AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?

ಹೃದಯವನ್ನು ಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?
ಮೆಟ್ರೋ ಮೂಲಕ ಸಾಗಿಸಾದ ಹೃದಯ
ರಾಜೇಶ್ ದುಗ್ಗುಮನೆ
|

Updated on:Feb 02, 2021 | 6:52 PM

Share

ಆರೋಗ್ಯ ತುರ್ತು ಸೇವೆ ಸಮಯದಲ್ಲಿ ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್​ ರಸ್ತೆ) ಮೂಲಕ ವ್ಯಕ್ತಿ ಅಥವಾ ವ್ಯಕ್ತಿಯ ಅಂಗವನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ.  ಈಗ ಮೆಟ್ರೋಗೂ ಗ್ರೀನ್ ಕಾರಿಡಾರ್ ಬಂದಿದ್ದು, ಕಸಿ ಮಾಡಲು ಹೃದಯ ರವಾನೆ ಮಾಡಲಾಗಿದೆ! ಕೇವಲ 30 ನಿಮಿಷಗಳಲ್ಲಿ ಹೃದಯ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆ ತಲುಪಿದೆ.

ಈ ಘಟನೆ ನಡೆದಿದ್ದು ಹೈದರಾಬಾದ್​​ನಲ್ಲಿ. ಎಲ್​ಬಿ ನಗರದ ಕಾಮಿನೇನಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ. ಈತನ ಹೃದಯವನ್ನು ಜುಬಿಲಿ ಹಿಲ್ಸ್​ನ ಅಪೊಲೊ ಆಸ್ಪತ್ರೆಗಳಿಗೆ ಕಸಿ ಮಾಡಲು ರವಾನೆ ಮಾಡಬೇಕಿತ್ತು. ಎರಡೂ ಆಸ್ಪತ್ರೆಗಳ ನಡುವಿನ ಅಂತರ 21 ಕಿ.ಮೀ. ರಸ್ತೆಯಲ್ಲಿ ಹೋದರೆ ಏನಿಲ್ಲವೆಂದರೂ ಒಂದೂವರೆ ಗಂಟೆ ಬೇಕು. ಹೀಗಾಗಿ, ಅಲ್ಲಿರುವ ವೈದ್ಯರು ಮೆಟ್ರೋ ಮೂಲಕ ಹೃದಯ ಸಾಗಿಸಲು ಮುಂದಾಗಿದ್ದರು.

ಎಲ್​ಬಿ ನಗರದ ಸಮೀಪ ಇರುವ ನಾಗೋಲ್ ಮೆಟ್ರೊ ನಿಲ್ದಾಣದಿಂದ ಹೃದಯವನ್ನು ಜುಬಿಲಿ ಹಿಲ್ಸ್​ಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಮೆಟ್ರೋ ಒಂದೇ ಒಂದು ಕಡೆಯೂ ನಿಲ್ಲದೆ ನೇರವಾಗಿ ಜುಬಿಲಿ ಹಿಲ್ಸ್ ತಲುಪಿದೆ. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಹೃದಯವನ್ನು ಅಪೊಲೊ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೇವಲ 30 ನಿಮಿಷಗಳಲ್ಲಿ ಈ ಹೃದಯ ಆಸ್ಪತ್ರೆ ತಲುಪಿದೆ!

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು

Published On - 6:50 pm, Tue, 2 February 21

Follow Us
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ರೌಡಿ ಶೀಟರ್ ಜೊತೆ ದೋಸ್ತಿ: ಡಾಗ್ ಸತೀಶ್​​ಗೆ ಸಂಕಷ್ಟ
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಇರಾನ್-ಇಸ್ರೇಲ್ ಸಂಘರ್ಷ; ರಿಯಾದ್‌ನಲ್ಲಿ ಭಾರತೀಯ ಪ್ರಜೆ ಸಾವು
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ
ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯ ಮೇಲೆ ಏಕಾಏಕಿ ಗುಂಡಿನ ದಾಳಿ