AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ "ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ" ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ
ಸೇತುವೆಯಲ್ಲಿ ಸಿಲುಕಿದವರು
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Sep 03, 2024 | 8:53 PM

Share

ಹೈದರಾಬಾದ್ ಸೆಪ್ಟೆಂಬರ್ 03: ತೆಲಂಗಾಣದ (Telangana Floods) ಖಮ್ಮಂ (Khammam )ಜಿಲ್ಲೆಯ ಮುನ್ನೇರು ನದಿಯ ಪ್ರಕಾಶ್ ನಗರ ಸೇತುವೆಯ ಮೇಲೆ ಸಿಲುಕಿದ್ದ ಒಂಬತ್ತು ಜನರನ್ನು ಹರ್ಯಾಣದ ವ್ಯಕ್ತಿ ಸುಭಾನ್ ಖಾನ್ ರಕ್ಷಿಸಿದ್ದು, ಈ ಮೂಲಕ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಸೇತುವೆಯ ಮೇಲೆ ಸಿಲುಕಿರುವ ಜನರು ತಮ್ಮನ್ನು ರಕ್ಷಿಸಲು ರಾಜ್ಯ ಸರ್ಕಾರದಿಂದ ಸಹಾಯವನ್ನು ಕೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರತಿಕೂಲ ಹವಾಮಾನದ ಕಾರಣ, ಸರ್ಕಾರ ನಿಯೋಜಿಸಿದ ಹೆಲಿಕಾಪ್ಟರ್ ಅವರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಈ ವೇಳೆ ಖಮ್ಮಂನಲ್ಲಿ ಕೆಲಸ ಮಾಡುವ ಹರ್ಯಾಣ ಮೂಲದ ಸುಭಾನ್ ಖಾನ್ ಒಂಬತ್ತು ಜನರನ್ನು ರಕ್ಷಿಸಲು ತಮ್ಮ ಜೆಸಿಬಿ ಬುಲ್ಡೋಜರ್ ಬಳಸಿದ್ದರು. ಪ್ರಾಣಕ್ಕೆ ಅಪಾಯವಿದ್ದರೂ ಅದನ್ನು ಲೆಕ್ಕಿಸದೆ ಅಲ್ಲಿ ಸಿಲುಕಿರುವ ಒಂಬತ್ತು ಮಂದಿಯನ್ನೂ ಖಾನ್ ರಕ್ಷಿಸಿದ್ದಾರೆ.

9 ಜನರನ್ನು ಏಕಾಂಗಿಯಾಗಿ ಕಾಪಾಡಿದ ಖಾನ್

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ “ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ” ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರ ಮಗಳು ತನ್ನ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳುವುದನ್ನು ಕೇಳಬಹುದು. ನಾನು ನಡುಗುತ್ತಿದ್ದೆ. ಆದರೆ ಅಪ್ಪ ಏನು ಮಾಡಬೇಕು ಎಂದು ಬಯಸಿದರೋ ಅದನ್ನು ಅವರು ಮಾಡಿದ್ದಾರೆ ಎಂದು ಮಗಳು ಹೇಳಿದ್ದಾಳೆ. ಖಾನ್ ಅವರ ಧೀರೋದಾತ್ತ ಕ್ರಮಕ್ಕಾಗಿ ಅವರ ಫೋನ್‌ಗೆ ಪ್ರಶಂಸೆಯ ಸಂದೇಶಗಳು ಹರಿದಾಡುತ್ತಿವೆ. ಬಿಆರ್‌ಎಸ್‌ ಮುಖಂಡ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್‌ ಕೂಡ ಕರೆ ಮಾಡಿ ಅವರ ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ: ‘ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ ಎಂದ ಬಾಂಬೆ ಹೈಕೋರ್ಟ್

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಕೆಟಿಆರ್, “ಸುಭಾನ್ ಖಾನ್-ಬುಲ್ಡೋಜರ್ ಮ್ಯಾನ್, ಎಲ್ಲಾ ಹೀರೋಗಳು ಕ್ಯಾಪ್ ಧರಿಸುವುದಿಲ್ಲ ಎಂದು ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Rashmi Kallakatta
Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!