AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ […]

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Oct 28, 2019 | 7:15 PM

Share

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ ಹಿಂದೆ ಈತನಿಗೆ ಟಿಕ್​ಟಾಕ್​ನಲ್ಲಿ ಹೈದರಾಬಾದ್​ನ ಹುಡುಗಿ ಪರಿಚಯವಾಗಿದ್ಲು. ಟಿಕ್​ಟಾಕ್ ಮಾಡುತ್ತಲೇ ಇಬ್ಬರ ನಡ್ವೆ ಲವ್ವಿಡವ್ವಿ ಶುರುವಾಗಿದೆ. ಕೊನೆಗೆ ಹೆಂಡ್ತಿಗೆ ಹೇಳದೆ ಕದ್ದುಮುಚ್ಚಿ ತಿರುಪತಿ ದೇವಸ್ಥಾನದಲ್ಲಿ ಮದ್ವೆ ಆಗಿದ್ದಾನೆ.

ಇದನ್ನ ಪ್ರಶ್ನೆ ಮಾಡಿದ ಮೊದಲ ಪತ್ನಿಯನ್ನ ಹತ್ಯೆಗೆ ಸಹ ಯತ್ನಿಸಿದ್ದನಂತೆ. ಹೀಗಾಗಿ, ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ. ಹೆಂಡ್ತಿ ದೂರು ನೀಡ್ತಿದ್ದಂತೆಯೇ ಸತ್ಯರಾಜ್ ಪೊಲೀಸ್ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ನಮ್ಮ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಕೊಳ್ತಿರಲಿಲ್ಲ. ಅದ್ಕೆ ಎರಡನೇ ಮದ್ವೆ ಆದೆ ಅಂತಾ ಸಬೂಬು ಹೇಳಿದ್ದಾನೆ.

ಆದ್ರೆ ಈಗ ಗಂಡನ ಟಿಕ್​ಟಾಕ್ ಗೀಳು ಪತ್ನಿಯನ್ನ ಬೀದಿಪಾಲು ಮಾಡಿದೆ. ಒಂದೆಡೆ ಮಕ್ಕಳು ಇಲ್ಲ, ಇದೀಗ ಕಟ್ಕೊಂಡ ಗಂಡ ಇನ್ನೊಂದು ಮದ್ವೆಯಾಗಿದ್ದಾನೆ. ಹೀಗಾಗಿ, ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ ಸತ್ಯರಾಜ್​​ನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Published On - 7:13 pm, Mon, 28 October 19

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!