AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ […]

ಧರ್ಮಪತ್ನಿಗೆ ಕೈಕೊಟ್ಟು ಟಿಕ್​ಟಾಕ್​ ಯುವತಿ ಜೊತೆ ಲವ್ವಿಡವ್ವಿ ಶುರುಮಾಡ್ದ!
ಸಾಧು ಶ್ರೀನಾಥ್​
|

Updated on:Oct 28, 2019 | 7:15 PM

Share

ಹೈದರಾಬಾದ್: ಟಿಕ್​ಟಾಕ್ ಹುಚ್ಚಿನಿಂದ ಅದೆಷ್ಟೋ ಅವಾಂತರಗಳು ಸೃಷ್ಟಿಯಾಗಿವೆ. ಅದೆಷ್ಟೋ ಜನ್ರು ಜೀವ ಕಳೆದುಕೊಂಡಿದ್ದಾರೆ. ಗಂಡನ ಟಿಕ್​ಟಾಕ್ ಗೀಳು ಹೆಂಡ್ತಿಯನ್ನ ಬೀದಿಗೆ ತಂದು ನಿಲ್ಲಿಸಿದೆ. ಜೊತೆಗೆ ಹೆಂಡ್ತಿಗೆ ಕೈಕೊಟ್ಟಿದ್ದ ಆಸಾಮಿಗೆ ಕಂಬಿ ಎಣಿಸೋ ಪರಿಸ್ಥಿತಿಯೂ ಬಂದಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಟಿಕ್​ಟಾಕ್​ನಲ್ಲಿ ಶುರುವಾಯ್ತು ಇಬ್ಬರ ಲವ್ವಿಡವ್ವಿ! ಆಂಧ್ರಪ್ರದೇಶದ ವಿಜಯವಾಡದ ಇಬ್ರಾಹಿಂ ಪಟ್ಟಣದ ನಿವಾಸಿ. ವಿಟಿಪಿಎಸ್ ಉದ್ಯೋಗಿಯಾಗಿರೋ ಸತ್ಯರಾಜ್ ಕಳೆದ 10 ವರ್ಷಗಳ ಹಿಂದೆ ಅನುರಾಧ ಎಂಬಾಕೆಯನ್ನ ಮದ್ವೆ ಆಗಿದ್ದ. ಆದ್ರೆ, ಇವ್ರಿಗೆ ಮಕ್ಕಳಾಗಿರಲಿಲ್ಲ. ಕಳೆದ ಏಳೆಂಟು ತಿಂಗಳ ಹಿಂದೆ ಈತನಿಗೆ ಟಿಕ್​ಟಾಕ್​ನಲ್ಲಿ ಹೈದರಾಬಾದ್​ನ ಹುಡುಗಿ ಪರಿಚಯವಾಗಿದ್ಲು. ಟಿಕ್​ಟಾಕ್ ಮಾಡುತ್ತಲೇ ಇಬ್ಬರ ನಡ್ವೆ ಲವ್ವಿಡವ್ವಿ ಶುರುವಾಗಿದೆ. ಕೊನೆಗೆ ಹೆಂಡ್ತಿಗೆ ಹೇಳದೆ ಕದ್ದುಮುಚ್ಚಿ ತಿರುಪತಿ ದೇವಸ್ಥಾನದಲ್ಲಿ ಮದ್ವೆ ಆಗಿದ್ದಾನೆ.

ಇದನ್ನ ಪ್ರಶ್ನೆ ಮಾಡಿದ ಮೊದಲ ಪತ್ನಿಯನ್ನ ಹತ್ಯೆಗೆ ಸಹ ಯತ್ನಿಸಿದ್ದನಂತೆ. ಹೀಗಾಗಿ, ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ಗಂಡನ ವಿರುದ್ಧ ದೂರು ಕೊಟ್ಟಿದ್ದಾಳೆ. ಹೆಂಡ್ತಿ ದೂರು ನೀಡ್ತಿದ್ದಂತೆಯೇ ಸತ್ಯರಾಜ್ ಪೊಲೀಸ್ ಸ್ಟೇಷನ್​ಗೆ ಬಂದಿದ್ದಾನೆ. ಈ ವೇಳೆ ನಮ್ಮ ಅಪ್ಪ-ಅಮ್ಮನನ್ನ ಸರಿಯಾಗಿ ನೋಡಿಕೊಳ್ತಿರಲಿಲ್ಲ. ಅದ್ಕೆ ಎರಡನೇ ಮದ್ವೆ ಆದೆ ಅಂತಾ ಸಬೂಬು ಹೇಳಿದ್ದಾನೆ.

ಆದ್ರೆ ಈಗ ಗಂಡನ ಟಿಕ್​ಟಾಕ್ ಗೀಳು ಪತ್ನಿಯನ್ನ ಬೀದಿಪಾಲು ಮಾಡಿದೆ. ಒಂದೆಡೆ ಮಕ್ಕಳು ಇಲ್ಲ, ಇದೀಗ ಕಟ್ಕೊಂಡ ಗಂಡ ಇನ್ನೊಂದು ಮದ್ವೆಯಾಗಿದ್ದಾನೆ. ಹೀಗಾಗಿ, ಕೇಸ್ ದಾಖಲಿಸಿಕೊಂಡಿರೋ ಪೊಲೀಸ್ ಸತ್ಯರಾಜ್​​ನನ್ನ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

Published On - 7:13 pm, Mon, 28 October 19

ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ