AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತ್ಯಾಚಾರ ಆರೋಪಿ ರಾಮ್​ ರಹೀಮ್​ ಸಿಂಗ್​ ಭೇಟಿಗೆ, ಅಪರಿಚಿತರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಎಸ್​ಪಿ ಅಮಾನತು

ಡಿಎಸ್​ಪಿ ಶಂಶೇರ್​ ಸಿಂಗ್​ ಅಮಾನತುಗೊಂಡ ಪೊಲೀಸ್​ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್​ ಆದೇಶದಲ್ಲಿ, ಶಂಶೇರ್​ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದೂ ಹೇಳಲಾಗಿದೆ.

ಅತ್ಯಾಚಾರ ಆರೋಪಿ ರಾಮ್​ ರಹೀಮ್​ ಸಿಂಗ್​ ಭೇಟಿಗೆ, ಅಪರಿಚಿತರಿಗೆ ಅವಕಾಶ ಮಾಡಿಕೊಟ್ಟಿದ್ದ ಡಿಎಸ್​ಪಿ ಅಮಾನತು
ಗುರ್ಮಿತ್​ ರಾಮ್​ ರಹೀಮ್​
TV9 Web
| Edited By: |

Updated on:Aug 24, 2021 | 6:13 PM

Share

ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ, ಸದ್ಯ ರೊಹ್ಟಕ್ ಜೈಲಿನಲ್ಲಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್​ ರಾಮ್​ ರಹೀಮ್​ ಸಿಂಗ್​​ನನ್ನು ಭೇಟಿಯಾಗಲು ಒಂದಷ್ಟು ಜನರಿಗೆ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟ ಡಿಎಸ್​​ಪಿ (ಪೊಲೀಸ್ ಉಪ ಅಧೀಕ್ಷಕ)ಯನ್ನು ಹರ್ಯಾಣ ಸರ್ಕಾರ ಅಮಾನತುಗಳಿಸಿದೆ. ಈ ರಾಮ್​ ರಹೀಮ್ ಸಿಂಗ್ ಜುಲೈ ತಿಂಗಳಲ್ಲಿ ಆರೋಗ್ಯ ತಪಾಸಣೆಗೆಂದು ದೆಹಲಿಯ ಏಮ್ಸ್​ಗೆ ಹೋಗಿದ್ದರು. ಆ ವೇಳೆ ಕೆಲವು ಮಂದಿ ರಹೀಮ್​ ಸಿಂಗ್​ ಭೇಟಿಗೆ ಆಗಮಿಸಿದ್ದರು. ಕಾನೂನು ಪ್ರಕಾರ ಅವರನ್ನು ಭೇಟಿಯಾಗಲು ಯಾರಿಗೂ ಅವಕಾಶ ಕೊಡುವಂತಿರಲಿಲ್ಲ. ಆದರೆ ಭದ್ರತಾ ದೃಷ್ಟಿಯಿಂದ ಜತೆಗಿದ್ದ ಡಿಎಸ್​ಪಿ ಅನಧಿಕೃತವಾಗಿ ಅವಕಾಶ ಮಾಡಿಕೊಟ್ಟಿದ್ದರು ಎಂದು ಹೇಳಲಾಗಿದೆ. ಇದೀಗ ಅವರನ್ನು ಹರ್ಯಾಣ ಸರ್ಕಾರ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.

ಡಿಎಸ್​ಪಿ ಶಂಶೇರ್​ ಸಿಂಗ್​ ಅಮಾನತುಗೊಂಡ ಪೊಲೀಸ್​ ಅಧಿಕಾರಿಯಾಗಿದ್ದಾರೆ. ಅವರ ಸಸ್ಪೆಂಡ್​ ಆದೇಶದಲ್ಲಿ, ಶಂಶೇರ್​ ಸಿಂಗ್ ಅಮಾನತು ಅವಧಿಯಲ್ಲಿ ತಮ್ಮ ಸ್ವಸ್ಥಾನ ಬಿಟ್ಟು, ಅನುಮತಿ ಇಲ್ಲದೆ ಎಲ್ಲಿಗೂ ಹೋಗುವಂತಿಲ್ಲ ಎಂದು ಹರ್ಯಾಣ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್​ ಅರೋರಾ ನೀಡಿದ್ದಾರೆ.  ಜುಲೈನಲ್ಲಿ ರಹೀಮ್​ ಸಿಂಗ್​ ವೈದ್ಯಕೀಯ ತಪಾಸಣೆಗೆ ಹೋದಾಗ, ಅವರನ್ನು ಭೇಟಿಯಾಗಲು ನಾಲ್ವರು ಆಗಮಿಸಿದ್ದರು. ಅವರೆಲ್ಲರನ್ನೂ ರಹೀಮ್​ ಬಳಿ ಹೋಗಲು ಬಿಡಲಾಗಿತ್ತು. ಏಮ್ಸ್​ನಿಂದ ವಾಪಸ್​ ರೋಹ್ಟಕ್​ ಜೈಲಿಗೆ ಬಂದ ಬಳಿಕ ಈ ವಿಚಾರ ಹೊರಬಿದ್ದಿತ್ತು. ಅದು ಹರ್ಯಾಣ ಕಾರಾಗೃಹ ಸಚಿವಾಲಯದ ಸಚಿವ ರಂಜಿತ್​ ಸಿಂಗ್​ ಚೌತಾಲಾ ಗಮನಕ್ಕೆ ಬಂದು, ತನಿಖೆಗೆ ಆದೇಶಿಸಲಾಗಿತ್ತು.

ಇದನ್ನೂ ಓದಿ: Indian Railways: ರೈಲ್ವೇ ಇಲಾಖೆಯ ಉದ್ಯೋಗ ಹುಡುಕುವುದು ಹೇಗೆ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ವಿವರ

Video: ಬೆಂಕಿ ತಗುಲಿದ್ದ ಕಟ್ಟಡದಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಿದ 6 ಮಂದಿ; ಇವರ ಮಾನವ ಏಣಿಗೆ ಮೆಚ್ಚುಗೆಗಳ ಸುರಿಮಳೆ

Published On - 6:12 pm, Tue, 24 August 21

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ