AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿಗೆ ಹೊರಟಿದ್ದ ಸಾಧ್ವಿ ಯೋಗಮಾತಾ ಬ್ಯಾಗ್​​ನಲ್ಲಿ ತಲೆಬುರುಡೆ; ಹೇಳಿದ್ದ ಸುಳ್ಳು ಕೆಲವೇ ಕ್ಷಣದಲ್ಲಿ ಗೊತ್ತಾಯ್ತು !

ಸಾಧ್ವಿ ಯೋಗಮಾತಾ ಉಜ್ಜಯಿನಿಯವರು.  ದೆಹಲಿ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರು, ತಲೆ ಬುರುಡೆ ನನ್ನ ಮೃತ ಗುರುಗಳದ್ದು ಎಂದಿದ್ದಾರೆ.

ದೆಹಲಿಗೆ ಹೊರಟಿದ್ದ ಸಾಧ್ವಿ ಯೋಗಮಾತಾ ಬ್ಯಾಗ್​​ನಲ್ಲಿ ತಲೆಬುರುಡೆ; ಹೇಳಿದ್ದ ಸುಳ್ಳು ಕೆಲವೇ ಕ್ಷಣದಲ್ಲಿ ಗೊತ್ತಾಯ್ತು !
ಸಾಧ್ವಿ ಬ್ಯಾಗ್​​ನಲ್ಲಿ ತಲೆಬುರುಡೆ ಪತ್ತೆ
TV9 Web
| Edited By: |

Updated on: Sep 09, 2021 | 12:39 PM

Share

ಮಧ್ಯಪ್ರದೇಶದ ಉಜ್ಜಯನಿ(Ujjain)ಯಿಂದ ದೆಹಲಿಗೆ ಹೊರಟಿದ್ದ ಸಾಧ್ವಿ (Sadhvi)ಯೊಬ್ಬರ ಬ್ಯಾಗ್​​ನಲ್ಲಿದ್ದ ವಸ್ತುಗಳನ್ನು ನೋಡಿ ಇಂಧೋರ್​ ಏರ್​ಪೋರ್ಟ್ (Indore Airport) ಸಿಬ್ಬಂದಿಯೇ ಕಂಗಾಲಾಗಿದ್ದಾರೆ. ಅವರ ಚೀಲದಲ್ಲಿದ್ದ ಮನುಷ್ಯನ ತಲೆಬುರುಡೆ ನೋಡಿದ ಬಳಿಕ ಅಧಿಕಾರಿಗಳು ಸಾಧ್ವಿಗೆ ದೆಹಲಿಗೆ ಪ್ರಯಾಣ ಮಾಡಲು ಅವಕಾಶ ಕೊಡಲಿಲ್ಲ. ಅಂದಹಾಗೆ ಈ ಸಾಧ್ವಿಯ ಹೆಸರು ಯೋಗಮಾತಾ ಸಚ್​ದೇವಾ. ಇವರು ದೆಹಲಿಗೆ ತೆರಳಲು ಇಂಧೋರ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಚೀಲದಲ್ಲಿ ಏನಿದೆ ಎಂದು ಕೇಳಿದ ಸಿಐಎಸ್​ಎಪ್​ ಮತ್ತು ಪೊಲೀಸ್ ಅಧಿಕಾರಿಗಳಿಗೆ, ‘ನನ್ನ ಚೀಲದಲ್ಲಿ ಸನ್ಯಾಸಿಯೊಬ್ಬ ಚಿತಾಭಸ್ಮವಿದೆ. ಅದನ್ನು ಹರಿದ್ವಾರದಲ್ಲಿ ಗಂಗಾ ನದಿಯಲ್ಲಿ ನಿಮಜ್ಜನ ಮಾಡಬೇಕು’ ಎಂದು ಉತ್ತರಿಸಿದ್ದರು.

ಪೊಲೀಸರು ಮತ್ತು ಸಿಐಎಸ್​ಎಫ್​ ಸಿಬ್ಬಂದಿ ಬಳಿ ತನ್ನ ಬ್ಯಾಗ್​ನಲ್ಲಿ ಚಿತಾಭಸ್ಮವಿದೆ ಎಂದು ಸುಳ್ಳು ಹೇಳಿದ್ದ ಸಾಧ್ವಿ ಯೋಗಮಾತಾ ಕೆಲವೇ ಕ್ಷಣದಲ್ಲಿ ಸಿಕ್ಕಿಬಿದ್ದರು. ಏರ್​ಪೋರ್ಟ್ ಭದ್ರತಾ ಸಿಬ್ಬಂದಿ ಲಗೇಜ್​​ನ್ನು ಸ್ಕ್ಯಾನ್​ ಮಾಡುವಾಗ ಸಾಧ್ವಿಯವರ ಬಳಿ ಚೀಲ ತೆರೆಯುವಂತೆ ಹೇಳಿದರು. ಬ್ಯಾಗ್​ ತೆರೆದ ನಂತರ ಅದರಲ್ಲಿದ್ದ ತಲೆಬುರುಡೆ, ಎಲುಬುಗಳನ್ನು ನೋಡಿ ಒಂದು ಕ್ಷಣ ಹೌಹಾರಿದರು. ನಂತರ ಏರ್​ಪೋರ್ಟ್ ಆಡಳಿತಕ್ಕೆ ಸುದ್ದಿ ಮುಟ್ಟಿಸಿದರು.  ಕೊನೆಗೂ ಪೊಲೀಸರು ಸಾಧ್ವಿಗೆ ಆ ವಸ್ತುಗಳನ್ನು ತೆಗೆದುಕೊಂಡು ದೆಹಲಿಗೆ ಹೋಗಲು ಬಿಡಲಿಲ್ಲ.

ಸಾಧ್ವಿ ಯೋಗಮಾತಾ ಉಜ್ಜಯಿನಿ ಜಿಲ್ಲೆಯವರಾಗಿದ್ದಾರೆ.  ದೆಹಲಿ ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಅವರು, ತಲೆ ಬುರುಡೆ ನನ್ನ ಮೃತ ಗುರುಗಳದ್ದು. ಅದನ್ನು ಗಂಗಾನದಿಯಲ್ಲಿ ನಿಮಜ್ಜನ ಮಾಡಲು ಹೊರಟಿದ್ದೆ ಎಂದು ಹೇಳಿದ್ದಾಗಿ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ತಿಳಿಸಿದ್ದಾರೆ. ಆದರೆ ಸಾಧ್ವಿ, ತಲೆಬುರುಡೆ ತೆಗೆದುಕೊಂಡು ಹೋಗಲು ಯಾರ ಅನುಮತಿಯನ್ನೂ ಪಡೆದಿರಲಿಲ್ಲ. ಅದಕ್ಕಾಗಿ ಮುಂದೆ ಹೋಗಲು ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ದೇಶವಿರೋಧಿ’ ಉಪನ್ಯಾಸ, ಟೀಕೆಗಳು ಬೇಡ: ಸಿಬ್ಬಂದಿಗಳಿಗೆ ಸೂಚನೆ ನೀಡಿದ ಕೇರಳದ ಸೆಂಟ್ರಲ್ ಯುನಿವರ್ಸಿಟಿ

Tata- Airbus Deal: ಇದೇ ಮೊದಲ ಬಾರಿಗೆ ಖಾಸಗಿ ವಲಯದ ಟಾಟಾ- ಏರ್​ಬಸ್​ಗೆ ಮಿಲಿಟರಿ ವೈಮಾನಿಕ ಡೀಲ್

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ
ಗದಗ: ಬಸ್ ನಿಲ್ಲಿಸದಿರುವುದನ್ನ ಪ್ರಶ್ನಿಸಿದ ವಿದ್ಯಾರ್ಥಿ ಮೇಲೆ ದರ್ಪ