AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿ20 ಶೃಂಗಸಭೆ: ಪ್ರವಾಸಿ ಸ್ಮಾರ್ಟ್​ ಕಾರ್ಡ್​ ಬಿಡುಗಡೆ ಮಾಡಿದ ದೆಹಲಿ ಮೆಟ್ರೋ

ದೆಹಲಿ ಮೆಟ್ರೋ ಕೂಡ ಜಿ20ಗೆ ಸಂಬಂಧಿಸಿದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಭಾರತವು ಸೆಪ್ಟೆಂಬರ್ 9 ಹಾಗೂ 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಭದ್ರತೆಯ ದೃಷ್ಟಿಯಿಂದ ದೆಹಲಿಯನ್ನು ಅಜೇಯ ಕೋಟೆಯಾಗಿ ಪರಿವರ್ತಿಸಲಾಗುತ್ತಿದೆ ಮತ್ತೊಂದೆಡೆ, ವಿಶ್ವದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾದ ದೆಹಲಿ ಮೆಟ್ರೋ, G-20 ಪ್ರತಿನಿಧಿಗಳು, ಅಂತಾರಾರಾಷ್ಟ್ರೀಯ ಅತಿಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಅತ್ಯುತ್ತಮ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುತ್ತಿದೆ.

ಜಿ20 ಶೃಂಗಸಭೆ: ಪ್ರವಾಸಿ ಸ್ಮಾರ್ಟ್​ ಕಾರ್ಡ್​ ಬಿಡುಗಡೆ ಮಾಡಿದ ದೆಹಲಿ ಮೆಟ್ರೋ
ದೆಹಲಿ ಮೆಟ್ರೋ
ನಯನಾ ರಾಜೀವ್
|

Updated on: Sep 07, 2023 | 2:36 PM

Share

ದೆಹಲಿ ಮೆಟ್ರೋ ಕೂಡ ಜಿ20ಗೆ ಸಂಬಂಧಿಸಿದ ಸಿದ್ಧತೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಭಾರತವು ಸೆಪ್ಟೆಂಬರ್ 9 ಹಾಗೂ 10ರಂದು ದೆಹಲಿಯಲ್ಲಿ ಜಿ20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ಭದ್ರತೆಯ ದೃಷ್ಟಿಯಿಂದ ದೆಹಲಿಯನ್ನು ಅಜೇಯ ಕೋಟೆಯಾಗಿ ಪರಿವರ್ತಿಸಲಾಗುತ್ತಿದೆ ಮತ್ತೊಂದೆಡೆ, ವಿಶ್ವದ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್‌ಗಳಲ್ಲಿ ಒಂದಾದ ದೆಹಲಿ ಮೆಟ್ರೋ, G-20 ಪ್ರತಿನಿಧಿಗಳು, ಅಂತಾರಾರಾಷ್ಟ್ರೀಯ ಅತಿಥಿಗಳು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಅತ್ಯುತ್ತಮ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡುತ್ತಿದೆ.

ಈ ಕಾರ್ಡ್ ಮೂಲಕ ಪ್ರಯಾಣಿಕರು ದೆಹಲಿಯಾದ್ಯಂತ ಅನಿಯಮಿತವಾಗಿ ಪ್ರಯಾಣಿಸಬಹುದು. ಪ್ರವಾಸಿಗರು ಈ ಕಾರ್ಡ್ ಅನ್ನು ರಾಜಧಾನಿಯ ವಿವಿಧ ಮೆಟ್ರೋ ನಿಲ್ದಾಣಗಳಿಂದ 10 ದಿನಗಳವರೆಗೆ ಖರೀದಿಸಬಹುದು ಮತ್ತು ಕಡಿಮೆ ಹಣದಲ್ಲಿ ಮೆಟ್ರೋದಲ್ಲಿ ಇಡೀ ದೆಹಲಿಯನ್ನು ಸುತ್ತಾಡಬಹುದು.

ಸ್ಮಾರ್ಟ್​ ಕಾರ್ಡ್​ಗಳಲ್ಲಿ ಎರಡು ವಿಧ, ಒಂದು ದಿನದ ಮಾನ್ಯತೆ ಮತ್ತು ಮೂರು ದಿನಗಳ ಮಾನ್ಯತೆ ಹೊಂದಿರುವ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗಳಿವೆ. ಒಂದು ದಿನದ ವ್ಯಾಲಿಡಿಟಿಯ ಟೂರಿಸ್ಟ್ ಸ್ಮಾರ್ಟ್ ಕಾರ್ಡ್ ಬೆಲೆ 200 ರೂಪಾಯಿ ಆಗಿದ್ದರೆ, ಮೂರು ದಿನಗಳ ವ್ಯಾಲಿಡಿಟಿಯ ಟೂರಿಸ್ಟ್ ಸ್ಮಾರ್ಟ್ ಕಾರ್ಡ್ 500 ರೂಪಾಯಿಗೆ ಲಭ್ಯವಿರುತ್ತದೆ. ಇದು 50 ರೂ ಮರುಪಾವತಿಸಬಹುದಾದ ಭದ್ರತಾ ಠೇವಣಿ ಒಳಗೊಂಡಿದೆ.

ಮತ್ತಷ್ಟು ಓದಿ: ಜಿ20 ಶೃಂಗಸಭೆ: ಮೆಟ್ರೋವನ್ನು ಬೆಳಗ್ಗೆ ಬೇಗ ಪ್ರಾರಂಭಿಸುವಂತೆ ಡಿಎಂಆರ್​ಸಿಗೆ ದೆಹಲಿ ಪೊಲೀಸ್ ಆಯುಕ್ತರ ಪತ್ರ

ಈ ಮೆಟ್ರೋ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳು ಲಭ್ಯವಿರುತ್ತವೆ ಪ್ರವಾಸಿ ಸ್ಮಾರ್ಟ್ ಕಾರ್ಡ್ ಪಟೇಲ್ ಚೌಕ್, ಕೇಂದ್ರ ಸಚಿವಾಲಯ, ಉದ್ಯೋಗ ಭವನ, ಲೋಕ ಕಲ್ಯಾಣ ಮಾರ್ಗ, ಜೋರ್ ಬಾಗ್, ದೆಹಲಿ ಹಾತ್ INA, ಕಾಶ್ಮೀರ ಗೇಟ್, ಚಾಂದಿನಿ ಚೌಕ್, ಚಾವ್ರಿ ಬಜಾರ್, ನವದೆಹಲಿ, ರಾಜೀವ್ ಚೌಕ್, ಕೆಂಪು ಕೋಟೆ, ಜಾಮಾ ಮಸೀದಿ, ದೆಹಲಿ ಗೇಟ್, ಐಟಿ, ಮಂಡಿ ಹೌಸ್, ಜನಪಥ್, ಖಾನ್ ಮಾರ್ಕೆಟ್, JLN ಸ್ಟೇಡಿಯಂ, ಜಂಗ್‌ಪುರ, ಲಜಪತ್ ನಗರ, ಬರಖಾಂಬ ರಸ್ತೆ, ರಾಮಕೃಷ್ಣ ಆಶ್ರಮ ಮಾರ್ಗ, ಝಂಡೆವಾಲನ್, ಸುಪ್ರೀಂ ಕೋರ್ಟ್, ಇಂದ್ರಪ್ರಸ್ಥ, ಅಕ್ಷರಧಾಮ, ಟರ್ಮಿನಲ್ 1 IGI ವಿಮಾನ ನಿಲ್ದಾಣ, ಕರೋಲ್ ಬಾಗ್ , ಸರೋಜಿನಿ ನಗರ, ಛತ್ತರ್‌ಪುರ, ಕುತುಬ್ ಮಿನಾರ್, ಟಿಕೆಟ್‌ಗಳು ಹೌಜ್ ಖಾಸ್, ನೆಹರು ಪ್ಲೇಸ್, ಕಲ್ಕಾಜಿ ದೇವಸ್ಥಾನದ ಕೌಂಟರ್​ನಲ್ಲಿ ಲಭ್ಯವಿರಲಿದೆ.

ಮೆಟ್ರೋ ಸ್ಮಾರ್ಟ್ ಕಾರ್ಡ್‌ನ ಪ್ರಯೋಜನಗಳು ಮೊದಲ ಮೆಟ್ರೋ ನಿಲ್ದಾಣದಿಂದ ಕೊನೆಯ ಮೆಟ್ರೋ ಸೇವೆಯವರೆಗೆ ಪ್ರಯಾಣಿಕರು ಯಾವುದೇ ಅಡೆತಡೆಯಿಲ್ಲದೆ ಪ್ರಯಾಣಿಸಲು ಸಾಧ್ಯವಾಗುವುದು ಈ ಟೂರಿಸ್ಟ್ ಕಾರ್ಡ್‌ನ ಪ್ರಯೋಜನವಾಗಿದೆ.

ಯಾವುದೇ ನಿಲ್ದಾಣದಲ್ಲಿ ಪ್ರವೇಶ/ನಿರ್ಗಮನ, ವ್ಯವಸ್ಥೆಯಲ್ಲಿ ವಿಸ್ತೃತ ತಂಗುವಿಕೆ, ದೂರದ ಪ್ರಯಾಣ ಇತ್ಯಾದಿಗಳಿಗಾಗಿ ಪ್ರವಾಸಿ ಸ್ಮಾರ್ಟ್ ಕಾರ್ಡ್‌ಗೆ ಯಾವುದೇ ದಂಡ ಅಥವಾ ಹೆಚ್ಚುವರಿ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಕಾಂಗ್ರೆಸ್ ನಾಯಕರಿಂದ ಐ ಆ್ಯಮ್ ಕೊಕ್ರೋಚ್ ಟೀ ಶರ್ಟ್ ಬಿಡುಗಡೆ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ಹೊಸ ಶಾಪಿಂಗ್ ಸಂಕೀರ್ಣಕ್ಕಾಗಿ ನೂರಾರು ಮರಗಳ ಮಾರಣಹೋಮ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?