ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತರಾಗಿ ಅಮೃತ ಕಾಲದತ್ತ ಮುನ್ನಡೆಯಿರಿ: ನರೇಂದ್ರ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Dec 26, 2022 | 6:26 PM

Veer Bal Diwas ಮೊದಲ 'ವೀರ್ ಬಾಲ್ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ನಂಬಿಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಗುರು ಗೋಬಿಂದ್ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು

ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತರಾಗಿ ಅಮೃತ ಕಾಲದತ್ತ ಮುನ್ನಡೆಯಿರಿ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ದೆಹಲಿ: ದೇಶವನ್ನು ಯಶಸ್ಸಿನ ಉತ್ತುಂಗಕ್ಕೇರಿಸುವುದಕ್ಕೆ ಭಾರತ ಹಿಂದಿನ ‘ಸಂಕುಚಿತ ದೃಷ್ಟಿಕೋನ’ಗಳಿಂದ ಮುಕ್ತಿ ಹೊಂದಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಹೇಳಿದ್ದಾರೆ. ಮೊದಲ ‘ವೀರ್ ಬಾಲ್ ದಿವಸ್’ (Veer Bal Diwas) ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ತಮ್ಮ ನಂಬಿಕೆಯನ್ನು ರಕ್ಷಿಸುವ ಸಂದರ್ಭದಲ್ಲಿ ಪ್ರಾಣ ತ್ಯಾಗ ಮಾಡಿದ ಗುರು ಗೋಬಿಂದ್ ಸಿಂಗ್ (Guru Gobind Singh) ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೇ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಒಂದೆಡೆ ಭಯೋತ್ಪಾದನೆ ಮತ್ತೊಂದೆಡೆ ಅಧ್ಯಾತ್ಮ, ಒಂದೆಡೆ ಕೋಮುಗಲಭೆ ಮತ್ತೊಂದೆಡೆ ಉದಾರವಾದ, ಒಂದೆಡೆ ಲಕ್ಷಗಟ್ಟಲೆ ಪಡೆಗಳಿದ್ದರೆ ಇನ್ನೊಂದೆಡೆ ಕದಲದ ವೀರ ಸಾಹಿಬಜಾದೆ ಎಂದು ಮೋದಿ ಗುರುವಿನ ಇಬ್ಬರು ಹುತಾತ್ಮ ಮಕ್ಕಳನ್ನು ಉಲ್ಲೇಖಿಸಿ ಹೇಳಿದರು. ಔರಂಗಜೇಬ್ ಮತ್ತು ಅವನ ಜನರು ಕತ್ತಿ ಝಳಪಿಸಿ  ಗುರು ಗೋಬಿಂದ್ ಸಿಂಗ್ ಅವರ ಮಕ್ಕಳ ಧರ್ಮವನ್ನು ಪರಿವರ್ತಿಸಲು ಬಯಸಿದ್ದರು, ಅದಕ್ಕಾಗಿಯೇ ಅವರು ಇಬ್ಬರು ಮುಗ್ಧ ಮಕ್ಕಳನ್ನು ಕೊಲ್ಲಲು ನಿರ್ಧರಿಸಿದರು. ಆ ಯುಗವನ್ನು ಊಹಿಸಿ ನೋಡಿ. ಔರಂಗಜೇಬ್ ಭಯೋತ್ಪಾದನೆಯ ವಿರುದ್ಧ, ಭಾರತವನ್ನು ಬದಲಾಯಿಸುವ ಅವರ ಯೋಜನೆಗಳ ವಿರುದ್ಧ, ಗುರು ಗೋವಿಂದ್ ಸಿಂಗ್ ಜೀ ಪರ್ವತದಂತೆ ನಿಂತಿದ್ದರು” ಎಂದು ಅವರು ಹೇಳಿದರು.


ಈ ವರ್ಷದ ಜನವರಿ 9 ರಂದು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನದ ಸಂದರ್ಭದಲ್ಲಿ, ಡಿಸೆಂಬರ್ 26 ಅನ್ನು ‘ವೀರ್ ಬಾಲ್ ದಿವಸ್’ ಎಂದು ಆಚರಿಸಲಾಗುವುದು ಎಂದು ಪ್ರಧಾನಿ ಘೋಷಿಸಿದ್ದರು.

ಇದನ್ನೂ ಓದಿ: ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನ ಆರೋಪ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಹೈಕೋರ್ಟ್; ಕೆಸಿಆರ್​​ಗೆ ಹಿನ್ನಡೆ

ಇತಿಹಾಸದ ಹೆಸರಲ್ಲಿ ಜನರಲ್ಲಿ ಕೀಳರಿಮೆಯನ್ನು ಉತ್ತೇಜಿಸುವ ಆವೃತ್ತಿಗಳನ್ನು ಕಲಿಸಲಾಗುತ್ತಿದೆ ಮತ್ತು ‘ಅಮೃತ ಕಾಲ’ದಲ್ಲಿ ಮುನ್ನಡೆಯಲು ಮತ್ತು ಭವಿಷ್ಯದಲ್ಲಿ ಭಾರತವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು, ನಾವು ಹಿಂದಿನ ಸಂಕುಚಿತ ದೃಷ್ಟಿಕೋನಗಳಿಂದ ಮುಕ್ತರಾಗಬೇಕಿದೆ.

ಪಂಜಾಬ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳೂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪಠಿಸಿದ ‘ಶಾಬಾದ್ ಕೀರ್ತನೆ’ಯನ್ನು ಪ್ರಧಾನಿ ಮೋದಿ ಆಲಿಸಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ