ಹಾಪುರ್: ಸ್ನೇಹಿತೆಯ ತಂದೆ ಹಾಗೂ ಆತನ ಸ್ನೇಹಿತರಿಂದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಇನ್ನುಮುಂದೆ ಹೆಣ್ಣುಮಕ್ಕಳನ್ನು ಅವರ ಸ್ನೇಹಿತರ ಮನೆಗೆ ಕಳುಹಿಸಲು ಕೂಡ ಪೋಷಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 14 ವರ್ಷದ ಬಾಲಕಿ ಮೇಲೆ ಆಕೆಯ ಸ್ನೇಹಿತೆಯ ತಂದೆ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ(Gangrape)ವೆಸಗಿರುವ ಘಟನೆ ಹಾಪುರದಲ್ಲಿ ನಡೆದಿದೆ. ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳನ್ನು ಸ್ನೇಹಿತೆ ತನ್ನ ಮನೆಗೆ ಆಹ್ವಾನಿಸಿದ್ದಳು, ಬಳಿಕ ಆತನ ತಂದೆ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಯಲು ಕೊಟ್ಟು ಬಳಿಕ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾರೆ.

ಹಾಪುರ್: ಸ್ನೇಹಿತೆಯ ತಂದೆ ಹಾಗೂ ಆತನ ಸ್ನೇಹಿತರಿಂದ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಅಪಹರಣ

Updated on: Dec 01, 2025 | 11:52 AM

ಹಾಪುರ್, ಡಿಸೆಂಬರ್ 01: ಇನ್ನುಮುಂದೆ ಹೆಣ್ಣುಮಕ್ಕಳನ್ನು ಅವರ ಸ್ನೇಹಿತರ ಮನೆಗೆ ಕಳುಹಿಸಲು ಕೂಡ ಪೋಷಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. 14 ವರ್ಷದ ಬಾಲಕಿ ಮೇಲೆ ಆಕೆಯ ಸ್ನೇಹಿತೆಯ ತಂದೆ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ(Gangrape)ವೆಸಗಿರುವ ಘಟನೆ ಹಾಪುರದಲ್ಲಿ ನಡೆದಿದೆ. ಪಿಲ್ಖುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳನ್ನು ಸ್ನೇಹಿತೆ ತನ್ನ ಮನೆಗೆ ಆಹ್ವಾನಿಸಿದ್ದಳು, ಬಳಿಕ ಆತನ ತಂದೆ ಬಾಲಕಿಗೆ ಮತ್ತು ಬರುವ ಜ್ಯೂಸ್ ಕುಡಿಯಲು ಕೊಟ್ಟು ಬಳಿಕ ಸ್ನೇಹಿತರೊಂದಿಗೆ ಸೇರಿ ಅತ್ಯಾಚಾರವೆಸಗಿದ್ದಾರೆ.

ಸ್ನೇಹಿತೆಯ ತಂದೆ ಮತ್ತು ಇತರ ಇಬ್ಬರು ಪುರುಷರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಶಂಕಿತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. 12 ದಿನಗಳಿಂದ ಕಾಣೆಯಾಗಿದ್ದ ಬಾಲಕಿ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ದೂರಿನ ಪ್ರಕಾರ, ನವೆಂಬರ್ 13 ರಿಂದ ನವೆಂಬರ್ 25 ರವರೆಗೆ ಬಾಲಕಿ ಕಾಣೆಯಾಗಿದ್ದಳು. ಆಕೆಯ ಕುಟುಂಬವು ಹತ್ತಿರದ ಪ್ರದೇಶಗಳಲ್ಲಿ ಆಕೆಗಾಗಿ ಹುಡುಕಾಡಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಮರುದಿನ, ಅವರು ಪಿಲ್ಖುವಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದರು. ನವೆಂಬರ್ 25 ರಂದು, ಗಾಂಧಿ ಬಜಾರ್‌ನಲ್ಲಿರುವ ಮನೆಯೊಳಗೆ ಬಾಲಕಿಯೊಬ್ಬಳು ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ ಎಂದು ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಮತ್ತಷ್ಟು ಓದಿ: ಪುರಿಯಲ್ಲಿ ಗೆಳೆಯನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಆಕೆಯ ಸಂಬಂಧಿಕರು ಬಂದಾಗ, ಅವರು ಆಕೆಯನ್ನು ಕಾಣೆಯಾದ ಬಾಲಕಿ ಎಂದು ಗುರುತಿಸಿದರು. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಪ್ರಜ್ಞೆ ಮರಳಿತು ಮತ್ತು ಕಳೆದ 12 ದಿನಗಳ ಘಟನೆಗಳ ಬಗ್ಗೆ ಪೊಲೀಸರಿಗೆ ವಿವರಗಳನ್ನು ನೀಡಿದ್ದಾಳೆ. ನವೆಂಬರ್ 13 ರಂದು ತನ್ನ ಸ್ನೇಹಿತ ತನ್ನನ್ನು ಮನೆಗೆ ಆಹ್ವಾನಿಸಿ ಮಾದಕ ದ್ರವ್ಯ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದರು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

ಅದನ್ನು ಕುಡಿದ ಸ್ವಲ್ಪ ಸಮಯದ ನಂತರ ತಾನು ಪ್ರಜ್ಞೆ ಕಳೆದುಕೊಂಡೆ ಎಂದು ಆಕೆ ಹೇಳಿದ್ದಾಳೆ. ಎಚ್ಚರವಾದಾಗ, ತಾನು ಒಂದು ಕೋಣೆಯಲ್ಲಿ ಬಂಧಿಯಾಗಿದ್ದೆ. ಕೋಣೆಯೊಳಗೆ ತನ್ನ ಸ್ನೇಹಿತೆಯ ತಂದೆ ಮತ್ತು ಆತನ ಇಬ್ಬರು ಸಹಚರರಿದ್ದರು.
ಆ ವ್ಯಕ್ತಿಗಳು ತನಗೆ ಬೆದರಿಕೆ ಹಾಕಿದ್ದರು ಪದೇ ಪದೇ ಮಾದಕ ದ್ರವ್ಯ ನೀಡುತ್ತಿದ್ದರು ಮತ್ತು ಹೊರಗೆ ಹೋಗದಂತೆ ತಡೆದಿದ್ದರು. ಪೊಲೀಸರು ಪ್ರಜ್ಞಾ, ಆಶಿಶ್, ಹೇಮಂತ್ ಮತ್ತು ನರೇಶ್ ವಿರುದ್ಧ ಪ್ರಕರಣ ದಾಖಲಿಸಿದರು.

ಅಧಿಕಾರಿಗಳು ಶೀಘ್ರದಲ್ಲೇ ಹೇಮಂತ್ ಮತ್ತು ನರೇಶ್ ಅವರನ್ನು ಬಂಧಿಸಿದರು. ಉಳಿದ ಆರೋಪಿಗಳನ್ನು ಸಹ ಬಂಧಿಸಲಾಗುವುದು ಮತ್ತು ನಡೆಯುತ್ತಿರುವ ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:50 am, Mon, 1 December 25

Loading...
Unable to load recommendations.
Follow Us