95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌. ಇಂದು ನರೇಶ್​ ಜೈನ್​ನನ್ನು […]

95,000 ಕೋಟಿ ರೂ ಆಕ್ರಮ ವರ್ಗಾವಣೆ ಮಾಡಿದ್ದ ಹವಾಲಾ ಆಪರೇಟರ್​ ಅರೆಸ್ಟ್
ಶೇ 16,000ದಷ್ಟು ಏರಿಕೆ
ಸಾಧು ಶ್ರೀನಾಥ್​

Updated on: Sep 02, 2020 | 1:44 PM

ದೆಹಲಿ:95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ ಕುಖ್ಯಾತ ಹವಾಲ ಆಪರೇಟರ್ ನರೇಶ್​ ಜೈನ್​ನನ್ನು ಇ.ಡಿ. ಅಧಿಕಾರಿಗಳು ಇಂದು ಬಂಧಿಸಿದ್ದಾರೆ.

ಬಂಧಿತ ಆರೋಪಿ ನರೇಶ್​ ಜೈನ್, 600 ಬ್ಯಾಂಕ್ ಖಾತೆ ಬಳಸಿ ಬರೋಬ್ಬರಿ 95 ಸಾವಿರ ಕೋಟಿ ರೂಪಾಯಿ ಹಣ ಆಕ್ರಮ ವರ್ಗಾವಣೆ ಮಾಡಿದ್ದ. ಜೊತೆಗೆ 11,500 ಕೋಟಿ ರೂಪಾಯಿ ಹಣವನ್ನು ವಿದೇಶಕ್ಕೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಇದರಿಂದಾಗಿ ಆರೋಪಿ ನರೇಶ್​ ಜೈನ್​ ಮೇಲೆ ಆಮೆರಿಕಾ, ಬ್ರಿಟನ್ ಅಧಿಕಾರಿಗಳು ಕಣ್ಣಿಟ್ಟಿದ್ದರು‌.

ಇಂದು ನರೇಶ್​ ಜೈನ್​ನನ್ನು ಬಂಧಿಸಿರುವ ಇ.ಡಿ. ಅಧಿಕಾರಿಗಳು, ಇಂದು ಸಂಜೆ ವೇಳೆಗೆ ದೆಹಲಿಯ ರೋಹಿಣಿ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

Published On - 1:43 pm, Wed, 2 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us