AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪಿ ರಾಮ್​ ರಹೀಮ್​ ಸಿಂಗ್​ ಭೇಟಿಗೆ, ಅಪರಿಚಿತರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಎಸ್​ಪಿ ಅಮಾನತು

ಡಿಎಸ್​ಪಿ ಶಂಶೇರ್​ ಸಿಂಗ್​ ಅಮಾನತುಗೊಂಡ ಪೊಲೀಸ್​ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್​ ಆದೇಶದಲ್ಲಿ, ಶಂಶೇರ್​ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದೂ ಹೇಳಲಾಗಿದೆ.

ಅತ್ಯಾಚಾರ ಆರೋಪಿ ರಾಮ್​ ರಹೀಮ್​ ಸಿಂಗ್​ ಭೇಟಿಗೆ, ಅಪರಿಚಿತರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಎಸ್​ಪಿ ಅಮಾನತು
ಗುರ್ಮಿತ್​ ರಾಮ್​ ರಹೀಮ್​
TV9 Web
| Edited By: |

Updated on:Aug 24, 2021 | 6:13 PM

Share

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ, ಸದ್ಯ ರೊಹ್ಟಕ್ ಜೈಲಿನಲ್ಲಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಮ್​ ಸಿಂಗ್​​ನನ್ನು ಭೇಟಿಯಾಗಲು ಒಂದಷ್ಟು ಜನರಿಗೆ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟ ಡಿಎಸ್​​ಪಿ (ಪೊಲೀಸ್ ಉಪ ಅಧೀಕ್ಷಕ)ಯನ್ನು ಹರ್ಯಾಣ ಸರ್ಕಾರ ಅಮಾನತುಗಳಿಸಿದೆ. ಈ ರಾಮ್​ ರಹೀಮ್ ಸಿಂಗ್ ಜುಲೈ ತಿಂಗಳಲ್ಲಿ ಆರೋಗ್ಯ ತಪಾಸಣೆಗೆಂದು ದೆಹಲಿಯ ಏಮ್ಸ್​ಗೆ ಹೋಗಿದ್ದರು. ಆ ವೇಳೆ ಕೆಲವು ಮಂದಿ ರಹೀಮ್​ ಸಿಂಗ್​ ಭೇಟಿಗೆ ಆಗಮಿಸಿದ್ದರು. ಕಾನೂನು ಪ್ರಕಾರ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ಕೊಡುವಂತಿರಲಿಲ್ಲ. ಆದರೆ ಭದ್ರತಾ ದೃಷ್ಟಿಯಿಂದ ಜತೆಗಿದ್ದ ಡಿಎಸ್​ಪಿ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಹೇಳಲಾಗಿದೆ. ಇದೀಗ ಅವರನ್ನು ಹರ್ಯಾಣ ಸರ್ಕಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.

ಡಿಎಸ್​ಪಿ ಶಂಶೇರ್​ ಸಿಂಗ್​ ಅಮಾನತುಗೊಂಡ ಪೊಲೀಸ್​ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್​ ಆದೇಶದಲ್ಲಿ, ಶಂಶೇರ್​ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದು ಹರ್ಯಾಣ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್​ ಅರೋರಾ ನೀಡಿದ್ದಾರೆ.  ಜುಲೈನಲ್ಲಿ ರಹೀಮ್​ ಸಿಂಗ್​ ವೈದ್ಯಕೀಯ ತಪಾಸಣೆಗೆ ಹೋದಾಗ, ಅವರನ್ನು ಭೇಟಿಯಾಗಲು ನಾಲ್ವರು ಆಗಮಿಸಿದ್ದರು. ಅವರೆಲ್ಲರನ್ನೂ ರಹೀಮ್​ ಬಳಿ ಹೋಗಲು ಬಿಡಲಾಗಿತ್ತು. ಏಮ್ಸ್​ನಿಂದ ವಾಪಸ್​ ರೋಹ್ಟಕ್​ ಜೈಲಿಗೆ ಬಂದ ಬಳಿಕ ಈ ವಿಚಾರ ಹೊರಬಿದ್ದಿತ್ತು. ಅದು ಹರ್ಯಾಣ ಕಾರಾಗೃಹ ಸಚಿವಾಲಯದ ಸಚಿವ ರಂಜಿತ್​ ಸಿಂಗ್​ ಚೌತಾಲಾ ಗಮನಕ್ಕೆ ಬಂದು, ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ: Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

Video: ಬೆಂಕಿ ತಗುಲಿದ್ದ ಕಟ್ಟಡದಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಿದ 6 ಮಂದಿ; ಇವರ ಮಾನವ ಏಣಿಗೆ ಮೆಚ್ಚುಗೆಗಳ ಸುರಿಮಳೆ

Published On - 6:12 pm, Tue, 24 August 21

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್