ಸೌರವ್​ ಗಂಗೂಲಿಗೆ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸಮಕ್ಷಮದಲ್ಲಿ ಸ್ಟಂಟ್​ ಅಳವಡಿಕೆ

| Updated By: Lakshmi Hegde

Updated on: Jan 27, 2021 | 9:52 PM

ಡಾ. ಅಫ್ತಬ್​ ಖಾನ್​ ನಾಳೆ ಗಂಗೂಲಿಗೆ ಸ್ಟಂಟ್​ ಹಾಕಲಿದ್ದಾರೆ. ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸಮಕ್ಷಮ ಇರಲಿದೆ ಎಂದು ವುಡ್​ಲ್ಯಾಂಡ್​ ಆಸ್ಪತ್ರೆ ಮಾಹಿತಿ ನೀಡಿದೆ.

ಸೌರವ್​ ಗಂಗೂಲಿಗೆ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸಮಕ್ಷಮದಲ್ಲಿ ಸ್ಟಂಟ್​ ಅಳವಡಿಕೆ
ಸೌರವ್​ ಗಂಗೂಲಿ- ದೇವಿ ಶೆಟ್ಟಿ
Follow us on

ಕೋಲ್ಕತ್ತ: ಹೃದಯ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ನಾಳೆ ವುಡ್​ಲ್ಯಾಂಡ್​ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ವೇಳೆ ಅವರಿಗೆ ಸ್ಟಂಟ್​ ಅಳವಡಿಕೆ ಮಾಡಲಾಗುತ್ತದೆ. ವಿಶೇಷ ಎಂದರೆ, ಕರ್ನಾಟಕದ ಖ್ಯಾತ ಹೃದ್ರೋಗ ತಜ್ಞ ದೇವಿ ಶೆಟ್ಟಿ ಅವರು ಕೂಡ ಹಾಜರಿರಲಿದ್ದಾರೆ.

ಗಂಗೂಲಿಗೆ ಎದೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಇಂದು ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಡಾ. ಸಪ್ತರ್ಷಿ ಬಸು ಮತ್ತು ಡಾ. ಸರೋಜ್​ ಮೊಂಡಲ್​ ಅವರ ಮೇಲ್ವಿಚಾರಣೆ ಮಾಡಿದ್ದಾರೆ. ಡಾ. ಅಫ್ತಬ್​ ಖಾನ್​ ನಾಳೆ ಗಂಗೂಲಿಗೆ ಸ್ಟಂಟ್​ ಹಾಕಲಿದ್ದಾರೆ. ಡಾ.ದೇವಿ ಶೆಟ್ಟಿ ಸಮಕ್ಷಮ ಇರಲಿದೆ ಎಂದು ವುಡ್​ಲ್ಯಾಂಡ್​ ಆಸ್ಪತ್ರೆ ಮಾಹಿತಿ ನೀಡಿದೆ.

ಸೌರವ್​ ಗಂಗೂಲಿಗೆ ಇತ್ತೀಚೆಗೆ ಜಿಮ್​ ಮಾಡುವಾಗ ಚಿಕ್ಕ ಪ್ರಮಾಣದಲ್ಲಿ ಹೃದಯಾಘಾತ ಸಂಭವಿಸಿತ್ತು. ನಂತರ ಅವರನ್ನು ಕೋಲ್ಕತ್ತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ದಾದಾಗೆ ಹೃದಯ ಸಮಸ್ಯೆ ಇದೆ ಎಂದು ಹೇಳಿದ್ದರು. ಈ ಸಮಸ್ಯೆಗೆ ಚಿಕಿತ್ಸೆ ಪಡೆದ ಅವರು ಆಸ್ಪತ್ರೆಯಿಂದ ಮರಳಿ ಬಂದಿದ್ದರು. ಇಂದು ಅವರಿಗೆ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಈ ವಿಚಾರ ಅಭಿಮಾನಿಗಳಲ್ಲಿ ಬಹಳಷ್ಟು ಆತಂಕ ಮೂಡಿಸಿತ್ತು. ಆದರೆ, ಅವರ ಆರೋಗ್ಯ ಸಮಸ್ಥಿತಿಯಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಾದಾ ಸೌರವ್​ ಗಂಗೂಲಿ ಎದೆನೋವಿನಿಂದ ಮತ್ತೆ ಆಸ್ಪತ್ರೆಗೆ ದಾಖಲು