ಶುರುವಾಯಿತು ಚಿನ್ನ -ಬೆಳ್ಳಿ ಮಾಸ್ಕ್ ಗಳ ಟ್ರೆಂಡ್, 9 ಮಂದಿ ಆರ್ಡರ್​ ಕೊಟ್ಟಿದ್ದಾರಂತೆ!

ತಮಿಳುನಾಡು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೆ ಇದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ದೇಶದಲ್ಲಿ ಕಡ್ಡಾಯವಾಗಿದ್ದು ಜನರು ಮಾಸ್ಕ್ ಧರಿಸುವುದರಲ್ಲಿಯೂ ವಿಭಿನ್ನತೆ ಕೇಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮುಂಬೈನ ಉದ್ಯಮಿ ಭಾರೀ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಸುದ್ಧಿಯಾಗಿದ್ದ. ಜೊತೆಗೆ ಕಳೆದ ವಾರವಷ್ಟೇ ಒಡಿಸ್ಸಾದ ಉದ್ಯಮಿಯೂ ತನಗೆ ಚಿನ್ನದ ಮೇಲಿರುವ ವ್ಯಾಮೋಹದಿಂದಾಗಿ ಮುಂಬೈನಲ್ಲಿ ಚಿನ್ನದ ಮಾಸ್ಕ್  ಖರೀದಿಸಿದ್ದ. ಈಗ ಅದನ್ನೇ ಉದ್ಯಮವಾಗಿ ಮಾಡಿಕೊಂಡಿರುವ ತಮಿಳುನಾಡಿನ ಕೊಯಂಬತ್ತೂರಿನ ರಾಧಾಕೃಷ್ಣ ಸುಂದರಂ ಆಚಾರ್ಯ ನೆಂಬ […]

ಶುರುವಾಯಿತು ಚಿನ್ನ -ಬೆಳ್ಳಿ ಮಾಸ್ಕ್ ಗಳ ಟ್ರೆಂಡ್, 9 ಮಂದಿ ಆರ್ಡರ್​ ಕೊಟ್ಟಿದ್ದಾರಂತೆ!

Updated on: Jul 21, 2020 | 11:26 AM

ತಮಿಳುನಾಡು: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರುತ್ತಲೆ ಇದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ದೇಶದಲ್ಲಿ ಕಡ್ಡಾಯವಾಗಿದ್ದು ಜನರು ಮಾಸ್ಕ್ ಧರಿಸುವುದರಲ್ಲಿಯೂ ವಿಭಿನ್ನತೆ ಕೇಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಮುಂಬೈನ ಉದ್ಯಮಿ ಭಾರೀ ಬೆಲೆ ಬಾಳುವ ಚಿನ್ನದ ಮಾಸ್ಕ್ ಧರಿಸಿ ಸುದ್ಧಿಯಾಗಿದ್ದ. ಜೊತೆಗೆ ಕಳೆದ ವಾರವಷ್ಟೇ ಒಡಿಸ್ಸಾದ ಉದ್ಯಮಿಯೂ ತನಗೆ ಚಿನ್ನದ ಮೇಲಿರುವ ವ್ಯಾಮೋಹದಿಂದಾಗಿ ಮುಂಬೈನಲ್ಲಿ ಚಿನ್ನದ ಮಾಸ್ಕ್  ಖರೀದಿಸಿದ್ದ.

ಈಗ ಅದನ್ನೇ ಉದ್ಯಮವಾಗಿ ಮಾಡಿಕೊಂಡಿರುವ ತಮಿಳುನಾಡಿನ ಕೊಯಂಬತ್ತೂರಿನ ರಾಧಾಕೃಷ್ಣ ಸುಂದರಂ ಆಚಾರ್ಯ ನೆಂಬ ಚಿನ್ನದ ಕುಶಲ ಕರ್ಮಿಯೊಬ್ಬರು ಚಿನ್ನ ಮತ್ತು ಬೆಳ್ಳಿಯ ಮಾಸ್ಕ್ ತಯಾರಿಕೆಗೆ ಮುಂದಾಗಿದ್ದಾರೆ.

18 ಕ್ಯಾರೆಟ್ ಚಿನ್ನವನ್ನು ಬಳಸಿಕೊಂಡು ತಯಾರಿಸಿದ ಮಾಸ್ಕ್ ಗೆ 2.75 ಲಕ್ಷ ಬೆಲೆ ನಿಗದಿ ಮಾಡಿದ್ದು, ಇನ್ನು ಬೆಳ್ಳಿಯ ಮಾಸ್ಕ್ ಗೆ 15,000 ರೂ ಬೆಲೆ ನಿಗದಿ ಮಾಡಿದ್ದಾರೆ. ಜೊತೆಗೆ ಈಗಾಗಲೇ 9 ಮಾಸ್ಕ್ ಗಳನ್ನು ತಯಾರಿಸಿಕೊಡುವಂತೆ ಆರ್ಡರ್ ಕೂಡ ಬಂದಿದೆಯಂತೆ.

Published On - 11:18 am, Tue, 21 July 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us