AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ "ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ" ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಖಮ್ಮಂ ಪ್ರವಾಹದ ವೇಳೆ ಸಿಲುಕಿದ 9 ಜನರನ್ನು ರಕ್ಷಿಸಿದ ಹರ್ಯಾಣದ ವ್ಯಕ್ತಿ; ಈತ ನಿಜವಾದ ಹೀರೋ
ಸೇತುವೆಯಲ್ಲಿ ಸಿಲುಕಿದವರು
Follow us
ರಶ್ಮಿ ಕಲ್ಲಕಟ್ಟ
|

Updated on: Sep 03, 2024 | 8:53 PM

ಹೈದರಾಬಾದ್ ಸೆಪ್ಟೆಂಬರ್ 03: ತೆಲಂಗಾಣದ (Telangana Floods) ಖಮ್ಮಂ (Khammam )ಜಿಲ್ಲೆಯ ಮುನ್ನೇರು ನದಿಯ ಪ್ರಕಾಶ್ ನಗರ ಸೇತುವೆಯ ಮೇಲೆ ಸಿಲುಕಿದ್ದ ಒಂಬತ್ತು ಜನರನ್ನು ಹರ್ಯಾಣದ ವ್ಯಕ್ತಿ ಸುಭಾನ್ ಖಾನ್ ರಕ್ಷಿಸಿದ್ದು, ಈ ಮೂಲಕ ನಿಜ ಜೀವನದಲ್ಲಿ ಹೀರೋ ಆಗಿದ್ದಾರೆ. ಸೇತುವೆಯ ಮೇಲೆ ಸಿಲುಕಿರುವ ಜನರು ತಮ್ಮನ್ನು ರಕ್ಷಿಸಲು ರಾಜ್ಯ ಸರ್ಕಾರದಿಂದ ಸಹಾಯವನ್ನು ಕೇಳುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರತಿಕೂಲ ಹವಾಮಾನದ ಕಾರಣ, ಸರ್ಕಾರ ನಿಯೋಜಿಸಿದ ಹೆಲಿಕಾಪ್ಟರ್ ಅವರನ್ನು ತಲುಪಲು ಸಾಧ್ಯವಾಗಲಿಲ್ಲ ಎಂದು ವರದಿಗಳು ತಿಳಿಸಿವೆ.

ಈ ವೇಳೆ ಖಮ್ಮಂನಲ್ಲಿ ಕೆಲಸ ಮಾಡುವ ಹರ್ಯಾಣ ಮೂಲದ ಸುಭಾನ್ ಖಾನ್ ಒಂಬತ್ತು ಜನರನ್ನು ರಕ್ಷಿಸಲು ತಮ್ಮ ಜೆಸಿಬಿ ಬುಲ್ಡೋಜರ್ ಬಳಸಿದ್ದರು. ಪ್ರಾಣಕ್ಕೆ ಅಪಾಯವಿದ್ದರೂ ಅದನ್ನು ಲೆಕ್ಕಿಸದೆ ಅಲ್ಲಿ ಸಿಲುಕಿರುವ ಒಂಬತ್ತು ಮಂದಿಯನ್ನೂ ಖಾನ್ ರಕ್ಷಿಸಿದ್ದಾರೆ.

9 ಜನರನ್ನು ಏಕಾಂಗಿಯಾಗಿ ಕಾಪಾಡಿದ ಖಾನ್

ರಕ್ಷಣಾ ಕಾರ್ಯ ವೇಳೆ ನಿಮ್ಮ ಪ್ರಾಣಕ್ಕೂ ಅಪಾಯವಾಗುತ್ತಿತ್ತು ಎಂದು ಖಾನ್ ಅವರಲ್ಲಿ ಹೇಳಿದಾಗ “ನಾನು ಸತ್ತರೆ, ನಾನು ಒಬ್ಬನೇ ಸಾಯುತ್ತೇನೆ, ಇಲ್ಲದಿದ್ದರೆ ಒಂಬತ್ತು ಜನರೊಂದಿಗೆ ಹಿಂತಿರುಗುತ್ತೇನೆ” ಎಂದು ಅವರು ಉತ್ತರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಈ ಘಟನೆ ನಡೆದಿದ್ದು, ಖಾನ್ ಅವರ ಬುಲ್ಡೋಜರ್‌ನಲ್ಲಿ ಅವರೊಂದಿಗೆ ಹಿಂತಿರುಗಿದಾಗ, ಸ್ಥಳೀಯರು ಮತ್ತು ಅವರ ಕುಟುಂಬದಿಂದ ಅವರನ್ನು ಹರ್ಷೋದ್ಗಾರಗಳೊಂದಿಗೆ ಸ್ವಾಗತಿಸಲಾಯಿತು.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ, ಅವರ ಮಗಳು ತನ್ನ ತಂದೆಯ ಬಗ್ಗೆ ಹೆಮ್ಮೆಯಿಂದ ಹೇಳುವುದನ್ನು ಕೇಳಬಹುದು. ನಾನು ನಡುಗುತ್ತಿದ್ದೆ. ಆದರೆ ಅಪ್ಪ ಏನು ಮಾಡಬೇಕು ಎಂದು ಬಯಸಿದರೋ ಅದನ್ನು ಅವರು ಮಾಡಿದ್ದಾರೆ ಎಂದು ಮಗಳು ಹೇಳಿದ್ದಾಳೆ. ಖಾನ್ ಅವರ ಧೀರೋದಾತ್ತ ಕ್ರಮಕ್ಕಾಗಿ ಅವರ ಫೋನ್‌ಗೆ ಪ್ರಶಂಸೆಯ ಸಂದೇಶಗಳು ಹರಿದಾಡುತ್ತಿವೆ. ಬಿಆರ್‌ಎಸ್‌ ಮುಖಂಡ ಹಾಗೂ ಮಾಜಿ ಸಚಿವ ಕೆ.ಟಿ.ರಾಮರಾವ್‌ ಕೂಡ ಕರೆ ಮಾಡಿ ಅವರ ಶೌರ್ಯಕ್ಕೆ ಅಭಿನಂದನೆ ಸಲ್ಲಿಸಿದರು.

ಇದನ್ನೂ ಓದಿ: ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ವಿಚಾರಣೆ: ‘ಬೇಟೆ ಕೋ ಪಢಾವೋ, ಬೇಟಿ ಕೋ ಬಚಾವೋ’ ಎಂದ ಬಾಂಬೆ ಹೈಕೋರ್ಟ್

ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಕೆಟಿಆರ್, “ಸುಭಾನ್ ಖಾನ್-ಬುಲ್ಡೋಜರ್ ಮ್ಯಾನ್, ಎಲ್ಲಾ ಹೀರೋಗಳು ಕ್ಯಾಪ್ ಧರಿಸುವುದಿಲ್ಲ ಎಂದು ಬರೆದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಒಂದು ವಾರದಲ್ಲಿ ಗೃಹ ಲಕ್ಷ್ಮಿಯರ ಖಾತೆಗೆ ಹಣ ಜಮೆ: ಲಕ್ಷ್ಮೀ ಹೆಬ್ಬಾಳ್ಕರ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ರಾಜ್ಯ ಬಂದ್​ಗೆ ಕರೆ ಕೊಡ್ತಿವಿ: ವಾಟಾಳ್​
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಕೇಂದ್ರ ಸಚಿವ ಸೋಮಣ್ಣ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಚಾರ್ಮಾಡಿ ಹಸಿರು ರಾಶಿಯ ಮೇಲೆ ಮಂಜಿನ ಚಿತ್ತಾರ: ಪ್ರವಾಸಕ್ಕೆ ಸೂಕ್ತ ಸಮಯ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಕಮಲ್ ಹಾಸನ್ ವಿವಾದ, ಬಂದ್​ಗೆ ಕರೆ ಕೊಡುವುದಾಗಿ ವಾಟಾಳ್ ಎಚ್ಚರಿಕೆ
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಾತೃಭಾಷೆ ಮರೆಯಲ್ಲ, ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ: ರಚಿತಾ ರಾಮ್
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಮಂಗಳೂರು: ಗುಡ್ಡ ಕುಸಿತ ದುರಂತ ಬೆನ್ನಲ್ಲೇ ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ಗೃಹ ಸಚಿವ ಪರಮೇಶ್ವರ್ ಪರ ಸೋಮಣ್ಣ ಬ್ಯಾಟಿಂಗ್
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ
ರಷ್ಯಾದಲ್ಲಿ ರೈಲು ಹಾದುಹೋಗುತ್ತಿದ್ದಂತೆ ಕುಸಿದ ಸೇತುವೆ