AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೆಂಕಿ ತಗುಲಿದ್ದ ಕಟ್ಟಡದಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಿದ 6 ಮಂದಿ; ಇವರ ಮಾನವ ಏಣಿಗೆ ಮೆಚ್ಚುಗೆಗಳ ಸುರಿಮಳೆ

ಟ್ರೆಂಡಿಂಗ್​ ಇನ್​ ಚೀನಾ ಎಂಬ ಫೇಸ್​ಬುಕ್​ ಅಕೌಂಟ್​​ನಲ್ಲಿ ವಿಡಿಯೋ ಶೇರ್​ ಆಗಿದೆ. ಈ ಆರು ಮಂದಿ ಖಾಲಿ ಕೈಯಲ್ಲಿ ಕಟ್ಟಡಕ್ಕೆ ಹಾಕಿದ್ದ ಗ್ರಿಲ್​ ಹತ್ತಿದ್ದಾರೆ.

Video: ಬೆಂಕಿ ತಗುಲಿದ್ದ ಕಟ್ಟಡದಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಿದ 6 ಮಂದಿ; ಇವರ ಮಾನವ ಏಣಿಗೆ ಮೆಚ್ಚುಗೆಗಳ ಸುರಿಮಳೆ
ಚೀನಾದಲ್ಲಿ ಇಬ್ಬರು ಮಕ್ಕಳ ರಕ್ಷಣೆ
TV9 Web
| Updated By: Lakshmi Hegde|

Updated on: Aug 24, 2021 | 5:44 PM

Share

ಬೆಂಕಿಯಿಂದ ಹೊತ್ತಿ ಉರಿಯುತ್ತಿರುವ ಕಟ್ಟಡದಿಂದ ಇಬ್ಬರು ಮಕ್ಕಳನ್ನು, 6 ಮಂದಿ ಸೇರಿ, ಮಾನವ ಏಣಿ ನಿರ್ಮಿಸಿಕೊಂಡು ರಕ್ಷಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಹಾಗೇ, ಆರು ಮಂದಿಯ ಧೈರ್ಯ ಮತ್ತು ಮಕ್ಕಳನ್ನು ಅವರು ರಕ್ಷಿಸಿದ ರೀತಿಗೆ ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ. ಈ ಘಟನೆ ನಡೆದದ್ದು ಚೀನಾದಲ್ಲಿ ಎಂದು ವರದಿಯಾಗಿದೆ.

ಚೀನಾದ ಹುನಾನ್​ ಪ್ರಾಂತ್ಯದ ಕ್ಸಿಂಟಿಯಾನ್​ ಎಂಬಲ್ಲಿ ಈ ಘಟನೆ ನಡೆದಿದೆ. ಅಲ್ಲಿನ ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿತ್ತು. ಅದರ ಮೂರನೇ ಅಂತಸ್ತಿನಲ್ಲಿದ್ದ ಒಂದು ಮನೆಯಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಸಿಲುಕಿದ್ದರು. ಬೆಂಕಿ ಬಿದ್ದ ಕಟ್ಟಡದಿಂದ ಅವರನ್ನು ರಕ್ಷಿಸುವುದು ಸವಾಲಾಗಿತ್ತು. ಆದರೆ ಆರು ಮಂದಿ ಸೇರಿ, ಕಟ್ಟಡದ ಗ್ರಿಲ್​ ಮೇಲೆ ನಿಂತು..ಮಾನವ ಏಣಿ ರಚಿಸಿಕೊಂಡು ಇಬ್ಬರನ್ನೂ ಯಶಸ್ವಿಯಾಗಿ ರಕ್ಷಿಸಿದ್ದಾರೆ.  ಅದೂ ಕೂಡ ಆ ಮಕ್ಕಳನ್ನು ಕಿಟಕಿಯಿಂದ ಹೊರಗೆ ತೆಗೆದಿದ್ದಾರೆ.

ಟ್ರೆಂಡಿಂಗ್​ ಇನ್​ ಚೀನಾ ಎಂಬ ಫೇಸ್​ಬುಕ್​ ಅಕೌಂಟ್​​ನಲ್ಲಿ ವಿಡಿಯೋ ಶೇರ್​ ಆಗಿದೆ. ಈ ಆರು ಮಂದಿ ಖಾಲಿ ಕೈಯಲ್ಲಿ ಕಟ್ಟಡಕ್ಕೆ ಹಾಕಿದ್ದ ಗ್ರಿಲ್​ ಹತ್ತಿದ್ದಾರೆ. ಒಬ್ಬರ ಕೆಳಗೆ ಒಬ್ಬರಂತೆ ನಿಂತು..ಮಕ್ಕಳನ್ನು ಕೆಳಗೆ ಇಳಿಸಿದ್ದಾರೆ. ವಿಡಿಯೋದ ಕೊನೆಯಲ್ಲಿ, ಕೆಲವು ಅಗ್ನಿಶಾಮಕ ದಳದ ಸಿಬ್ಬಂದಿ ಇಲ್ಲಿಗೆ ಬರುವುದನ್ನು ನೋಡಬಹುದು. ನೆಟ್ಟಿಗರು ಈ ದೃಶ್ಯ ನೋಡಿ ಸಿಕ್ಕಾಪಟೆ ಖುಷಿ ಪಟ್ಟಿದ್ದಾರೆ.

ಇದನ್ನೂ ಓದಿ: ಆಕ್ಷನ್ ಪ್ರಿನ್ಸ್​ಗೆ ಆಕ್ಷನ್ ಕಟ್ ಹೇಳಲಿದ್ದಾರೆ ಶೋ ಮ್ಯಾನ್; ಅನೌನ್ಸ್ ಆಯ್ತು ಧ್ರುವ ಸರ್ಜಾ- ಪ್ರೇಮ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ