AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಒಂದೆರಡು ದಿನಗಳವರೆಗೆ ಮಾಂಸ ತಿನ್ನದೇ ಇರಬಹುದು: ಅರ್ಜಿದಾರರಿಗೆ ಗುಜರಾತ್‌ ಹೈಕೋರ್ಟ್‌

ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ.

ನೀವು ಒಂದೆರಡು ದಿನಗಳವರೆಗೆ ಮಾಂಸ ತಿನ್ನದೇ ಇರಬಹುದು: ಅರ್ಜಿದಾರರಿಗೆ ಗುಜರಾತ್‌ ಹೈಕೋರ್ಟ್‌
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 31, 2022 | 9:41 PM

Share

ದೆಹಲಿ: ಜೈನರ ಹಬ್ಬದ ಪ್ರಯುಕ್ತ ಅಹಮದಾಬಾದ್‌ನಲ್ಲಿ (Ahmedabad) ಕಸಾಯಿಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಿರುವುದನ್ನು ವಿರೋಧಿಸಿ ಗುಜರಾತ್‌ ಹೈಕೋರ್ಟ್​​ನಲ್ಲಿ (Gujarat High Court) ಪ್ರಶ್ನಿಸಿದ ಅರ್ಜಿದಾರರಿಗೆ, ನೀವು ಕೆಲವು ದಿನಗಳ ಕಾಲ ಮಾಂಸಾಹಾರ ಸೇವಿಸದೇ ಇರಬಹುದು ಎಂದು ಹೇಳಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಎಎಂಸಿ, ನಗರದ ಏಕೈಕ ಕಸಾಯಿಖಾನೆಯನ್ನು ಆಗಸ್ಟ್ 24 ಮತ್ತು 31 ರ ನಡುವೆ ಮತ್ತು ಸೆಪ್ಟೆಂಬರ್ 4 ಮತ್ತು 9 ರ ನಡುವೆ ಹಬ್ಬಗಳ ಕಾರಣದಿಂದ ಮುಚ್ಚಲು ಆದೇಶಿಸಿದೆ. ಆದಾಗ್ಯೂ, ಅರ್ಜಿದಾರರಾದ ಕುಲ್ ಹಿಂದ್ ಜಮಿಯತ್-ಅಲ್ ಖುರೆಶ್ ಆಕ್ಷನ್ ಕಮಿಟಿ ಗುಜರಾತ್, ಎಎಂಸಿ ಆದೇಶವು ಜನರ ಆಹಾರದ ಹಕ್ಕನ್ನು “ನಿರ್ಬಂಧಿಸುತ್ತದೆ” ಎಂದು ಹೈಕೋರ್ಟ್‌ಗೆ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ ಸಂದೀಪ್ ಭಟ್, ‘ಒಂದು ಅಥವಾ ಎರಡು ದಿನ ಮಾಂಸಾಹಾರ ಸೇವನೆ ಮಾಡದೇ ಇರಬಹುದು ಎಂದಿದ್ದಾರೆ. ಸಮಿತಿಯನ್ನು ಪ್ರತಿನಿಧಿಸಿದ ಡ್ಯಾನಿಶ್ ಖುರೇಷಿ ರಜಾವಾಲಾ, ವಿಷಯವು ತನ್ನನ್ನು ತಾನು ನಿರ್ಬಂಧಿಸಿಕೊಳ್ಳುವುದರ ಬಗ್ಗೆ ಅಲ್ಲ, ಆದರೆ ಮೂಲಭೂತ ಹಕ್ಕುಗಳ ಬಗ್ಗೆ ಹೇಳಿದರು.

ಈಗ ಅಹಮದಾಬಾದ್ ನಗರದಲ್ಲಿ ಒಂದೇ ಒಂದು ಕಸಾಯಿಖಾನೆ ಇದೆ ಮತ್ತು ಅದನ್ನು ಜೈನರ ಹಬ್ಬ ಪರ್ಯುಶನ್ ಸಂದರ್ಭದಲ್ಲಿ ಮುಚ್ಚಲಾಗಿದೆ. ಆಗಸ್ಟ್ 23 ರಂದು ಎಎಂಸಿ ಕಮಿಷನರ್ ಮುಂದೆ ಸೂಕ್ತ ಪ್ರಾತಿನಿಧ್ಯವನ್ನು ನೀಡಲಾಯಿತು ಎಂದು ಅರ್ಜಿದಾರರು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ವಿಚಾರಣೆಯ ನಂತರ ನ್ಯಾಯಮೂರ್ತಿ ಭಟ್ ಅವರು ಪ್ರಕರಣವನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿದರು.

ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮಾಂಸಾಹಾರಿ ಆಹಾರದ ಕೈಗಾಡಿಗಳನ್ನು ಬೀದಿಗಳಿಂದ ತೆಗೆದುಹಾಕಲು ಗುಜರಾತ್ ಪ್ರಯತ್ನಿಸುತ್ತಿದೆ ಎಂದು ಅರ್ಜಿದಾರರೊಬ್ಬರು ದೂರಿದ್ದು, ಇದು ನಿಜವೇ ಎಂದು ನ್ಯಾಯಾಲಯ ಎಂದು ರಾಜ್ಯ ಸರ್ಕಾರವನ್ನು ಕೇಳಿತ್ತು. ಆದಾಗ್ಯೂ ಈ ಆರೋಪವನ್ನು ರಾಜ್ಯ ಸರ್ಕಾರ ನಿರಾಕರಿಸಿತ್ತು.

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ