AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಾವೃತವಾದ ರಸ್ತೆ, ಟ್ರಾಫಿಕ್ ಜಾಮ್​​ನಿಂದಾಗಿ ಪುಣೆ ವಿಮಾನ ನಿಲ್ದಾಣದಿಂದ ಹೊರಹೋಗಲಾರದೆ ಸಿಲುಕಿದ ಜನ

ಸಂಜೆ ಹೊತ್ತಿನಲ್ಲಿ ಉಂಟಾದ ಈ ಸಮಸ್ಯೆಗೆ ಅಪೂರ್ಣ ರಸ್ತೆ ಕಾಮಗಾರಿ ಕಾರಣ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. "ವಿಮಾನ ನಿಲ್ದಾಣದ ಸಮೀಪದಲ್ಲಿ ಭಾರೀ ಮಳೆ ಮತ್ತು ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯದಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ.

ಜಲಾವೃತವಾದ ರಸ್ತೆ, ಟ್ರಾಫಿಕ್ ಜಾಮ್​​ನಿಂದಾಗಿ ಪುಣೆ ವಿಮಾನ ನಿಲ್ದಾಣದಿಂದ ಹೊರಹೋಗಲಾರದೆ ಸಿಲುಕಿದ ಜನ
ಮಳೆ (ಸಂಗ್ರಹ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Oct 10, 2021 | 4:58 PM

ಪುಣೆ: ಪುಣೆ ವಿಮಾನ ನಿಲ್ದಾಣದಲ್ಲಿ (Pune airport)ಶನಿವಾರ ತಡರಾತ್ರಿ ಸುಮಾರು 300 ಪ್ರಯಾಣಿಕರು ಸಿಲುಕಿಕೊಂಡರು. ಭಾರೀ ಮಳೆಯಿಂದಾಗಿ ನಗರದ ಲೋಹೆಗಾಂವ್, ಧನೋರಿ, ಶಿವಾಜಿನಗರ ಮತ್ತು ಇತರ ಪ್ರದೇಶಗಳು ಜಲಾವೃತವಾಗಿದ್ದುವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಮಳೆಯಿಂದಾಗಿ ಸಾರ್ವಜನಿಕ ಸಾರಿಗೆ ಲಭ್ಯವಿರಲಿಲ್ಲ. ಲೋಹೆಗಾಂವ್ (75.8 ಮಿಮೀ), ಶಿವಾಜಿನಗರ (49.2 ಮಿಮೀ) ಮತ್ತು ಚಿಂಚ್‌ವಾಡ್ (70 ಮಿಮೀ) ನಲ್ಲಿ ಭಾರೀ ಮಳೆಯಾಗಿದೆ.

ವ್ಹೀಲ್‌ಚೇರ್‌ನಲ್ಲಿರುವ 90 ವರ್ಷದ ಹಿರಿಯ ನಾಗರಿಕ ಸೇರಿದಂತೆ ಸೊನಾಲಿ ರಾಜೋರ್ ಅವರ ಕುಟುಂಬವು ಎರಡೂವರೆ ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು. “ಕ್ಯಾಬ್ ಅಥವಾ ಪ್ರಿಪೇಯ್ಡ್ ಟ್ಯಾಕ್ಸಿ ಇಲ್ಲ, ರಿಕ್ಷಾ ಲಭ್ಯವಿಲ್ಲ. ದಯವಿಟ್ಟು ಯಾರಾದರೂ ಸಹಾಯ ಮಾಡಬಹುದೇ ಯಾರಾದರೂ ಸಾರಿಗೆ ವಿಧಾನವನ್ನು ಏರ್ಪಡಿಸಬಹುದೇ “ಎಂದು ರಾಜೋರ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ರಾತ್ರಿ 8: 30 ಕ್ಕೆ ಆರಂಭವಾದ ಈ ಹುಡುಕಾಟ ನಾಲ್ಕು ಗಂಟೆಗಳ ನಂತರ ಅಂದರೆ 12:30 ರ ಸುಮಾರಿಗೆ ಕೊನೆಗೊಂಡಿತು, ರಾತ್ರಿ 10 ಗಂಟೆಯ ನಂತರ ರಸ್ತೆಗಳನ್ನು ತೆರವುಗೊಳಿಸಿದ ನಂತರ ಆಕೆ ಮನೆಗೆ ತಲುಪಿದ್ದಾರೆ.

ಸಂಜೆ ಹೊತ್ತಿನಲ್ಲಿ ಉಂಟಾದ ಈ ಸಮಸ್ಯೆಗೆ ಅಪೂರ್ಣ ರಸ್ತೆ ಕಾಮಗಾರಿ ಕಾರಣ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. “ವಿಮಾನ ನಿಲ್ದಾಣದ ಸಮೀಪದಲ್ಲಿ ಭಾರೀ ಮಳೆ ಮತ್ತು ನಡೆಯುತ್ತಿರುವ ರಸ್ತೆ ದುರಸ್ತಿ ಕಾರ್ಯದಿಂದಾಗಿ ಈ ಪರಿಸ್ಥಿತಿ ಉಂಟಾಗಿದೆ. ಟ್ರಾಫಿಕ್ ಪೊಲೀಸರ ಸಹಾಯದಿಂದ ನಮ್ಮ ಅಧಿಕಾರಿಗಳು ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲು ಕೆಲಸ ಮಾಡುತ್ತಿದ್ದರು “ಎಂದು ವಿಮಂತಲ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದರು.

“ನೀವು ಲೋಹೆಗಾಂವ್/ಧನೋರಿ ಪ್ರದೇಶಕ್ಕೆ ಭೇಟಿ ನೀಡಿದರೆ, ನೀವು ಎಂದಿಗೂ ಪುಣೆಯನ್ನು ‘ಸ್ಮಾರ್ಟ್ ಸಿಟಿ’ ಎಂದು ಕರೆಯುವುದಿಲ್ಲ. ಈ ಪ್ರದೇಶದ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳು ನಿರ್ಲಕ್ಷ್ಯ ವಹಿಸಿವೆ. ಸರಿಯಾದ ರಸ್ತೆಗಳಿಲ್ಲ, ಒಳಚರಂಡಿ ಇಲ್ಲ, ನೀರು ಸರಬರಾಜು ಇಲ್ಲ, ಸಂಚಾರ ನಿರ್ವಹಣೆ ಇಲ್ಲ ಮತ್ತು ಇನ್ನೂ ವಿಮಾನ್ ನಗರಕ್ಕೆ ಸಮನಾಗಿ ಆಸ್ತಿ ತೆರಿಗೆ ವಿಧಿಸುತ್ತದೆ ಎಂದು ನಾಗರಿಕರೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬ ನಿವಾಸಿ ಸತೀಶ್ ಪಿಕೆ ಅವರು ಪುಣೆ ವಿಮಾನ ನಿಲ್ದಾಣದ ಎಲ್ಲಾ ಸಂಪರ್ಕ ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಮತ್ತು ಅವರು 4 ಕಿಮೀ ದೂರವನ್ನು ಕ್ರಮಿಸುವಾಗ 2 ಗಂಟೆಗಳ ಕಾಲ ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದರು.

ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಕೂಡ ಭಾರೀ ಮಳೆಯಿಂದ ಉಂಟಾದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ಬೆಂಬಲಿಗರು ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯೇ? ವಿರೋಧಿಗಳಿಗೆ ಅಮಿತ್ ಶಾ ಕೊಟ್ಟ ಉತ್ತರ ಹೀಗಿತ್ತು

ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಸಮಾರಂಭದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದ ಡಿಸಿಎಂ ಡಿಕೆ ಶಿವಕುಮಾರ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
ಆರ್​ಸಿಬಿ ಗೆದ್ದ ಬಳಿಕ ಮಕ್ಕಳಂತೆ ಕುಣಿದು ಕುಪ್ಪಳಿಸಿದ ಪ್ರಶಾಂತ್ ನೀಲ್
VIDEO: ಇದು ಈ ಬಾರಿಯ ಐಪಿಎಲ್​ನ 10 ಲಕ್ಷ ರೂ. ಮೌಲ್ಯದ ಕ್ಯಾಚ್
VIDEO: ಇದು ಈ ಬಾರಿಯ ಐಪಿಎಲ್​ನ 10 ಲಕ್ಷ ರೂ. ಮೌಲ್ಯದ ಕ್ಯಾಚ್
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ನಂಜೇಗೌಡರ ಕುಟುಂಬಸ್ಥರಿಂದಲೂ ರಾತ್ರಿಯಿಡೀ ವಿಜಯೋತ್ಸವ, ಕುಣಿತ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
ಮಕ್ಕಳೊಂದಿಗೆ ಮನೆಯಿಂದ ಹೊರಬಂದು ವಿಜಯೋತ್ಸವದಲ್ಲಿ ಪಾಲ್ಗೊಂಡ ಗೃಹಿಣಿ
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
RCB ಫ್ಯಾನ್ಸ್ ಗಮನಕ್ಕೆ, ಇಂದೇ ನಡೆಯಲಿದೆ ವಿಜಯಯಾತ್ರೆ: ಎಷ್ಟು ಗಂಟೆಗೆ?
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಒಂದು 'ಪದ' ಬದಲಾವಣೆಗೆ 18 ವರ್ಷ ಕಾದ RCBಯ ಮೂವರು ದಿಗ್ಗಜರು
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ಸಾರ್ವಜನಿಕ ರಸ್ತೆ ಸರಿಪಡಿಸಿದ ಕೊಪ್ಪಳದ ಮಹಿಳೆ
ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
ಯಮಧರ್ಮನಾಗಿ ಪ್ರತ್ಯಕ್ಷವಾದ ರಾಯಚೂರಿನ ಆರ್​ಸಿಬಿ ಅಭಿಮಾನಿ! ವಿಡಿಯೋ ವೈರಲ್
VIDEO: ಹಾದೀಲಿ ಬೀದಿಲಿ, ನಡು ರೋಡಲ್ಲಿ... ಕುಣಿದು ಕುಪ್ಪಳಿಸಿದ RCB ಫ್ಯಾನ್
VIDEO: ಹಾದೀಲಿ ಬೀದಿಲಿ, ನಡು ರೋಡಲ್ಲಿ... ಕುಣಿದು ಕುಪ್ಪಳಿಸಿದ RCB ಫ್ಯಾನ್