AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇದಕ್ಕಾಗಿಯೇ ಸಿಎಎ ಅಗತ್ಯವಾಗಿತ್ತು’: ಕೇಂದ್ರ ಸಚಿವ ಹರ್​​ದೀಪ್ ಸಿಂಗ್ ಪುರಿ ಟ್ವೀಟ್

ಭಾರತೀಯ ವಾಯುಪಡೆಯಿಂದ ವಿಶೇಷ ಸ್ಥಳಾಂತರಿಸುವ ವಿಮಾನವು ಭಾನುವಾರ ಹಿಂಡನ್ ವಾಯುನೆಲೆಗೆ ತಲುಪಿತು. 168 ಪ್ರಯಾಣಿಕರನ್ನು ಇದು ಕರೆತಂದಿದ್ದು, ಇದರಲ್ಲಿ ಅಫ್ಘಾನಿಸ್ತಾನದ ಮಾಜಿ ಸಂಸದರು ಸೇರಿದ್ದರು.

'ಇದಕ್ಕಾಗಿಯೇ ಸಿಎಎ ಅಗತ್ಯವಾಗಿತ್ತು': ಕೇಂದ್ರ ಸಚಿವ ಹರ್​​ದೀಪ್ ಸಿಂಗ್ ಪುರಿ ಟ್ವೀಟ್
ಹರ್​ದೀಪ್ ಸಿಂಗ್ ಪುರಿ
TV9 Web
| Edited By: |

Updated on: Aug 22, 2021 | 5:39 PM

Share

ದೆಹಲಿ: ತಾಲಿಬಾನ್ ಅಫ್ಘಾನಿಸ್ತಾನವನ್ನು ಸ್ವಾಧೀನ ಪಡಿಸಿದ ನಂತರ ಅಫ್ಘಾನಿಸ್ತಾನದಿಂದ ಜನರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಗಳ ನಡುವೆಯೇ ಕೇಂದ್ರ ಸಚಿವ ಹರ್​​ದೀಪ್ ಸಿಂಗ್ ಪುರಿ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದು ಎಷ್ಟು ಅಗತ್ಯ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು. “ನಮ್ಮ ನೆರೆಹೊರೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಸಿಖ್ಖರು ಮತ್ತು ಹಿಂದುಗಳು ಕಷ್ಟಕರವಾದ ಸಮಯವನ್ನು ಅನುಭವಿಸುತ್ತಿರುವಾಗ  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದು ಯಾಕೆ ಅಗತ್ಯ ಎಂಬುದನ್ನು ಇದು ತೋರಿಸುತ್ತದೆ” ಎಂದು ಸಚಿವರು ಟ್ವೀಟ್ ಮಾಡಿದ್ದಾರೆ. ಭಾರತೀಯ ವಾಯುಪಡೆಯಿಂದ ವಿಶೇಷ ಸ್ಥಳಾಂತರಿಸುವ ವಿಮಾನವು ಭಾನುವಾರ ಹಿಂಡನ್ ವಾಯುನೆಲೆಗೆ ತಲುಪಿತು. 168 ಪ್ರಯಾಣಿಕರನ್ನು ಇದು ಕರೆತಂದಿದ್ದು, ಇದರಲ್ಲಿ ಅಫ್ಘಾನಿಸ್ತಾನದ ಮಾಜಿ ಸಂಸದರು ಸೇರಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ, ಸ್ಥಳಾಂತರದ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ, ಅಲ್ಲಿ ವಿಮಾನದೊಳಗೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಮಾಡುವುದನ್ನು ಕಾಣಬಹುದು.

ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟು ವಿವಾದಾತ್ಮಕ ಸಿಎಎಯನ್ನು ಮತ್ತೆ ಚರ್ಚೆಗೆ ತಂದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಪೌರತ್ವವನ್ನು ನೀಡುವ ಉದ್ದೇಶದಿಂದ ಹಿಂಸೆಗೊಳಗಾದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಕ್ರಿಶ್ಚಿಯನ್ನರಿಗೆ ಡಿಸೆಂಬರ್ 2014ರೊಳಗೆ ನೆಲೆಯೂರುವ ಗುರಿಯನ್ನು ನೀಡಿದೆ. ಆದಾಗ್ಯೂ ಕಾಯ್ದೆ ಅಡಿಯಲ್ಲಿರುವ ನಿಯಮಗಳನ್ನು ಇನ್ನೂ ಸೂಚಿಸಿಲ್ಲ.

ಎಲ್ಲಾ ಭಾರತೀಯರು ಮತ್ತು ಅಫ್ಘಾನ್ ಸಿಖ್ಖರು ಮತ್ತು ಹಿಂದುಗಳನ್ನು ಸ್ವದೇಶಕ್ಕೆ ಕಳುಹಿಸಲು ಬದ್ಧವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಗೃಹ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ವೀಸಾ ನಿಬಂಧನೆಗಳನ್ನು ಪರಿಶೀಲಿಸಿದೆ.ಅಫ್ಘಾನ್ ಪ್ರಜೆಗಳಿಗಾಗಿ-ಮುಖ್ಯವಾಗಿ ಹಿಂದೂಗಳು ಮತ್ತು ಸಿಖ್ಖರು-ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೊಸ ಇ-ವೀಸಾ ವರ್ಗವನ್ನು ರಚಿಸಿದೆ.

ಈ ವಾರದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಫ್ಘಾನ್ ಪರಿಸ್ಥಿತಿಯ ಕುರಿತು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಎಲ್ಲಾ ಭಾರತೀಯ ನಾಗರಿಕರನ್ನು ಸುರಕ್ಷಿತ ಸ್ಥಳಾಂತರವನ್ನು ಖಚಿತಪಡಿಸಿಕೊಳ್ಳಲು ಮತ್ತು ಭಾರತಕ್ಕೆ ಬರಲು ಇಚ್ಛಿಸುವ ಸಿಖ್ಖರು ಮತ್ತು ಹಿಂದೂಗಳಿಗೆ ಆಶ್ರಯ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ: ಭಾರತದ ವಿಭಜನೆಯನ್ನು ಅಫ್ಘಾನಿಸ್ತಾನದ ಪರಿಸ್ಥಿತಿಗೆ ಹೋಲಿಸಿದ ಶಿವಸೇನಾ ಸಂಸದ ಸಂಜಯ್ ರಾವುತ್

ಇದನ್ನೂ ಓದಿ:  ಕ್ರಿಕೆಟ್ ವಿಚಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ; ಅಫ್ಘಾನ್ ಕ್ರಿಕೆಟ್​ಗೆ ತಾಲಿಬಾನಿಗಳಿಂದ ಸಿಗ್ತು ಬೇಷರತ್ ಬೆಂಬಲ

(India evacuates people from Kabul this shows how necessary it was to enact the Citizenship Amendment Act tweets Hardeep Singh Puri)