ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು

| Updated By: shivaprasad.hs

Updated on: Jan 27, 2022 | 9:38 AM

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಜನರು ಕೊರೊನಾ ಸೋಂಕಿಗೆ ತುತ್ತರಾಗಿದ್ದಾರೆ. ದೈನಂದಿನ ಪಾಸಿಟಿವಿಟಿ ದರ 19.59 ಪ್ರತಿಶತ ಇದೆ.

ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,86,384 ಕೊರೊನಾ ಪ್ರಕರಣ ಪತ್ತೆ, 573 ಜನರು ಸೋಂಕಿನಿಂದ ಸಾವು
ಪ್ರಾತಿನಿಧಿಕ ಚಿತ್ರ
Follow us on

ಇಂದು (ಗುರುವಾರ) ದೇಶದಲ್ಲಿ 2,86,384 ಹೊಸ ಕೊರೊನಾ ಪ್ರಕರಣಗಳು (Corona Cases) ವರದಿಯಾಗಿವೆ. 573 ಜನರು ಸೋಂಕಿನಿಂದ ದುರ್ಮರಣಕ್ಕೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3,06,357 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 22,02,472 ಇದೆ. ದೈನಂದಿನ ಪಾಸಿಟಿವಿಟಿ ದರ 19.59% ಇದೆ. ದೇಶದಲ್ಲಿ ಈ ವರೆಗೆ ಒಟ್ಟು 1,63,84,39,207 ಡೋಸ್ ಲಸಿಕೆ ನೀಡಲಾಗಿದೆ.

ಈ ಕುರಿತು ಎಎನ್​ಐ ಹಂಚಿಕೊಂಡಿರುವ ಮಾಹಿತಿ:

ಕರ್ನಾಟಕದಲ್ಲಿ ಬುಧವಾರ 48,000ಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲು:

ಕರ್ನಾಟಕದಲ್ಲಿ ಬುಧವಾರ (ಜ.26) 48,905 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 39 ಜನರು ಸಾವನ್ನಪ್ಪಿದ್ದಾರೆ. 41,699 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 3,57,909 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 22.51 ಇದೆ. ಸೋಂಕಿನಿಂದ ಸಾವನ್ನಪ್ಪುವವರ ಸರಾಸರಿ ಶೇ 0.07 ಇದೆ. ಈವರೆಗೆ ಒಟ್ಟು 36.54.413 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 32,57,769 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 38,705 ಜನರು ಸಾವನ್ನಪ್ಪಿದ್ದಾರೆ.

ಕೊವಿಡ್ ಶಿಷ್ಟಾಚಾರ ಪಾಲನೆ ರಾಷ್ಟ್ರಧರ್ಮ: ರಾಷ್ಟ್ರಪತಿ ರಾಮನಾಥ ಕೋವಿಂದ್

ಗಣರಾಜ್ಯೋತ್ಸವದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್, ಕೊವಿಡ್ ಶಿಷ್ಟಾಚಾರ ಪಾಲನೆ ರಾಷ್ಟ್ರಧರ್ಮ ಎಂದು ನುಡಿದಿದ್ದರು. ‘‘ಕೊವಿಡ್ ಶಿಷ್ಟಾಚಾರಗಳನ್ನು ನಾವೇಲ್ಲರೂ ತಪ್ಪದೆ ಪಾಲಿಸಬೇಕು. ಇದು ರಾಷ್ಟ್ರಧರ್ಮ ಆಗಿದೆ. ಈ ಸಂಕಟದ ಪರಿಸ್ಥಿತಿಯಲ್ಲಿ ನಾವೆಲ್ಲರೂ ಸಹಕಾರದ ಬಾಳ್ವೆ ಮಾಡಬೇಕು. ಕಠಿಣ ಪರಿಸ್ಥಿತಿಯಲ್ಲಿ ಸುದೀರ್ಘ ಅವಧಿಗೆ ನಾವು ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮಾಡಿದ ಸೇವೆಯ ಬಗ್ಗೆ ಕೃತಜ್ಞತೆ ಇದೆ. ಹಲವು ಹಂತಗಳಲ್ಲಿ ಹಲವರು ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ಅಗತ್ಯ ವಸ್ತುಗಳ ಪೂರೈಕೆಯ ಸರಪಳಿ ತುಂಡರಿಸದಂತೆ ಶ್ರಮಿಸಲು ಸಾಧ್ಯವಾಯಿತು’’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ:

Covid 19 Karnataka Update: ಕರ್ನಾಟಕದಲ್ಲಿ 48,905 ಮಂದಿಗೆ ಕೊರೊನಾ ಸೋಂಕು, ಕೊವಿಡ್​ನಿಂದ 39 ಮಂದಿ ಸಾವು

President Speech: ರಾಷ್ಟ್ರಪತಿ ರಾಮನಾಥ ಕೋವಿಂದ್ ಗಣರಾಜ್ಯೋತ್ಸವ ಭಾಷಣ: ಕೊವಿಡ್ ಶಿಷ್ಟಾಚಾರ ಪಾಲನೆ ಈಗ ರಾಷ್ಟ್ರಧರ್ಮ

Published On - 9:30 am, Thu, 27 January 22