Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದ ಭಿಲ್ವಾರ ದೇವಸ್ಥಾನದ ಕಾಣಿಕೆ ಡಬ್ಬಿಗೆ ಮೋದಿ ಹಾಕಿದ ಹಣವೆಷ್ಟು? ಇಲ್ಲಿದೆ ನಿಜ ಸಂಗತಿ

ಆದರೆ ಇದು ನಿಜವಲ್ಲ ಎಂದ ಸಾಬೀತು ಪಡಿಸಿದೆ ಇನ್ನೊಂದು ವಿಡಿಯೊ. ಈ ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರು ಲಕೋಟೆಯನ್ನು ಬಳಸದೆ ದೇವರಿಗೆ ಕಾಣಿಕೆ ಅರ್ಪಿಸಿದ್ದಾರೆ ಎಂದು ತೋರಿಸುತ್ತದೆ. ಪ್ರಧಾನ ಮಂತ್ರಿಯವರು ಐನೂರು ಮತ್ತು ಇನ್ನೂರು ಕರೆನ್ಸಿ ನೋಟುಗಳನ್ನು ನೇರವಾಗಿ ದೇಣಿಗೆ ಪೆಟ್ಟಿಗೆಯೊಳಗೆ ಹಾಕುವುದನ್ನು ಕಾಣಬಹುದು. ಅಂದರೆ ಈ ಹಿಂದೆ ಪ್ರಧಾನಿಯವರು ನೀಡಿದ್ದ ರೂ.21ರ ಕಾಣಿಕೆ ಹಾಕಿದ್ದು ಎಂಬುದು ಸುದ್ದಿ ಸುಳ್ಳು. 

ರಾಜಸ್ಥಾನದ ಭಿಲ್ವಾರ ದೇವಸ್ಥಾನದ ಕಾಣಿಕೆ ಡಬ್ಬಿಗೆ ಮೋದಿ ಹಾಕಿದ ಹಣವೆಷ್ಟು? ಇಲ್ಲಿದೆ ನಿಜ ಸಂಗತಿ
ಪ್ರಧಾನಿ ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on: Sep 28, 2023 | 5:04 PM

ದೆಹಲಿ ಸೆಪ್ಟೆಂಬರ್  28: ಈ ವರ್ಷದ ಜನವರಿ 28 ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜಸ್ಥಾನದ (Rajasthan) ಭಿಲ್ವಾರಾ (Bhilwara) ಜಿಲ್ಲೆಯ ಅಸಿಂದ್ ಪಟ್ಟಣದಲ್ಲಿರುವ ದೇವನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಅವರು ಬಹುಶಃ ಮೂರನೇ ಬಾರಿಗೆ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಿರಬೇಕು. ಪ್ರಾರ್ಥನೆ ಸಲ್ಲಿಸಿದ ಮೋದಿ ಅಲ್ಲಿ ಇರಿಸಿದ್ದ ಕಾಣಿಕೆ ಹುಂಡಿಗೆ ಕಾಣಿಕೆಯನ್ನೂ ಹಾಕಿದ್ದರು. ಇದಾಗಿ ಎಂಟು ತಿಂಗಳ ನಂತರ ಮೋದಿ ಕಾಣಿಕೆ ಹುಂಡಿಗೆ ಹಾಕಿದ ಹಣದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಏಕಾಏಕಿ ಚರ್ಚೆಯೊಂದು ನಡೆದಿದೆ. ಅದೇನೆಂದರೆ ಪ್ರಧಾನಿ ಅವರು ಲಕೋಟೆಯೊಂದರಲ್ಲಿ ರೂ 21ನ್ನು ಕಾಣಿಕೆ ಹುಂಡಿಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊ ವೈರಲ್ ಆಗಿದೆ. ವಿಡಿಯೊ ವೈರಲ್ ಆದ ಬೆನ್ನಲ್ಲೇ ಹಲವರು ಪ್ರಧಾನಿ ಮೋದಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.

ವಿಡಿಯೊದಲ್ಲಿ ಕಾಣಿಸಿದ್ದೇನು?

ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಣಿಗೆ ಪೆಟ್ಟಿಗೆಯಲ್ಲಿ ಹಣ ಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿ ಅವರು ಜನವರಿ 28 ರಂದು ಮಲಸೇರಿ ದೇವದುಂಗರಿಯಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಪ್ರಧಾನಿ ಮೋದಿ ಬಿಳಿ ಲಕೋಟೆಯನ್ನು ಹಾಕಿದ್ದರು ಎಂದು ದೇವಾಲಯದ ಅರ್ಚಕರು ಹೇಳಿಕೊಂಡಿದ್ದರು. ಭೇಟಿಯ ಎಂಟು ತಿಂಗಳ ನಂತರ ಸೆಪ್ಟೆಂಬರ್ 25 ರಂದು ದೇವಾಲಯದ ಅರ್ಚಕರು ಕಾಣಿಕೆ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಮೂರು ಲಕೋಟೆಗಳು ಕಂಡುಬಂದವು. ಬಿಳಿ ಲಕೋಟೆ ಪ್ರಧಾನಿ ಮೋದಿಯವರದ್ದು ಎಂದು ಹೇಳಲಾಗಿತ್ತು. ದೇವಸ್ಥಾನದ ಅರ್ಚಕರು ಎಲ್ಲರ ಮುಂದೆ ಲಕೋಟೆಯನ್ನು ತೆರೆದಿದ್ದು, ಅದರಲ್ಲಿ 21 ರೂಪಾಯಿ ಪತ್ತೆಯಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು ದೇವಸ್ಥಾನದ ಕಾಣಿಕೆ ಡಬ್ಬಕ್ಕೆ ನಗದು ಹಾಕುತ್ತಿರುವಾಗ ಅವರ ಹಿಂದೆ ದೇವಸ್ಥಾನದ ಅರ್ಚಕ ಹೇಮರಾಜ್ ಪೋಸ್ವಾಲ್ ನಿಂತಿರುವುದು ವಿಡಿಯೊದಲ್ಲಿ ಕಂಡು ಬರುತ್ತಿದೆ. ಪ್ರಧಾನಿ ಮೋದಿ ಅವರ ಕೈಯಲ್ಲಿ ಸ್ವಲ್ಪ ಹಣವಿದ್ದು, ಅದನ್ನು ಕಾಣಿಕೆ ಡಬ್ಬದಲ್ಲಿ ಹಾಕುತ್ತಿರುವುದು ಕಂಡುಬಂದಿದೆ.

ಆದರೆ ಇದು ನಿಜವಲ್ಲ ಎಂದ ಸಾಬೀತು ಪಡಿಸಿದೆ ಇನ್ನೊಂದು ವಿಡಿಯೊ. ಈ ವಿಡಿಯೊದಲ್ಲಿ ಪ್ರಧಾನಿ ಮೋದಿ ಅವರು ಲಕೋಟೆಯನ್ನು ಬಳಸದೆ ದೇವರಿಗೆ ಕಾಣಿಕೆ ಅರ್ಪಿಸಿದ್ದಾರೆ ಎಂದು ತೋರಿಸುತ್ತದೆ. ಪ್ರಧಾನ ಮಂತ್ರಿಯವರು ಐನೂರು ಮತ್ತು ಇನ್ನೂರು ಕರೆನ್ಸಿ ನೋಟುಗಳನ್ನು ನೇರವಾಗಿ ದೇಣಿಗೆ ಪೆಟ್ಟಿಗೆಯೊಳಗೆ ಹಾಕುವುದನ್ನು ಕಾಣಬಹುದು. ಅಂದರೆ ಈ ಹಿಂದೆ ಪ್ರಧಾನಿಯವರು ನೀಡಿದ್ದ ರೂ.21ರ ಕಾಣಿಕೆ ಹಾಕಿದ್ದು ಎಂಬುದು ಸುದ್ದಿ ಸುಳ್ಳು.

ಚುನಾವಣಾ ಕಾಲದಲ್ಲಿ ಪ್ರಧಾನಿಯ ಪ್ರತಿಷ್ಠೆಯನ್ನು ಕೆಡಿಸುವ ಉದ್ದೇಶಪೂರ್ವಕ ಪ್ರಯತ್ನ ಎಂದೂ ಇದನ್ನು ಹೇಳಬಹುದು. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿ ಬಗ್ಗೆ ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತದೆ. ಮುಂದಿನ ಎಂಟು ತಿಂಗಳಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಯ ಜೊತೆಗೆ ಐದು ರಾಜ್ಯಗಳ ಚುನಾವಣೆಗಳು ನಡೆಯಲಿವೆ. ಇದ್ದಕ್ಕಿದ್ದಂತೆ, ಪ್ರಧಾನಿ ಮೋದಿಯವರ ಶೈಕ್ಷಣಿಕ ಅರ್ಹತೆ, ಅವರ ವೈವಾಹಿಕ ಸ್ಥಿತಿ, ಅವರಂತಹ ವಿಷಯಗಳು ಡಿಸೈನರ್ ಬಟ್ಟೆ, ಅವರ ಬ್ರಾಂಡ್ ಕೈಗಡಿಯಾರಗಳು ಅಥವಾ ವೈಯಕ್ತಿಕ ಅಭಿರುಚಿ ಅಥವಾ ಆಯ್ಕೆಯ ಇತರ ವಿಷಯಗಳು ಚರ್ಚೆಯಾಗಬಹುದು.

ಇದನ್ನೂ ಓದಿ: ರಾಜಸ್ಥಾನದ ಭಿಲ್ವಾರ ದೇವನಾರಾಯಣ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಲಕೋಟೆ ಹಾಕಿದ್ದರೇ ಪ್ರಧಾನಿ ಮೋದಿ; ಕೊನೆಗೂ ಬಯಲಾಯ್ತು ಸತ್ಯ

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಯ ಸಂದರ್ಭದಲ್ಲಿ, ಪಿಎಂ ಮೋದಿಯನ್ನು ಅತ್ಯಂತ ಜನಪ್ರಿಯ ಜಾಗತಿಕ ನಾಯಕ ಎಂದು ಹೋರ್ಡಿಂಗ್‌ನಲ್ಲಿ ಪ್ರಸ್ತುತಪಡಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿತ್ತು. ಇದಕ್ಕೆ ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಪವನ್ ಖೇರಾ ವಾಗ್ದಾಳಿ ನಡೆಸಿದರು, ಇದು ನಮ್ಮ ಮನೆಗೆ ಬರುವ ಇತರ ವಿಶ್ವ ನಾಯಕರನ್ನು ಕೀಳು ಮಾಡುವ ಪ್ರಯತ್ನವಾಗಿದೆ ಎಂದು ಹೇಳಿದರು. ಇದಾದ ನಂತರ ಪ್ರದರ್ಶನದಲ್ಲಿ ಅಂತಹ ಯಾವುದೇ ಹೋರ್ಡಿಂಗ್ ಇಲ್ಲ ಎಂದು ಕಂಡುಬಂದಿದೆ.

ದೇವನಾರಾಯಣನ ಜನ್ಮಸ್ಥಳ ಮಲಸೇರಿ ದೇವಡೂಂಗರಿ ಗುರ್ಜರ್ ಸಮುದಾಯದ ಆರಾಧಕರಾದ ದೇವನಾರಾಯಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. 1,111 ವರ್ಷಗಳ ಹಿಂದೆ ದೇವನಾರಾಯಣನ ತಾಯಿ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಳು ಎಂದು ನಂಬಲಾಗಿದೆ. ನಂತರ ವಿಷ್ಣುವು ಸ್ವತಃ ದೇವನಾರಾಯಣನ ರೂಪದಲ್ಲಿ ಕಾಣಿಸಿಕೊಂಡರು. ಈ ಕಾರಣಕ್ಕಾಗಿಯೇ ಈ ದೇವಾಲಯವು ಗುರ್ಜರ್ ಸಮುದಾಯದ ಜನರಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ