ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ವೇಳೆ ದಾಳಿ; ಕಳವಳ ವ್ಯಕ್ತಪಡಿಸಿದ ಭಾರತ

|

Updated on: Oct 12, 2024 | 6:33 PM

ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಲು ಮತ್ತು ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಒತ್ತಾಯಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮತ್ತು ವಿಧ್ವಂಸಕ ಘಟನೆಗಳ ಹಿನ್ನೆಲೆಯಲ್ಲಿ ಹೇಳಿಕೆ ನೀಡಲಾಗಿದೆ. ಶುಕ್ರವಾರ ರಾತ್ರಿ, ಢಾಕಾದ ತಂತಿಬಜಾರ್ ಪ್ರದೇಶದಲ್ಲಿನ ದೇವಾಲಯದ ಮೇಲೆ ಅಗ್ನಿಬಾಂಬ್ ಎಸೆದಿದ್ದು, ಭಕ್ತರಲ್ಲಿ ಭಯ ಹುಟ್ಟಿಸಿತ್ತು.

ಬಾಂಗ್ಲಾದೇಶದಲ್ಲಿ ದುರ್ಗಾಪೂಜಾ ವೇಳೆ ದಾಳಿ; ಕಳವಳ ವ್ಯಕ್ತಪಡಿಸಿದ ಭಾರತ
ದುರ್ಗಾ ಮಾತೆ
Follow us on

ದೆಹಲಿ ಅಕ್ಟೋಬರ್ 12: ಬಾಂಗ್ಲಾದೇಶದಲ್ಲಿ (Bangladesh) ನಡೆಯುತ್ತಿರುವ ದುರ್ಗಾಪೂಜಾ (Durga Puja) ಉತ್ಸವದ ವೇಳೆ ಹಿಂದೂ ದೇವಾಲಯಗಳು ಮತ್ತು ಮಂಟಪಗಳ ಮೇಲೆ ನಡೆದ ದಾಳಿಗಳ ಬಗ್ಗೆ ಭಾರತ ಶನಿವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ದೇವಾಲಯಗಳ ಅಪವಿತ್ರತೆಯನ್ನು ಭಾರತ ಖಂಡಿಸುತ್ತದೆ. ಬಾಂಗ್ಲಾದೇಶ ಸರ್ಕಾರವು ತನ್ನ ಅಲ್ಪಸಂಖ್ಯಾತ ಹಿಂದೂ ಜನಸಂಖ್ಯೆಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವಂತೆ ಕರೆ ನೀಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಹೇಳಿಕೆಯಲ್ಲಿ ತಿಳಿಸಿದೆ.

ಢಾಕಾದ ತಂತಿಬಜಾರ್‌ನಲ್ಲಿನ ಪೂಜಾ ಮಂಟಪದ ಮೇಲೆ ದಾಳಿ ಮತ್ತು ಸತ್ಖೈರಾದ ಪೂಜ್ಯ ಜೇಶೋರೇಶ್ವರಿ ಕಾಳಿ ದೇವಸ್ಥಾನದಲ್ಲಿ ಕಳ್ಳತನವನ್ನು ನಾವು ಗಂಭೀರವಾಗಿ ಕಾಳಜಿಯಿಂದ ಗಮನಿಸಿದ್ದೇವೆ” ಎಂದು MEA ಹೇಳಿಕೆಯಲ್ಲಿ ಹೇಳಿದೆ. “ಇವು ಶೋಚನೀಯ ಘಟನೆಗಳು. ನಾವು ಈಗ ಹಲವಾರು ದಿನಗಳಿಂದ ಕಂಡಿರುವ ದೇವಾಲಯಗಳು ಮತ್ತು ದೇವತೆಗಳಿಗೆ ಅಪವಿತ್ರಗೊಳಿಸುವಿಕೆ ಮತ್ತು ಹಾನಿಯ ವ್ಯವಸ್ಥಿತ ಮಾದರಿಯನ್ನು ಅವರು ಅನುಸರಿಸುತ್ತಾರೆ.

ವಿದೇಶಾಂಗ ಸಚಿವಾಲಯವು ಬಾಂಗ್ಲಾದೇಶ ಸರ್ಕಾರವು ತ್ವರಿತ ಕ್ರಮ ಕೈಗೊಳ್ಳಲು ಮತ್ತು ಎಲ್ಲಾ ಅಲ್ಪಸಂಖ್ಯಾತರನ್ನು ರಕ್ಷಿಸಲು ಒತ್ತಾಯಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮತ್ತು ವಿಧ್ವಂಸಕ ಘಟನೆಗಳ ಹಿನ್ನೆಲೆಯಲ್ಲಿ ಹೇಳಿಕೆ ನೀಡಲಾಗಿದೆ. ಶುಕ್ರವಾರ ರಾತ್ರಿ, ಢಾಕಾದ ತಂತಿಬಜಾರ್ ಪ್ರದೇಶದಲ್ಲಿನ ದೇವಾಲಯದ ಮೇಲೆ ಅಗ್ನಿಬಾಂಬ್ ಎಸೆದಿದ್ದು, ಭಕ್ತರಲ್ಲಿ ಭಯ ಹುಟ್ಟಿಸಿತ್ತು.

ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಮಾಧ್ಯಮ ವರದಿಗಳ ಪ್ರಕಾರ, ಈ ವೇಳೆ ಐದು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಬಾಂಗ್ಲಾದೇಶದ ನೈಋತ್ಯ ಸತ್ಖಿರಾ ಜಿಲ್ಲೆಯ ಹಿಂದೂ ದೇವಾಲಯದಿಂದ ದುರ್ಗಾ ಪೂಜೆಯ ಆಚರಣೆಯ ನಡುವೆ ಪ್ರಧಾನಿ ನರೇಂದ್ರ ಮೋದಿಯವರು ಉಡುಗೊರೆಯಾಗಿ ನೀಡಿದ್ದ ಕೈಯಿಂದ ತಯಾರಿಸಿದ ಚಿನ್ನದ ಮುಕುಟ (ಕಿರೀಟ) ಕದಿಯಲಾಗಿದೆ.

ಈ ತಿಂಗಳು ದುರ್ಗಾ ಪೂಜೆ ಆಚರಣೆಗೆ ಸಂಬಂಧಿಸಿದಂತೆ ಸುಮಾರು 35 ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿದಂತೆ ಹದಿನೇಳು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಪೊಲೀಸರು ತಿಳಿಸಿದ್ದಾರೆ. ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ಎಂಡಿ ಮೊಯಿನುಲ್ ಇಸ್ಲಾಂ, ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಮತ್ತಷ್ಟು ಅಶಾಂತಿಯನ್ನು ಪ್ರಚೋದಿಸಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬಿಜೆಪಿ ಭಯೋತ್ಪಾದಕರ ಪಕ್ಷ: ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ

“ಈ ಅಡೆತಡೆಗಳಲ್ಲಿ ಭಾಗಿಯಾಗಿರುವ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ದುರ್ಗಾ ಪೂಜೆಯ ವೇಳೆ ಯಾರಾದರೂ ಅವ್ಯವಸ್ಥೆ ಸೃಷ್ಟಿಸಲು ಅಥವಾ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ತೊಡಗಿದರೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಇಸ್ಲಾಂ ಹೇಳಿದ್ದಾರೆ.  ಢಾಕಾ ನಿವಾಸಿ ಅಂಕಿತಾ ಭೌಮಿಕ್ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಾ, “ಪ್ರತಿಯೊಬ್ಬ ವ್ಯಕ್ತಿಯೂ ಅವರವರ ಧರ್ಮವನ್ನು ಅವರವರ ಆಚಾರ-ವಿಚಾರಗಳ ಪ್ರಕಾರ ಆಚರಿಸುವ ಮನಸ್ಥಿತಿ ಮತ್ತು ಪ್ರವೃತ್ತಿಯನ್ನು ಹೊಂದಿದ್ದರೆ ನಮಗೆ ಯಾವುದೇ ಭದ್ರತೆಯ ಅಗತ್ಯವಿರುವುದಿಲ್ಲ. ಯಾವುದೇ ಭಯ ಇರುವುದಿಲ್ಲ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ