AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಒಂದೆರಡು ದಿನಗಳವರೆಗೆ ಮಾಂಸ ತಿನ್ನದೇ ಇರಬಹುದು: ಅರ್ಜಿದಾರರಿಗೆ ಗುಜರಾತ್‌ ಹೈಕೋರ್ಟ್‌

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ.

ನೀವು ಒಂದೆರಡು ದಿನಗಳವರೆಗೆ ಮಾಂಸ ತಿನ್ನದೇ ಇರಬಹುದು: ಅರ್ಜಿದಾರರಿಗೆ ಗುಜರಾತ್‌ ಹೈಕೋರ್ಟ್‌
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 31, 2022 | 9:41 PM

Share

ದೆಹಲಿ: ಜೈನರ ಹಬ್ಬದ ಪ್ರಯುಕ್ತ ಅಹಮದಾಬಾದ್‌ನಲ್ಲಿ (Ahmedabad) ಕಸಾಯಿಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ವಿರೋಧಿಸಿ ಗುಜರಾತ್‌ ಹೈಕೋರ್ಟ್​​ನಲ್ಲಿ (Gujarat High Court) ಪ್ರಶ್ನಿಸಿದ ಅರ್ಜಿದಾರರಿಗೆ, ನೀವು ಕೆಲವು ದಿನಗಳ ಕಾಲ ಮಾಂಸಾಹಾರ ಸೇವಿಸದೇ ಇರಬಹುದು ಎಂದು ಹೇಳಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ. ಆದಾಗ್ಯೂ, ಅರ್ಜಿದಾರರಾದ ಕುಲ್ ಹಿಂದ್ ಜಮಿಯತ್-ಅಲ್ ಖುರೆಶ್ ಆಕ್ಷನ್ ಕಮಿಟಿ ಗುಜರಾತ್, ಎಎಂಸಿ ಆದೇಶವು ಜನರ ಆಹಾರದ ಹಕ್ಕನ್ನು “ನಿರ್ಬಂಧಿಸುತ್ತದೆ” ಎಂದು ಹೈಕೋರ್ಟ್‌ಗೆ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸಂದೀಪ್ ಭಟ್, ‘ಒಂದು ಅಥವಾ ಎರಡು ದಿನ ಮಾಂಸಾಹಾರ ಸೇವನೆ ಮಾಡದೇ ಇರಬಹುದು ಎಂದಿದ್ದಾರೆ. ಸಮಿತಿಯನ್ನು ಪ್ರತಿನಿಧಿಸಿದ ಡ್ಯಾನಿಶ್ ಖುರೇಷಿ ರಜಾವಾಲಾ, ವಿಷಯವು ತನ್ನನ್ನು ತಾನು ನಿರ್ಬಂಧಿಸಿಕೊಳ್ಳುವುದರ ಬಗ್ಗೆ ಅಲ್ಲ, ಆದರೆ ಮೂಲಭೂತ ಹಕ್ಕುಗಳ ಬಗ್ಗೆ ಹೇಳಿದರು.

ಈಗ ಅಹಮದಾಬಾದ್ ನಗರದಲ್ಲಿ ಒಂದೇ ಒಂದು ಕಸಾಯಿಖಾನೆ ಇದೆ ಮತ್ತು ಅದನ್ನು ಜೈನರ ಹಬ್ಬ ಪರ್ಯುಶನ್ ಸಂದರ್ಭದಲ್ಲಿ ಮುಚ್ಚಲಾಗಿದೆ. ಆಗಸ್ಟ್ 23 ರಂದು ಎಎಂಸಿ ಕಮಿಷನರ್ ಮುಂದೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲಾಯಿತು ಎಂದು ಅರ್ಜಿದಾರರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ವಿಚಾರಣೆಯ ನಂತರ ನ್ಯಾಯಮೂರ್ತಿ ಭಟ್ ಅವರು ಪ್ರಕರಣವನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಾಂಸಾಹಾರಿ ಆಹಾರದ ಕೈಗಾಡಿಗಳನ್ನು ಬೀದಿಗಳಿಂದ ತೆಗೆದುಹಾಕಲು ಗುಜರಾತ್ ಪ್ರಯತ್ನಿಸುತ್ತಿದೆ ಎಂದು ಅರ್ಜಿದಾರರೊಬ್ಬರು ದೂರಿದ್ದು, ಇದು ನಿಜವೇ ಎಂದು ನ್ಯಾಯಾಲಯ ಎಂದು ರಾಜ್ಯ ಸರ್ಕಾರವನ್ನು ಕೇಳಿತ್ತು. ಆದಾಗ್ಯೂ ಈ ಆರೋಪವನ್ನು ರಾಜ್ಯ ಸರ್ಕಾರ ನಿರಾಕರಿಸಿತ್ತು.

Follow Us
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು