AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಎತ್ತರದಲ್ಲಿರುವ ರೇಡಿಯೋ ಕೇಂದ್ರದಲ್ಲಿ ಅಧಿಕ ಶಕ್ತಿಯ ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಸಚಿವ ಅನುರಾಗ್​ ಠಾಕೂರ್​

ಇದೀಗ ಉದ್ಘಾಟನೆಯಾದ ಹೈಪವರ್​ ಟ್ರಾನ್ಸ್​ಮಿಟರ್​ಗಳಿಂದಾಗಿ ಪವರ್ತ ಪ್ರದೇಶದಲ್ಲಿ ವಾಸವಾಗಿರುವ ಜನರೂ ಕೂಡ ರೇಡಿಯೋ ಹಾಗೂ ದೂರದರ್ಶನದಿಂದ ಗುಣಮಟ್ಟದ ಸೇವೆ ಪಡೆಯುವಂತಾಗುತ್ತದೆ.

ವಿಶ್ವದ ಅತ್ಯಂತ ಎತ್ತರದಲ್ಲಿರುವ ರೇಡಿಯೋ ಕೇಂದ್ರದಲ್ಲಿ ಅಧಿಕ ಶಕ್ತಿಯ ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಸಚಿವ ಅನುರಾಗ್​ ಠಾಕೂರ್​
ಟ್ರಾನ್ಸ್​ಮಿಟರ್​ಗಳನ್ನು ಉದ್ಘಾಟಿಸಿದ ಅನುರಾಗ್​ ಠಾಕೂರ್​
TV9 Web
| Updated By: Lakshmi Hegde|

Updated on:Sep 25, 2021 | 2:11 PM

Share

ಕಾರ್ಗಿಲ್​​ನ ಹಂಬಟಿಂಗ್ಲಾದಲ್ಲಿರುವ ವಿಶ್ವದ ಅತ್ಯಂತ ಎತ್ತರದ ರೇಡಿಯೋ ಕೇಂದ್ರದಲ್ಲಿ ಅತ್ಯಧಿಕ ವಿದ್ಯುತ್​ ಶಕ್ತಿ ಹೊಂದಿರುವ ಎರಡು  ಟ್ರಾನ್ಸ್​ಮಿಟರ್​(High power transmitters)ಗಳನ್ನು ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್​ ಉದ್ಘಾಟಿಸಿದ್ದಾರೆ.  ಸಮುದ್ರಮಟ್ಟದಿಂದ 13,300 ಅಡಿ ಎತ್ತರದಲ್ಲಿರುವ ಏರ್​ಇಂಡಿಯಾ ಎಫ್​ಎಂ ರೇಡಿಯೋ ಸ್ಟೇಶನ್​​ನಲ್ಲಿ​ಉದ್ಘಾಟನೆಯಾದ ವಿದ್ಯುತ್​ ಟ್ರಾನ್ಸ್​ಮಿಟರ್​ಗಳಿಗೆ ಚಾಲನೆ ನೀಡಲಾಗಿದೆ. ಪ್ರತಿ ಟ್ರಾನ್ಸ್​ಮಿಟರ್ 10KW ಶಕ್ತಿ ಹೊಂದಿದ್ದು, ಇವುಗಳಿಂದಾಗಿ   ಕಾರ್ಗಿಲ್​ ಮತ್ತು ಬಟಾಲಿಕ್​ ವಲಯಗಳಲ್ಲಿ ಎಫ್​ಎಂ ರೇಡಿಯೋ ಮತ್ತು ದೂರದರ್ಶನದ ಪ್ರಸರಣದ ಗುಣಮಟ್ಟ ಸುಧಾರಿಸುತ್ತದೆ. 

ಇದೀಗ ಉದ್ಘಾಟನೆಯಾದ ಹೈಪವರ್​ ಟ್ರಾನ್ಸ್​ಮಿಟರ್​ಗಳಿಂದಾಗಿ ಪವರ್ತ ಪ್ರದೇಶದಲ್ಲಿ ವಾಸವಾಗಿರುವ ಜನರೂ ಕೂಡ ರೇಡಿಯೋ ಹಾಗೂ ದೂರದರ್ಶನದಿಂದ ಗುಣಮಟ್ಟದ ಸೇವೆ ಪಡೆಯುವಂತಾಗುತ್ತದೆ. ಅಂದರೆ ನೆಟ್​ವರ್ಕ್​ ಸಮಸ್ಯೆ ಸುಧಾರಣೆಯಾಗುತ್ತದೆ. ಲಡಾಖ್​ನ ಗಡಿ ಗ್ರಾಮಗಳ ಜನರಿಗೂ ಜಗತ್ತಿನ ಆಗುಹೋಗುಗಳ ಮಾಹಿತಿ ಸರಿಯಾಗಿ ತಲುಪಬೇಕು ಎಂಬ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಅದರ ಒಂದು ಭಾಗವಾಗಿ ಕಾರ್ಗಿಲ್​​ನಲ್ಲಿರುವ ವಿಶ್ವದ ಅತ್ಯಂತ ಎತ್ತರವಾದ ಏರ್​ಸ್ಟೇಶನ್​​ನಲ್ಲಿ ಹೆಚ್ಚು ವಿದ್ಯುಚ್ಛಕ್ತಿಯುಳ್ಳ ಟ್ರಾನ್ಸ್​ಮಿಟರ್​ಗಳನ್ನು ಅಳವಡಿಸಲಾಗಿದೆ.

ಈ ವೇಳೆ ಲಡಾಖ್​ ಎಂಪಿ ಜಮ್ಯಾಂಗ್ ತ್ಸೆರಿಂಗ್ ನಮಗ್ಯಾಲ್ ಕೂಡ ಹಾಜರಿದ್ದರು. ಇನ್ನು ಅಕ್ಟೋಬರ್​ ವೇಳೆಗೆ ಕಾರ್ಯಕ್ರಮಗಳ ಪ್ರಸಾರವನ್ನು ದ್ವಿಗುಣಗೊಳಿಸುವುದಾಗಿಯೂ ಅನುರಾಗ್​ ಠಾಕೂರ್​ ಮತ್ತು ಡಿಡಿ ಕಾಶ್ಮೀರದ ಲಡಾಖಿ ನ್ಯೂಸ್​ ಡಿಟಿಎಚ್​ ಪ್ಲ್ಯಾಟ್​ಫಾರ್ಮ್ ಭರವಸೆ ನೀಡಿದೆ.  ಲಡಾಖ್​​ನ ಮೂಲೆಮೂಲೆಗೆ ಮಾಹಿತಿ ರವಾನೆ ಸಲುವಾಗಿ ಆಲ್​ ಇಂಡಿಯಾ ರೇಡಿಯೋ ಸೇವೆಗಳನ್ನು ಇನ್ನಷ್ಟು ಪರಿಷ್ಕರಿಸಲಾಗುವುದು ಎಂದೂ ಅನುರಾಗ್​ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ: Loan Transfer: ಸಾಲ ವರ್ಗಾವಣೆಗೆ ಹೊಸ ಮಾರ್ಗದರ್ಶಿ ನಿಯಮಾವಳಿ ಘೋಷಿಸಿದ ಆರ್​ಬಿಐ

ಓಟಿಟಿಗೆ ಬಂತು ‘ತಲೈವಿ’; ಚಿತ್ರಮಂದಿರದಲ್ಲಿ ಸೋತ ಕಂಗನಾ ಸಿನಿಮಾಗೆ ನೆಟ್​ಫ್ಲಿಕ್ಸ್​ನಲ್ಲಿ ಸಿಗುತ್ತಾ ಜಯ?

(High power transmitters at world’s highest radio station inaugurated By Union Minister Anurag Thakur)

Published On - 1:45 pm, Sat, 25 September 21

ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
‘ಸಾರಥಿ’ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆ ಸಮಯದ ಸವಾಲು ಹೇಗಿತ್ತು?
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಧರ್ಮಸ್ಥಳ ಪರವಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಘೋಷಣೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಯುವತಿಯ ಹತ್ಯೆಗೆ ತ್ರಿಕೋನ ಪ್ರಣಯ ಪ್ರಸಂಗ ಕಾರಣವಾಗಿರುವ ಶಂಕೆ
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು
ಶರಣಗೌಡ ಕಂದ್ಕೂರ್ ನೆರವಿಗೆ ಧಾವಿಸಿದ ಜೆಡಿಎಸ್ ಮತ್ತು ಬಿಜೆಪಿ ಶಾಸಕರು