AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hijab Ban: ಕರ್ನಾಟಕದ ಹಿಜಾಬ್ ವಿವಾದ; ಸುಪ್ರೀಂ ಕೋರ್ಟ್​ನಲ್ಲಿ 9ನೇ ದಿನದ ವಿಚಾರಣೆ

Karnataka Hijab Row: ಕುರಾನ್​ನಲ್ಲಿ ಉಲ್ಲೇಖವಾಗಿರುವುದೆಲ್ಲ ಕಡ್ಡಾಯವೆಂಬ ವಾದವಿದೆಯಲ್ಲ ಎಂದು ಅಡ್ವೊಕೇಟ್ ಜನರಲ್​ಗೆ ಸುಪ್ರೀಂ ಕೋರ್ಟ್ ನ್ಯಾ. ಹೇಮಂತ್ ಗುಪ್ತ ಪ್ರಶ್ನೆ ಹಾಕಿದ್ದಾರೆ.

Hijab Ban: ಕರ್ನಾಟಕದ ಹಿಜಾಬ್ ವಿವಾದ; ಸುಪ್ರೀಂ ಕೋರ್ಟ್​ನಲ್ಲಿ 9ನೇ ದಿನದ ವಿಚಾರಣೆ
ಹಿಜಾಬ್ ವಿವಾದImage Credit source: Live Law
TV9 Web
| Edited By: |

Updated on: Sep 21, 2022 | 12:09 PM

Share

ನವದೆಹಲಿ: ಹಿಜಾಬ್ (Hijab Ban) ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ(Supreme Court) ಇಂದು ಕರ್ನಾಟಕದ ವಾದ ಮಂಡನೆಯಾಗಲಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆ ಅಲ್ಲದಿದ್ದರೆ ಮತ್ತೇನು? ಎಂದು ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್​​ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಹಾಕಿದೆ. ವ್ಯಕ್ತಿಯ ಜೀವನವನ್ನು ನಿಯಂತ್ರಿಸುವ ನೈತಿಕ ಆತ್ಮಸಾಕ್ಷಿ, ಧಾರ್ಮಿಕ ನಂಬಿಕೆ, ಸಮಾನತೆ, ಸೌಹಾರ್ದತೆಗೆ ಪೂರಕವಾಗಿರುವುದು ಮಾತ್ರ ಅತ್ಯಗತ್ಯ ಆಚರಣೆಯಾಗಿರುತ್ತದೆ. ಇವು ಸಂವಿಧಾನದ ಜಾತ್ಯತೀತ ಅಂಶಗಳಿಗೆ ಪೂರಕವಾಗಿರಬೇಕು ಎಂದು ಎ.ಎಸ್. ನಾರಾಯಣ ದೀಕ್ಷಿತುಲು ತೀರ್ಪು ಉಲ್ಲೇಖಿಸಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದಾರೆ.

ಕುರಾನ್​ನಲ್ಲಿ ಉಲ್ಲೇಖವಾಗಿರುವುದೆಲ್ಲ ಕಡ್ಡಾಯವೆಂಬ ವಾದವಿದೆಯಲ್ಲ ಎಂದು ಅಡ್ವೊಕೇಟ್ ಜನರಲ್​ಗೆ ಸುಪ್ರೀಂ ಕೋರ್ಟ್ ನ್ಯಾ. ಹೇಮಂತ್ ಗುಪ್ತ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ವಕೀಲ ಪ್ರಭುಲಿಂಗ್ ನಾವದಗಿ, ಕುರಾನ್​ನಲ್ಲಿ ಹೇಳಿರುವುದೆಲ್ಲಾ ಧಾರ್ಮಿಕವಾಗಿರಬಹುದು. ಆದರೆ, ಎಲ್ಲವೂ ಅತ್ಯಗತ್ಯ ಆಚರಣೆಯಲ್ಲ ಎಂಬ ತೀರ್ಪುಗಳಿವೆ. ಹಲವು ಮುಸ್ಲಿಂ ಮಹಿಳೆಯರು ಹಿಜಾಬ್ ವಿರೋಧಿಸುತ್ತಿದ್ದಾರೆ. ಹಿಜಾಬ್ ಧರಿಸದ ಮಾತ್ರಕ್ಕೆ ಅವರು ಇಸ್ಲಾಂನಿಂದ ಹೊರಗುಳಿಯುವುದಿಲ್ಲ. ಹಿಜಾಬ್ ಧರಿಸದ ಹಲವು ಮುಸ್ಲಿಂ ಮಹಿಳೆಯರಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: Hijab Ban ಹಿಜಾಬ್ ನಿಷೇಧ ಧರ್ಮ ನಿರಪೇಕ್ಷ ಆದೇಶ, ಶಾಲೆಗಳಲ್ಲಿ ಕೇಸರಿ ಶಾಲು ಅಥವಾ ಹಿಜಾಬ್​​ ಅನುಮತಿಸಿಲ್ಲ: ಸುಪ್ರೀಂನಲ್ಲಿ ಕರ್ನಾಟಕ ಸರ್ಕಾರ

ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವುದನ್ನು ಪ್ರಶ್ನಿಸುವ ಒಂದು ಬ್ಯಾಚ್ ಅರ್ಜಿಗಳನ್ನು ಇಂದು ಆಲಿಸಲಿದೆ. 23 ಅರ್ಜಿಗಳ ಬ್ಯಾಚ್ ಅನ್ನು ಬೆಂಚ್ ಮೊದಲು ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವ ಹಕ್ಕನ್ನು ಕೋರಿ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಗಳಾಗಿವೆ. ಇನ್ನೂ ಕೆಲವು ವಿಶೇಷ ರಜೆ ಅರ್ಜಿಗಳಾಗಿದ್ದು, ಇದು ಹಿಜಾಬ್ ನಿಷೇಧವನ್ನು ಎತ್ತಿಹಿಡಿದ ಮಾರ್ಚ್ 15ರ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿದೆ.

ಮಾರ್ಚ್ 15ರಂದು 6ನೇ ದಿನವನ್ನು ಕರ್ನಾಟಕದ ಹೈಕೋರ್ಟ್ ಮೂಲಕ ಅಂಗೀಕರಿಸಿದ ತೀರ್ಪಿನ ವಿರುದ್ಧ ಎಸ್‌ಎಲ್‌ಪಿಗಳನ್ನು ಸಲ್ಲಿಸಲಾಗಿದೆ. ಅರ್ಜಿದಾರರನ್ನು ಪರಿಣಾಮಕಾರಿಯಾಗಿ ನಿಷೇಧಿಸಿರುವ ಫೆ. 5ರ ಸರ್ಕಾರಿ ಆದೇಶವನ್ನು ಎತ್ತಿ ಹಿಡಿಯಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?