AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಮಹಿಳೆ ಮನೆಯಲ್ಲಿ ಟಾಯ್ಲೆಟ್​​ಗೆ ಅಂತಾ ಒಳಹೋದಾಗ, ಈ ಕಳ್ಳ ಏನು ಮಾಡಿದ ನೋಡಿ!

ಗುಂಟೂರಿನಲ್ಲಿ ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವುದನ್ನು ಕಂಡು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಸದ್ಯದಲ್ಲೇ ಕಳ್ಳನನ್ನು ಹಿಡಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಆ ಮಹಿಳೆ ಮನೆಯಲ್ಲಿ ಟಾಯ್ಲೆಟ್​​ಗೆ ಅಂತಾ ಒಳಹೋದಾಗ, ಈ ಕಳ್ಳ ಏನು ಮಾಡಿದ ನೋಡಿ!
ಆ ಮಹಿಳೆ ಟಾಯ್ಲೆಟ್​​ಗೆ ಅಂತಾ ಒಳಹೋದಾಗ...ಕಳ್ಳ ಏನು ಮಾಡಿದ ನೋಡಿ!
Follow us
ಸಾಧು ಶ್ರೀನಾಥ್​
|

Updated on: Sep 28, 2023 | 4:43 PM

ಗುಂಟೂರು, ಸೆಪ್ಟೆಂಬರ್ 28: ಕಳ್ಳರ ಬುದ್ದಿವಂತಿಕೆ ಮಾಮೂಲಿಯಲ್ಲ.. ಕಳ್ಳತನಕ್ಕೆ ಏನೆಲ್ಲಾ ಪ್ಲಾನ್ ಮಾಡುತ್ತಾರೆ ನೋಡಿ.. ಕಳ್ಳರ ಬುದ್ದಿವಂತಿಕೆ ಮಾಮೂಲಿಯಲ್ಲ.. ಕಳ್ಳತನಕ್ಕೆ ಎಂತೆಂಥಾ ಪ್ಲಾನ್ ಮಾಡುತ್ತಾರೆ ನೋಡಿ. ಅದರಲ್ಲೂ ಬಂಗಾರದ ಬೆಲೆ ಜಾಸ್ತಿಯಾಗಿರುವುದರಿಂದ ಕಳ್ಳರು ಚಿನ್ನಾಭರಣ ಕದಿಯಲು ವಿನೂತನ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಹೊಸ ರೀತಿಯಲ್ಲಿ ಕಳ್ಳತನ ಮಾಡಲಾಗುತ್ತಿದೆ. ಪೊಲೀಸರ ಕಣ್ಗಾವಲು ಎಷ್ಟು ಹೆಚ್ಚಿದೆಯೋ ಅದೇ ಮಟ್ಟದಲ್ಲಿ ಕಳ್ಳರು ಕೂಡ ಹೊಸ ವಿಧಾನಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಗುಂಟೂರಿನಲ್ಲಿ ಇದೇ ರೀತಿಯ ಕಳ್ಳತನ ನಡೆದಿದೆ.

ಗುಂಟೂರಿನಲ್ಲಿ ಬುಧವಾರ ಮಧ್ಯಾಹ್ನ ರಸ್ತೆಗಳು ನಿರ್ಜನವಾಗಿದ್ದವು. ಬಿಸಿಲು ತುಂಬಾ ತೀವ್ರವಾಗಿತ್ತು. ಚಂದ್ರಮೌಳಿ ನಗರದಲ್ಲಿ ಮೋಹನ್ ರೆಡ್ಡಿ ಮತ್ತು ಅನುರಾಧ ದಂಪತಿ ವಾಸವಿದ್ದಾರೆ. ಮಧ್ಯಾಹ್ನ ಮನೆಯಲ್ಲಿ ಅನುರಾಧಳನ್ನು ಬಿಟ್ಟರೆ ಯಾರೂ ಇಲ್ಲ. ಇನ್ನು ಮೋಹನ್ ರೆಡ್ಡಿ ಮಿರ್ಚಿ ಯಾರ್ಡ್​​​ನಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಹೋಗಿದ್ದಾರೆ. ಮಕ್ಕಳು ಕಾಲೇಜಿಗೆ ಹೋಗಿದ್ದರಿಂದ ಅನುರಾಧ ಒಬ್ಬಳೇ ಮನೆಯಲ್ಲಿದ್ದಳು.

ಈ ವೇಳೆ ಅನುರಾಧ ಬಾತ್ ರೂಮ್ ಗೆ ಹೋಗಿದ್ದಾರೆ. ಬಾತ್ ರೂಮಿಗೆ ಹೋಗುವ ಮುನ್ನ ಮನೆ ಬಾಗಿಲು ಮುಚ್ಚಲು ಮರೆತಿದ್ದರು. ಅದೇ ವೇಳೆಯಲ್ಲಿ ಅನುರಾಧ ಟಾಯ್ಲೆಟ್​​​ಗೆ ಹೋಗುವುದನ್ನು ಕಂಡ ಕಳ್ಳ ಮನೆಗೆ ನುಗ್ಗಿದ್ದಾನೆ. ಮನೆಯೊಳಗೆ ಬೀರುವಿನಲ್ಲಿದ್ದ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಅಲ್ಲಿಂದ ಸೈಲೆಂಟಾಗಿ ಪರಾರಿಯಾಗಿದ್ದಾನೆ. ಹೋಗುವ ಮುನ್ನ ಬಾತ್ ರೂಂ ಬಾಗಿಲು ಬಂದ್​ ಮಾಡಿಟ್ಟು ಹೋಗಿದ್ದಾನೆ.

ಸ್ವಲ್ಪ ಸಮಯದ ನಂತರ ಅನುರಾಧ ಹೊರಬರಲು ಯತ್ನಿಸಿದ್ದಾರೆ. ಆದರೆ ಹೊರಗಿನಿಂದ ಬಾತ್ ರೂಂ ಬಾಗಿಲು ಬಂದ್​ ಆಗಿತ್ತು. ಆಗ ಕಿರುಚಿಕೊಂಡಿದ್ದಾರೆ. ಪಕ್ಕದ ಅಪಾರ್ಟ್‌ಮೆಂಟ್‌ನ ವಾಚ್‌ಮನ್.. ಅನುರಾಧಾಳ ಅಳು ಕೂಗಾಟ ಕೇಳಿ ಮನೆಯೊಳಗೆ ಬಂದಿದ್ದಾನೆ. ಅನುರಾಧ ಬಾತ್ ರೂಂನಿಂದ ಕಿರುಚುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿ ನೋಡಿದರೆ ಹೊರಗಿನಿಂದ ಚಿಲುಕ ಹಾಕಿರುವುದು ಕಂಡುಬಂದಿದೆ.

ಆಗ ವಾಚ್​​ಮನ್​​ ಚಿಲಕ ತೆಗೆಯುತ್ತಿದ್ದಂತೆ ಅನುರಾದ ತಕ್ಷಣ ಹೊರಗೆ ಬಂದಿದ್ದಾರೆ. ಬಾತ್ ರೂಂನಿಂದ ಹೊರ ಬಂದ ಅನುರಾಧ ಅನುಮಾನಗೊಂಡು ರೂಮಿನೊಳಕ್ಕೆ ಹೋಗಿ ನೋಡಿದಾಗ ಬಾಗಿಲು ಹಾಕಿರುವುದು ಕಂಡು ಬಂದಿದೆ. ಬೀರುವನ್ನು ಪರಿಶೀಲಿಸಲಾಗಿ ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಕಂಡುಬಂದಿದೆ.

ಕಳ್ಳ ಮನೆಗೆ ನುಗ್ಗಿ ಚಿನ್ನಾಭರಣ ದೋಚಿರುವುದನ್ನು ಕಂಡು ದಂಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಸದ್ಯದಲ್ಲೇ ಕಳ್ಳನನ್ನು ಹಿಡಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ: ಸ್ಫೋಟಕ ಅಂಶ ಬಿಚ್ಚಿಟ್ಟ ಲಾಯರ್
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
Ahmedabad Plane Crash: ವೈದ್ಯ ಪ್ರತೀಕ್ ನೆನೆದು ಸ್ನೇಹಿತ ಭಾವುಕ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಭವಿಷ್ಯ ನುಡಿದ ಎರಡು ತಿಂಗಳು ನಂತರ ಭಾರತದಲ್ಲಿ ವಿಮಾನ ದುರ್ಘಟನೆ ಜರುಗಿದೆ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಪ್ರತಾಪ್​ಗೆ ಗಗನನ ತಬ್ಬಿಕೊಳ್ಳೋ ಆಸೆ; ವೇದಿಕೆ ಮೇಲೆ ಹೇಳಿಕೊಂಡ ಸ್ಪರ್ಧಿ
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ಎಮರ್ಜೆನ್ಸಿ ಎಕ್ಸಿಟ್​ನಿಂದ ಕೆಳಗೆ ಹಾರಿ ಜೀವ ಉಳಿಸಿಕೊಂಡೆ: ರಮೇಶ್
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ವಿಮಾನ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದ ಪ್ರಧಾನಿ ಮೋದಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ದುರಂತ ನಡೆದ ಸ್ಥಳದಲ್ಲಿ ದಟ್ಟಹೊಗೆ, ಏನೂ ಕಾಣುತ್ತಿರಲಿಲ್ಲ: ಪ್ರತ್ಯಕ್ಷದರ್ಶಿ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಸಿದ್ದರಾಮಯ್ಯ ಮನೆ ಸಮೀಪವೇ ಕಳ್ಳತನ: ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
ವಿಮಾನ ದುರಂತದ ಬಗ್ಗೆ ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಭಯಾನಕ ಅನುಭವ ಇಲ್ಲಿದೆ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ
Video: ಅಹಮದಾಬಾದ್ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ