AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲಾ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ, ಶಾಲೆಗೆ ಹೋಗಲ್ಲ ಎಂದು ವರ್ಷದಿಂದ ಪಟ್ಟು ಹಿಡಿದಿದ್ದ ಬಾಲಕಿ

ವಿದ್ಯಾರ್ಥಿನಿಯೊಬ್ಬಳು ಶಾಲಾ ಕಟ್ಟಡದಿಂದ ಹಾರಿ ಪ್ರಾಣಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಆದರೆ ಬಾಲಕಿ ಕಳೆದ ಒಂದು ವರ್ಷದಿಂದ ಶಾಲೆಗೆ ಹೋಗಲ್ಲ ಎಂದು ತಾಯಿ ಬಳಿ ಪಟ್ಟು ಹಿಡಿದಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ತಾಯಿ ಶಿವಾನಿ ಮೀನಾ ಮಗಳು ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿರುವ ವಿಡಿಯೋವನ್ನು ರೆಕಾರ್ಡ್​ ಮಾಡಿ ಮಗಳ ತರಗತಿ ಶಿಕ್ಷಕರಿಗೆ ಕಳುಹಿಸಿದ್ದರು. ಶಾಲೆಯಲ್ಲಿ ಮಗಳಿಗೇನಾದರೂ ತೊಂದರೆಯಾಗುತ್ತಿದೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರು. ತರಗತಿ ಶಿಕ್ಷಕರು ಬಳಿ ಒಮ್ಮೆ ಅಲ್ಲ ಹಲವು ಬಾರಿ ಈ ವಿಚಾರಗಳ ಕುರಿತು ಮಾತನಾಡಿದ್ದೆ, ಆದರೆ ಅವರು ನನ್ನ ಮಾತನ್ನು ನಿರ್ಲಕ್ಷಿಸಿದ್ದರು ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ.

ಶಾಲಾ ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ,  ಶಾಲೆಗೆ ಹೋಗಲ್ಲ ಎಂದು ವರ್ಷದಿಂದ ಪಟ್ಟು ಹಿಡಿದಿದ್ದ ಬಾಲಕಿ
ವಿದ್ಯಾರ್ಥಿನಿ
ನಯನಾ ರಾಜೀವ್
|

Updated on: Nov 08, 2025 | 10:44 AM

Share

ಜೈಪುರ, ನವೆಂಬರ್ 08: ವಿದ್ಯಾರ್ಥಿನಿ(Student)ಯೊಬ್ಬಳು ಶಾಲಾ ಕಟ್ಟಡದಿಂದ ಹಾರಿ ಪ್ರಾಣಪಟ್ಟಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಆದರೆ ಬಾಲಕಿ ಕಳೆದ ಒಂದು ವರ್ಷದಿಂದ ಶಾಲೆಗೆ ಹೋಗಲ್ಲ ಎಂದು ತಾಯಿ ಬಳಿ ಪಟ್ಟು ಹಿಡಿದಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ತಾಯಿ ಶಿವಾನಿ ಮೀನಾ ಮಗಳು ಶಾಲೆಗೆ ಹೋಗುವುದಿಲ್ಲ ಎಂದು ಅಳುತ್ತಿರುವ ವಿಡಿಯೋವನ್ನು ರೆಕಾರ್ಡ್​ ಮಾಡಿ ಮಗಳ ತರಗತಿ ಶಿಕ್ಷಕರಿಗೆ ಕಳುಹಿಸಿದ್ದರು.

ಶಾಲೆಯಲ್ಲಿ ಮಗಳಿಗೇನಾದರೂ ತೊಂದರೆಯಾಗುತ್ತಿದೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದರು. ತರಗತಿ ಶಿಕ್ಷಕರು ಬಳಿ ಒಮ್ಮೆ ಅಲ್ಲ ಹಲವು ಬಾರಿ ಈ ವಿಚಾರಗಳ ಕುರಿತು ಮಾತನಾಡಿದ್ದೆ, ಆದರೆ ಅವರು ನನ್ನ ಮಾತನ್ನು ನಿರ್ಲಕ್ಷಿಸಿದ್ದರು ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ. ಒಂದು ವರ್ಷದ ನಂತರ ನವೆಂಬರ್ 1 ರಂದು ಜೈಪುರದ ಪ್ರತಿಷ್ಠಿತ ನೀರ್ಜಾ ಮೋದಿ ಶಾಲೆಯ 9 ವರ್ಷದ ವಿದ್ಯಾರ್ಥಿನಿ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾಳೆ.

ಶಾಲೆಯಲ್ಲಿ ಬೆದರಿಸುವಿಕೆ, ಕೀಟಲೆ ಅಥವಾ ಲೈಂಗಿಕ ಕಿರುಕುಳದ ದೂರುಗಳು ಪದೇ ಪದೇ ಕೇಳಿಬಂದಿದ್ದರೂ ಶಾಲಾ ಶಿಕ್ಷಕರಾಗಲಿ ಅಧಿಕಾರಿಗಳಾಗಲೀ ಗಮನಹರಿಸಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಶಿವಾನಿ ಪತಿ ವಿಜಯ್ ಮೀನಾ ಪೋಷಕರು-ಶಿಕ್ಷಕರ ಸಭೆಯನ್ನು ನೆನಪಿಸಿಕೊಂಡರು. ಶಾಲೆಯಲ್ಲಿ ಹುಡುಗರು, ಹುಡುಗಿಯರು ಎಲ್ಲರೂ ಇರುತ್ತಾರೆ ಎಲ್ಲರೊಂದಿದೂ ಮಾತನಾಡಬೇಕಾಗುತ್ತದೆ ಎಂದು ಶಿಕ್ಷಕರು ಹೇಳಿದ್ದರು, ಅದಕ್ಕೆ ನಾನು ನನ್ನ ಮಗಳು ಹುಡುಗರೊಂದಿಗೆ ಮಾತನಾಡಲು ಬಯಸದಿದ್ದರೆ ಅದು ಅವಳ ಆಯ್ಕೆ ಎಂದು ಹೇಳಿದ್ದೆ ಎಂದರು.

ಮತ್ತಷ್ಟು ಓದಿ: ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ, 4ನೇ ತರಗತಿ ಬಾಲಕಿ ಸಾವು, ಸ್ಥಳದಲ್ಲಿ ರಕ್ತದ ಕಲೆಗಳೇ ಇಲ್ಲ

ತನಿಖಾಧಿಕಾರಿಗಳು ಪರಿಶೀಲಿಸಿದ ತರಗತಿಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಅಮೈರಾ ರೇಲಿಂಗ್ ಹತ್ತಿ ಜಿಗಿಯುವ ಮೊದಲು ಎರಡು ಬಾರಿ ತನ್ನ ಶಿಕ್ಷಕಿಯ ಬಳಿಗೆ ನಡೆದುಕೊಂಡು ಹೋಗುವುದನ್ನು ತೋರಿಸಲಾಗಿದೆ.ಅವರು ಏನು ಹೇಳಿದ್ದಾರೆ ಎಂಬುದು ತಿಳಿದಿಲ್ಲ. ಸಿಸಿ ಕ್ಯಾಮರಾಗಳಲ್ಲಿ ಆಡಿಯೊ ರೆಕಾರ್ಡಿಂಗ್ ಅನ್ನು ಕಡ್ಡಾಯಗೊಳಿಸಿದ CBSE ಮಾರ್ಗಸೂಚಿಗಳ ಹೊರತಾಗಿಯೂ, ದೃಶ್ಯಾವಳಿಯಲ್ಲಿ ಯಾವುದೇ ಧ್ವನಿ ಇಲ್ಲ ಇದು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.

5,000 ಕ್ಕೂ ಹೆಚ್ಚು ಮಕ್ಕಳು ಮತ್ತು ಆರು ಅಂತಸ್ತಿನ ಕಟ್ಟಡವಿರುವ ಕಟ್ಟಡದ ಸುರಕ್ಷತೆಗಾಗಿ ಗ್ರಿಲ್ ಅಥವಾ ನೆಟ್ ಇಲ್ಲದೆ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲು ಹೇಗೆ ಅನುಮತಿ ಪಡೆದರು?ಇದು ಅತ್ಯಂತ ಗಂಭೀರ ವಿಷಯ. ಸುತ್ತಲೂ ಇಷ್ಟೊಂದು ಮಕ್ಕಳಿರುವಾಗ ತೆರೆದ ಮಹಡಿಗಳು ಏಕಿವೆ? ಎನ್ನುವ ಪ್ರಶ್ನೆಗಳು ಮೂಡಿವೆ. ಸಿಬಿಎಸ್‌ಇ ಮಾರ್ಗಸೂಚಿಗಳ ಪ್ರಕಾರ ಸಿಸಿಟಿವಿಯಲ್ಲಿ ಇರಬೇಕಾದ ಆಡಿಯೊ ಏಕೆ ಲಭ್ಯವಿಲ್ಲ? 15 ದಿನಗಳ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಿರಬೇಕು. ಇದು ಜೈಪುರದ ಪ್ರತಿಷ್ಠಿತ ಶಾಲೆ. ಅವರು ಹೆಚ್ಚಿನ ಶುಲ್ಕವನ್ನು ವಿಧಿಸುತ್ತಾರೆ, ಆದರೆ ಜವಾಬ್ದಾರಿ ಇಲ್ಲ ಎಂದು ವಿದ್ಯಾರ್ಥಿಯ ಚಿಕ್ಕಪ್ಪ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ