AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FutureCrime Summit 2024: ಯಶಸ್ವಿಯಾಗಿ ನಡೆಯಿತು ಮೊದಲ ಫ್ಯೂಚರ್ ಕ್ರೈಮ್ ಸಮಾವೇಶ; ಭವಿಷ್ಯದ ಅಪರಾಧಗಳ ಬಗ್ಗೆ ತಜ್ಞರಿಂದ ವಿಚಾರ ವಿನಿಮಯ

2 Days Summit In New Delhi Ends On Feb 9th: ತಂತ್ರಜ್ಞಾನ ಆವಿಷ್ಕರಣೆಗೊಂಡಂತೆಲ್ಲಾ ಅಪರಾಧಿಗಳಿಗೂ ಈ ಟೆಕ್ನಾಲಜಿ ಅಸ್ತ್ರವಾಗಿವೆ. ಹೊಸ ಮಾದರಿ ಅಪಾಯಗಳು ಎದುರಾಗುತ್ತಿವೆ. ಭವಿಷ್ಯದ ಅಪರಾಧಗಳೇನು, ಅದನ್ನು ಎದುರಿಸುವುದು ಹೇಗೆ ಎಂದು ಚರ್ಚಿಸಲು ಫ್ಯೂಚರ್​ಕ್ರೈಮ್ ಸಮಿಟ್ ನಡೆಸಲಾಗಿದೆ. ಫೆಬ್ರುವರಿ 8 ಮತ್ತು 9ರಂದು ದೆಹಲಿಯಲ್ಲಿ ಮೊದಲ ಆವೃತ್ತಿಯ ಫ್ಯೂಚರ್ ಕ್ರೈಮ್ ಸಮಿಟ್ ನಡೆದಿದೆ.

FutureCrime Summit 2024: ಯಶಸ್ವಿಯಾಗಿ ನಡೆಯಿತು ಮೊದಲ ಫ್ಯೂಚರ್ ಕ್ರೈಮ್ ಸಮಾವೇಶ; ಭವಿಷ್ಯದ ಅಪರಾಧಗಳ ಬಗ್ಗೆ ತಜ್ಞರಿಂದ ವಿಚಾರ ವಿನಿಮಯ
ಸೈಬರ್ ಸೆಕ್ಯೂರಿಟಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 09, 2024 | 4:30 PM

Share

ನವದೆಹಲಿ, ಫೆಬ್ರುವರಿ 9: ಭವಿಷ್ಯದ ಅಪರಾಧಗಳ ಬಗ್ಗೆ ವಿಚಾರ ವಿನಿಮಯ ಮತ್ತು ಹೋರಾಟ ರೂಪಿಸಲು ಫ್ಯೂಚರ್ ಕ್ರೈಮ್ ಸಮಿಟ್ (FutureCrime Summit 2024) ರೂಪಿಸಲಾಗಿದೆ. ಇದರ ಮೊದಲ ಆವೃತ್ತಿ ರಾಷ್ಟ್ರರಾಜಧಾನಿಯಲ್ಲಿ ನಡೆದಿದೆ. ನಿನ್ನೆ ಫೆಬ್ರುವರಿ 8ಕ್ಕೆ ಆರಂಭಗೊಂಡ 2024ರ ಫ್ಯೂಚರ್​ಕ್ರೈಮ್ ಸಮಿಟ್ ಇಂದು ಸಂಜೆ ಮುಕ್ತಾಯಗೊಳ್ಳುತ್ತಿದೆ. ಕಾನಪುರ್ ಐಐಟಿಯ ಸಹಯೋಗದೊಂದಿಗೆ ಫ್ಯೂಚರ್ ಕ್ರೈಮ್ ರಿಸರ್ಚ್ ಫೌಂಡೇಶನ್ (FCRF) ಈ ಸಮಾವೇಶವನ್ನು ಆಯೋಜಿಸಿದೆ. ದೇಶದ ಸೈಬರ್ ಸೆಕ್ಯೂರಿಟಿ, ಡಿಜಿಟಲ್ ಫೋರೆನ್ಸಿಕ್ಸ್, ಹಣಕಾಸು ಅಪರಾಧ ನಿಯಂತ್ರಣ ಕ್ಷೇತ್ರದ ಸರ್ವೋತ್ಕೃಷ್ಟ ಪರಿಣಿತರು ಈ ಸಮಿಟ್​ನಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯ ಸಲಹೆ, ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಂತ್ರಜ್ಞಾನ ಆವಿಷ್ಕರಣೆಗೊಂಡಂತೆಲ್ಲಾ ಅಪರಾಧಗಳ ವಿಸ್ತಾರ ಮತ್ತು ಪರಿಭಾಷೆ ಬದಲಾಗುತ್ತಲೇ ಇರುತ್ತದೆ. ಅಪರಾಧಿಗಳು ಹೊಸ ಹೊಸ ತಂತ್ರಜ್ಞಾನ ಬಳಸಿ ಘಾತುಕ ಕೃತ್ಯ ಎಸಗುತ್ತಾರೆ. ಇವತ್ತು ಆನ್​ಲೈನ್​ನಲ್ಲಿ ಹಣ ವಂಚನೆ ಮಾಡುವುದು ಇತ್ಯಾದಿ ಸೈಬರ್ ಕ್ರೈಮ್ ಹೆಚ್ಚಾಗಿದೆ. ಭವಿಷ್ಯದಲ್ಲಿ ವೆಬ್3 ತಂತ್ರಜ್ಞಾನದ ಹವಾ ಇರಲಿದ್ದು, ಸೈಬರ್ ಕ್ರಿಮಿನಲ್​ಗಳಿಗೆ ಅದೂ ಕೂಡ ಅಸ್ತ್ರವಾಗಬಹುದು. ಹೀಗಾಗಿ, ವೆಬ್ 3.0 ಕಾನೂನು ಜಾರಿ, ಕ್ರಿಪ್ಟೋ ಕ್ರೈಮ್, ಬ್ಲಾಕ್​ಚೈನ್ ಫೋರೆನ್ಸಿಂಗ್, ಪ್ರೆಡಿಕ್ಟಿವ್ ಪೋಲಿಸಿಂಗ್ ಇತ್ಯಾದಿ ವಿಷಯಗಳತ್ತ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಫ್ಯೂಚರ್​ಕ್ರೈಮ್ ಸಮಿಟ್ ಪರಿಣಾಮಕಾರಿ ವೇದಿಕೆ ಆಗಿದೆ.

ಇದನ್ನೂ ಓದಿ: ಹಲ್ದ್ವಾನಿ ಹಿಂಸಾಚಾರ ಪೂರ್ವ ಯೋಜಿತ: ಜಿಲ್ಲಾ ಮೆಜಿಸ್ಟ್ರೇಟ್

ರಕ್ಷಣಾ ಸಚಿವಾಲಯದ ಮುಖ್ಯ ಸಲಹೆಗಾರ ವಿನೋದ್ ಜಿ ಖಂಡರೆ, ಎಲೆಕ್ಟ್ರಾನಿಕ್ಸ್ ಸಚಿವಾಲಯದಲ್ಲಿ ನ್ಯಾಷನಲ್ ಸೈಬರ್ ಸೆಕ್ಯೂರಿಟಿ ಕೋ ಆರ್ಡಿನೇಟರ್ ಆಗಿರುವ ಲೆಫ್ಟಿನೆಂಟ್ ಜನರಲ್ ಎಂ.ಯು. ನಾಯರ್, ಆಂಧ್ರದ ಮಾಜಿ ಡಿಜಿಪಿ ಸಂತೋಷ್ ಮೆಹ್ರಾ, ಐಐಟಿ ಕಾನಪುರ್​ನ ಸಿಇಒ ಡಾ. ನಿಖಿಲ್ ಅಗರ್ವಾಲ್, ಉ.ಪ್ರ. ಮಾಜಿ ಡಿಜಿಪಿ ಡಾ. ವಿಕ್ರಮ್ ಸಿಂಗ್ ಮೊದಲಾದ ಪರಿಣಿತರು ಎರಡು ದಿನಗಳ ಈ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಪೇಟಿಎಂ, ಟೆಕ್ ಮಹೀಂದ್ರ ಮೊದಲಾದ ಹಣಕಾಸು ಮತ್ತು ಫಿನ್​ಟೆಕ್ ಕಂಪನಿಗಳಿಂದ ಪರಿಣಿತರು ಬಂದು ಮಾತನಾಡಿದ್ದಾರೆ.

ಫ್ಯೂಚರ್​ಕ್ರೈಮ್ ಸಮಿಟ್ 2024ನ ಮೊದಲ ದಿನದಂದು (ಫೆ. 8) ನಡೆದ ಚರ್ಚಿತ ವಿಚಾರಗಳು

  • ಪ್ರಮುಖ ವಲಯಗಳಲ್ಲಿ ಪ್ರಬಲ ಸೈಬರ್ ಡಿಫೆನ್ಸ್ ನಿರ್ಮಿಸುವುದು
  • ಕ್ರಿಪ್ಟೋ ಕ್ರೈಮ್, ಬ್ಲಾಕ್​ಚೈನ್ ಫೋರೆನ್ಸಿಕ್ಸ್
  • ಪ್ರೆಡಿಕ್ಟಿವ್ ಪೊಲೀಸಿಂಗ್
  • ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಭವಿಷ್ಯದ ಅಪರಾಧಗಳು
  • ಅಂತರ್ಜಾಲದಲ್ಲಿ ವೈಯಕ್ತಿಕ ಸುರಕ್ಷತೆ, ಮಕ್ಕಳ ರಕ್ಷಣೆ ಇತ್ಯಾದಿ ವಿಚಾರಗಳು
  • ಡೀಪ್​ಫೇಕ್ ಅಪರಾಧಗಳು ಹಾಗೂ ನಿಗ್ರಹ ವಿಧಾನ
  • ವೆಬ್ 3 ಕಾನೂನು ಜಾರಿಯಲ್ಲಿನ ಸವಾಲುಗಳು
  • ಕ್ಲೌಡ್ ಫೋರೆನ್ಸಿಕ್ಸ್

ಇದನ್ನೂ ಓದಿ: ಟಿವಿ ಚಾನಲ್​ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್

ಎರಡನೆ ದಿನದಂದು ಚರ್ಚಿತವಾದ ವಿಷಯಗಳು

  • ಕ್ವಾಂಟಮ್ ಯುಗದಲ್ಲಿ ಸೈಬರ್ ಸೆಕ್ಯೂರಿಟಿ
  • ಸೈಬರ್ ಕ್ರೈಮ್​ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
  • ಮುಂದಿನ ತಲೆಮಾರಿನ ಸೈಬರ್ ದಾಳಿಗಳು
  • ಭವಿಷ್ಯದ ಅಪಾಯಗಳು
  • ಭವಿಷ್ಯದ ಸೈಬರ್ ಅಪರಾಧಗಳು ಹಾಗೂ ಕಾನೂನಿನ ತೊಡಕು
  • ರಾಷ್ಟ್ರೀಯ ಸೈಬರ್ ಸೆಕ್ಯೂರಿಟಿಗೆ ಡಿಜಿಟಲ್ ಅಪಾಯಗಳು
  • ಜನರೇಟಿವ್ ಎಐ, ಡಿಎಒ, ಡೀಫೈಗಳಿಂದ ಆಗುವ ಸಂಭಾವ್ಯ ಅಪಾಯ
  • ಬಿಎಫ್​ಎಸ್​ಐ ಸೆಕ್ಟರ್​ನಲ್ಲಿ ವಂಚನೆ
  • ಸೈಬರ್ ಫೋರೆನ್ಸಿಕ್ಸ್ ಕ್ಷೇತ್ರದ ಇತ್ತೀಚಿನ ಆವಿಷ್ಕರಣೆಗಳು
  • ಸೈಬರ್ ಥ್ರೆಟ್ ಇಂಟೆಲಿಜೆನ್ಸ್, ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್, ಒಎಸ್​​ಐಎನ್​ಟಿ ಟೂಲ್ಸ್ ಬಗ್ಗೆ ಚರ್ಚೆ
  • ತ್ವರಿತ ತಂತ್ರಜ್ಞಾನ ಆವಿಷ್ಕರಣೆಗಳ ಮಧ್ಯೆ ಡಾಟಾ ರಕ್ಷಣೆ ಹೇಗೆ?
  • ಡಾರ್ಕ್ ವೆಬ್ ತನಿಖೆ ವಿಚಾರಗಳು

ಫ್ಯೂಚರ್​ಕ್ರೈಮ್ ಸಮಿಟ್​ನ ಪ್ರಾಯೋಜಕರು

ಪ್ರೋಡಿಸ್ಕವರ್ ಫೋರೆನ್ಸಿಕ್ಸ್, ಎಕ್ಸ್​ಟೆರೋ, ಟ್ರೈನೆಕ್ಸಿಯಾ, ರೀ ಸೆಕ್ಯೂರಿಟಿ, ಇಸೆಕ್​ಫೋರ್ಟ್, ಇನ್ನೇಫು ಲ್ಯಾಬ್ಸ್, ಫೋರೆನ್ಸಿಕ್ಸ್ ಕೇರ್, ಎಂಎಸ್​ಎಬಿ, ಟೆಕ್​ಡಿಫೆನ್ಸ್, ಎಂಫಿಲ್ಟರ್​ಐಟಿ, ನ್ಯಾಂಗಿಯಾ ಆಂಡರ್ಸನ್ ಇಂಡಿಯಾ ಮತ್ತು ಆರ್ಮಾನ್​ಟೆಕ್ ಸಂಸ್ಥೆಗಳು ಈ ಶೃಂಗಸಭೆಯ ಪ್ರಾಯೋಜಕತ್ವ ವಹಿಸಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ