AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಭಾರತಕ್ಕೆ ‘ದುರಂತಗಳ ಸರಮಾಲೆ’ಯನ್ನು ಸೃಷ್ಟಿಸಿದ್ದಾರೆ: ರಾಹುಲ್ ಗಾಂಧಿ

ಕೆಲ ದಿನಗಳ ಮೌನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್​ಗಳ ಟೀಕಾಪ್ರಹಾರ ಪುನರಾರಂಭಿಸಿದ್ದಾರೆ. ಬುಧವಾರದಂದು ರಾಹುಲ್ ಸರಣಿ ಟ್ವೀಟ್​ಗಳ ಮೂಲಕ ಪ್ರಧಾನ ಮಂತ್ರಿ ಮೋದಿಯನ್ನು ಖಂಡಿಸಿದ್ದು, ಅವರ ಆಡಳಿತಾವಧಿಯಲ್ಲಿ ಭಾರತ ದುರಂತಗಳ ಸರಮಾಲೆಯಲ್ಲಿ ಸಿಕ್ಕು ಒದ್ದಾಡುತ್ತಿದೆಯೆಂದು ಹೇಳಿದ್ದಾರೆ. ಭಾರತದ ಜಿಡಿಪಿ (23.9%) ಐತಿಹಾಸಿಕ ಕುಸಿತಕ್ಕೆ ಮೋದಿಯವರ ದುರಾಡಳಿತವೇ ಕಾರಣವೆಂದು ಹೇಳಿದ್ದಾರೆ. ನಿರುದ್ಯೋಗವನ್ನ್ನು ನಿರ್ಮೂಲ ಮಾಡುತ್ತೇನೆಂದು ಹೇಳಿದ್ದ ಪ್ರಧಾನಿಯವರು, ಕಳೆದ 45 ವರ್ಷಗಳಲ್ಲೇ ಭಾರತ ಎದುರಿಸಿರುವ ಅತ್ಯಧಿಕ ನಿರುದ್ಯೋಗದ […]

ಪ್ರಧಾನಿ ಮೋದಿ ಭಾರತಕ್ಕೆ ‘ದುರಂತಗಳ ಸರಮಾಲೆ’ಯನ್ನು ಸೃಷ್ಟಿಸಿದ್ದಾರೆ: ರಾಹುಲ್ ಗಾಂಧಿ
ಅರುಣ್​ ಕುಮಾರ್​ ಬೆಳ್ಳಿ
|

Updated on: Sep 02, 2020 | 3:41 PM

Share

ಕೆಲ ದಿನಗಳ ಮೌನದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಟ್ವೀಟ್​ಗಳ ಟೀಕಾಪ್ರಹಾರ ಪುನರಾರಂಭಿಸಿದ್ದಾರೆ.

ಬುಧವಾರದಂದು ರಾಹುಲ್ ಸರಣಿ ಟ್ವೀಟ್​ಗಳ ಮೂಲಕ ಪ್ರಧಾನ ಮಂತ್ರಿ ಮೋದಿಯನ್ನು ಖಂಡಿಸಿದ್ದು, ಅವರ ಆಡಳಿತಾವಧಿಯಲ್ಲಿ ಭಾರತ ದುರಂತಗಳ ಸರಮಾಲೆಯಲ್ಲಿ ಸಿಕ್ಕು ಒದ್ದಾಡುತ್ತಿದೆಯೆಂದು ಹೇಳಿದ್ದಾರೆ. ಭಾರತದ ಜಿಡಿಪಿ (23.9%) ಐತಿಹಾಸಿಕ ಕುಸಿತಕ್ಕೆ ಮೋದಿಯವರ ದುರಾಡಳಿತವೇ ಕಾರಣವೆಂದು ಹೇಳಿದ್ದಾರೆ.

ನಿರುದ್ಯೋಗವನ್ನ್ನು ನಿರ್ಮೂಲ ಮಾಡುತ್ತೇನೆಂದು ಹೇಳಿದ್ದ ಪ್ರಧಾನಿಯವರು, ಕಳೆದ 45 ವರ್ಷಗಳಲ್ಲೇ ಭಾರತ ಎದುರಿಸಿರುವ ಅತ್ಯಧಿಕ ನಿರುದ್ಯೋಗದ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಟ್ವೀಟ್​ನಲ್ಲಿ ಜರಿದಿದ್ದಾರೆ. ಕಳೆದೊಂದು ವರ್ಷದಲ್ಲಿ 12 ಕೋಟಿ ಜನ ಕೆಲಸ ಕಳೆದುಕೊಂಡಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಅಂತಲೂ ಎಂದು ರಾಹುಲ್ ದೂಷಿಸಿದ್ದಾರೆ.

ರಾಜ್ಯಗಳಿಗೆ ಜಿಎಸ್​ಟಿ ಬಾಕಿ ಉಳಿಸಿಕೊಂಡಿರುವುದು ಮಹಾಪರಾಧ ಎಂದು ಹೇಳಿರುವ ರಾಹುಲ್, ಕೊವಿಡ್-19 ಪಿಡುಗನ್ನು ನಿಯಂತ್ರಿಸುವಲ್ಲಿಯೂ ಮೋದಿ ಸಂರ್ಪೂಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದ್ದಾರೆ. ಪ್ರತಿದಿನ ಸಂಭವಿಸುತ್ತಿರುವ ಕೊವಿಡ್-19 ಸಾವುಗಳನ್ನು ಮತ್ತು ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದ್ದೇಯಾದರೆ. ವಿಶ್ವದ ಎಲ್ಲ ರಾಷ್ಟ್ರಗಳನ್ನು ಭಾರತ ಹಿಂದಿಕ್ಕಿದೆ ಅಂತ ರಾಹುಲ್ ಹೇಳಿದ್ದಾರೆ.

ಚೀನಾದೊಂದಿಗಿನ ಗಡಿ ಸಂಘರ್ಷವನ್ನು ಸಹ ಪ್ರಸ್ತಾಪಿಸಿರುವ ಅವರು ಗಡಿ ಭಾಗಗಳಲ್ಲಿ ಅತಿಕ್ರಮಣ ಹಾಗೂ ಆಕ್ರಮಣ ಮಂದುವರಿದಿದೆ ಎಂದಿದ್ದಾರೆ

‘‘ಮೋದಿ ಸರ್ಕಾರ ಭಾರತದ ಭವಿಷ್ಯವನ್ನು ಅಪಾಯಕ್ಕೆ ದೂಡುತ್ತಿದೆ. ಜೆಇಇ ಮತ್ತು ಎನ್​ಇಇಟಿ ಆಕಾಂಕ್ಷಿಗಳ ಹಾಗೂ ಎಸ್ಎಸ್​ಸಿ ಮತ್ತಿತರ ಪರೀಕ್ಷೆಗಳನ್ನು ಬರೆದಿರುವವರ ಜ್ವಲಂತ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಿರುವುದು ಮೋದಿ ಸರ್ಕಾರದ ದುರಂಹಕಾರವೇ ಹೊರತು ಬೇರೇನೂ ಅಲ್ಲ. ಜನಕ್ಕೆ ಬೇಕಿರುವುದು ನೌಕರಿಗಳು, ಟೊಳ್ಳು ಭರವಸೆ, ಘೋಷಣೆಗಳಲ್ಲ,’’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ