AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?

ಹೃದಯವನ್ನು ಸಾಗಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ಮೆಟ್ರೋದಲ್ಲೂ ಬಂತು ಗ್ರೀನ್ ಕಾರಿಡಾರ್, ರವಾನೆಯಾಯ್ತು ಹೃದಯ: ಎಲ್ಲಿಂದ ಎಲ್ಲಿಗೆ?
ಮೆಟ್ರೋ ಮೂಲಕ ಸಾಗಿಸಾದ ಹೃದಯ
ರಾಜೇಶ್ ದುಗ್ಗುಮನೆ
|

Updated on:Feb 02, 2021 | 6:52 PM

Share

ಆರೋಗ್ಯ ತುರ್ತು ಸೇವೆ ಸಮಯದಲ್ಲಿ ಗ್ರೀನ್ ಕಾರಿಡಾರ್ (ಜೀರೋ ಟ್ರಾಫಿಕ್​ ರಸ್ತೆ) ಮೂಲಕ ವ್ಯಕ್ತಿ ಅಥವಾ ವ್ಯಕ್ತಿಯ ಅಂಗವನ್ನು ಆಸ್ಪತ್ರೆಗೆ ಸಾಗಿಸಲಾಗುತ್ತದೆ.  ಈಗ ಮೆಟ್ರೋಗೂ ಗ್ರೀನ್ ಕಾರಿಡಾರ್ ಬಂದಿದ್ದು, ಕಸಿ ಮಾಡಲು ಹೃದಯ ರವಾನೆ ಮಾಡಲಾಗಿದೆ! ಕೇವಲ 30 ನಿಮಿಷಗಳಲ್ಲಿ ಹೃದಯ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆ ತಲುಪಿದೆ.

ಈ ಘಟನೆ ನಡೆದಿದ್ದು ಹೈದರಾಬಾದ್​​ನಲ್ಲಿ. ಎಲ್​ಬಿ ನಗರದ ಕಾಮಿನೇನಿ ಆಸ್ಪತ್ರೆಯಲ್ಲಿ ವ್ಯಕ್ತಿಯೋರ್ವ ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದ. ಈತನ ಹೃದಯವನ್ನು ಜುಬಿಲಿ ಹಿಲ್ಸ್​ನ ಅಪೊಲೊ ಆಸ್ಪತ್ರೆಗಳಿಗೆ ಕಸಿ ಮಾಡಲು ರವಾನೆ ಮಾಡಬೇಕಿತ್ತು. ಎರಡೂ ಆಸ್ಪತ್ರೆಗಳ ನಡುವಿನ ಅಂತರ 21 ಕಿ.ಮೀ. ರಸ್ತೆಯಲ್ಲಿ ಹೋದರೆ ಏನಿಲ್ಲವೆಂದರೂ ಒಂದೂವರೆ ಗಂಟೆ ಬೇಕು. ಹೀಗಾಗಿ, ಅಲ್ಲಿರುವ ವೈದ್ಯರು ಮೆಟ್ರೋ ಮೂಲಕ ಹೃದಯ ಸಾಗಿಸಲು ಮುಂದಾಗಿದ್ದರು.

ಎಲ್​ಬಿ ನಗರದ ಸಮೀಪ ಇರುವ ನಾಗೋಲ್ ಮೆಟ್ರೊ ನಿಲ್ದಾಣದಿಂದ ಹೃದಯವನ್ನು ಜುಬಿಲಿ ಹಿಲ್ಸ್​ಗೆ ತೆಗೆದುಕೊಂಡು ಹೋಗಲಾಗಿತ್ತು. ಈ ಮೆಟ್ರೋ ಒಂದೇ ಒಂದು ಕಡೆಯೂ ನಿಲ್ಲದೆ ನೇರವಾಗಿ ಜುಬಿಲಿ ಹಿಲ್ಸ್ ತಲುಪಿದೆ. ಅಲ್ಲಿಂದ ಆ್ಯಂಬುಲೆನ್ಸ್ ಮೂಲಕ ಹೃದಯವನ್ನು ಅಪೊಲೊ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೇವಲ 30 ನಿಮಿಷಗಳಲ್ಲಿ ಈ ಹೃದಯ ಆಸ್ಪತ್ರೆ ತಲುಪಿದೆ!

ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವರದಾನವಾಗಿದೆ. ಅಲ್ಲದೆ, ಮೆಟ್ರೋ ಸೇವೆಗೆ ಎಲ್ಲರೂ ಧನ್ಯವಾದ ಹೇಳಿದ್ದಾರೆ.

ನಿವೃತ್ತರಾದ ಮರುದಿನವೇ.. ಕೋಲಾರದ ಯೋಧ ಹೃದಯಾಘಾತದಿಂದ ಸಾವು

Published On - 6:50 pm, Tue, 2 February 21

Follow Us
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲೆ, ಕಾಲೇಜುಗಳಿಗೆ ರಜೆ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಮೇಷಕ್ಕೆ ಹೂಡಿಕೆಯಲ್ಲಿ ಲಾಭ, ವೃಷಭಕ್ಕೆ ಉದ್ಯೋಗದಲ್ಲಿ ಸ್ಥಾನ ಪಲ್ಲಟದ ಯೋಗ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ಕುಮಾರ್ ಬಂಗಾರಪ್ಪ ಹೊಗಳಿಕೆ ಮಾತು ಕೇಳಿ ತಬ್ಬಿಕೊಂಡ ರಾಗಿಣಿ ದ್ವಿವೇದಿ
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ನಟಿ ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಷ್ಣ’; ಏನಿದರ ಕಥೆ?
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
ಬಸ್ ಮೇಲೆ ಬಿದ್ದ ಬೃಹತ್ ಮರ; ಯುಕೆಜಿ ಬಾಲಕಿ ಚಿರನ್ವಿ ಸಾವು
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
'ಮೊಟ್ಟೆ ಹೊಡೆಯುವ ಸಂಸ್ಕೃತಿ ಶುರು ಮಾಡಿದ್ದೇ ಬಿಜೆಪಿಯವರು': ಹರಿಪ್ರಸಾದ್
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
‘ಮುಂಗಾರು ಮಳೆ’, ‘ಕೆಜಿಎಫ್’ ಸಿನಿಮಾಗಳ ಸ್ಮರಿಸಿದ ತೆಲುಗು ನಟ: ವಿಡಿಯೋ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
ಪತ್ನಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ: ಪತಿ ಏಕಾಂಗಿಯಾಗಿ ಪ್ರತಿಭಟನೆ
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
‘ಬಿಜೆಪಿಗರ ಮೇಲೆ ಮೊಟ್ಟೆ ಎಸೆತ ಪೂರ್ವ ನಿಯೋಜಿತ ಕೃತ್ಯ’ ಎಂದ ಆರ್​​ ಅಶೋಕ್
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ
ಸಿಬ್ಬಂದಿಗೆ ಬ್ಯಾಂಕ್ ಮ್ಯಾನೇಜರ್ ಕಿರುಕುಳ ಆರೋಪ