿಜೆಪಿಯ ಯೋಜನೆಗಳು

ಪ್ರತಿ ವರ್ಷದಂತೆ, ಬಿಜೆಪಿಯು ಪಿಎಂ ಮೋದಿ ಅವರ ಜನ್ಮದಿನದಿಂದ ಪ್ರಾರಂಭವಾಗುವ ಹದಿನೈದು ದಿನಗಳನ್ನು ‘ಸೇವಾ ಪಖ್ವಾರಾ’ ಅಥವಾ ‘ಸೇವಾ ಪರ್ವ್’ ಎಂದು ಗುರುತಿಸುತ್ತದೆ. ಅವರ ಜನ್ಮದಿನದಂದು ಮತ್ತು ಅದರ ನಂತರ, ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಸಹಯೋಗದೊಂದಿಗೆ ಬಿಜೆಪಿ ರಾಷ್ಟ್ರವ್ಯಾಪಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಇಂತಹ ಶಿಬಿರಗಳನ್ನು ಪಕ್ಷದ ವತಿಯಿಂದ ಪ್ರತಿ ವರ್ಷ ಸೆಪ್ಟೆಂಬರ್ ಈ ವಾರದಲ್ಲಿ ಆಯೋಜಿಸಲಾಗುತ್ತದೆ.

ಪಕ್ಷವು ಸೆಪ್ಟೆಂಬರ್ 18 ರಿಂದ ಆಸ್ಪತ್ರೆಗಳು ಮತ್ತು ಶಾಲೆಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಿದೆ. ರಕ್ತದಾನ ಶಿಬಿರಗಳು ಮತ್ತು ಸ್ವಚ್ಛತಾ ಆಂದೋಲನಗಳೆರಡನ್ನೂ ಜಿಲ್ಲಾ ಮಟ್ಟದವರೆಗೆ ಮಾಡಲಾಗುವುದು. ಪ್ರತಿ ವರ್ಷ ರೂಢಿಯಂತೆ ಇವುಗಳ ಫೋಟೋಗಳನ್ನು ಪಕ್ಷದೊಂದಿಗೆ ಹಂಚಿಕೊಳ್ಳಬೇಕು.

ಇದನ್ನೂ ಓದಿ: ಪ್ರಧಾನಿ ಹುದ್ದೆಯ ಆಫರ್ ನಯವಾಗಿ ತಿರಸ್ಕರಿಸಿದೆ ಎಂದ ಗಡ್ಕರಿ; ಬಿಜೆಪಿಯಲ್ಲಿ ಹುದ್ದೆಗಾಗಿ ಹೋರಾಟ ನಡೆಯುತ್ತಿದೆ ಎಂದ ಆರ್‌ಜೆಡಿ

ಸೆಪ್ಟೆಂಬರ್ 23 ರಂದು, ಭಾರತದ ಪ್ರತಿ ವಿಧಾನಸಭಾ ಕ್ಷೇತ್ರವು ಹಿರಿಯ ನಾಗರಿಕರೂ ಆಗಿರುವ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳಿಗೆ ಸಾಕ್ಷಿಯಾಗಲಿದೆ. ಭಾರತದಾದ್ಯಂತ ಒಟ್ಟು 4,123 ವಿಧಾನಸಭಾ ಸ್ಥಾನಗಳಿವೆ. ‘ಸೇವಾ ಪಖ್ವಾರ’ದ ಸಂದರ್ಭದಲ್ಲಿ ಪದಕ ವಿಜೇತರನ್ನು ಮಾತ್ರವಲ್ಲದೆ ಭಾರತದ ಪ್ಯಾರಾಲಿಂಪಿಕ್ ತಂಡವನ್ನು ಗೌರವಿಸುವಂತೆ ಬಿಜೆಪಿ ರಾಜ್ಯ ನಾಯಕತ್ವವನ್ನು ಕೇಳಿದೆ. ಮಂಗಳವಾರ 2 ಕೋಟಿ ಗಡಿಯನ್ನು ಮುಟ್ಟಿದ ಪಕ್ಷವು ಈ ಹದಿನೈದು ದಿನಗಳ ಅಂಗವಾಗಿ ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸಿದೆ, ಈ ಅವಧಿಯಲ್ಲಿ ಪ್ರತಿ ಬಿಜೆಪಿ ಕಾರ್ಯಕರ್ತರಿಗೆ 100 ವ್ಯಕ್ತಿಗಳನ್ನು ಬಿಜೆಪಿ ಸದಸ್ಯರನ್ನಾಗಿ ಸೇರಿಸುವ ಕಾರ್ಯವನ್ನು ಮಾಡಲಾಗಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿಯೊಂದಿಗೆ ಹದಿನೈದು ದಿನಗಳ ಆಚರಣೆ ಕೊನೆಗೊಳ್ಳುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ರಿಷಬ್​​ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು