India Help: ಟರ್ಕಿಗೆ ಭಾರತದ ಪರಿಹಾರ ಸಾಮಗ್ರಿ ರವಾನೆ; ಕಷ್ಟಕ್ಕಾಗುವವನೇ ಸ್ನೇಹಿತ ಎಂದು ಮಿಡಿದ ರಾಯಭಾರಿ

Turkey Thanks India- ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಪ್ಯಾಕೇಜ್ ಅನ್ನು ಟರ್ಕಿ ದೇಶಕ್ಕೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ. ಈ ಪ್ಯಾಕೇಜ್​ನಲ್ಲಿ ಎನ್​ಡಿಆರ್​ಎಫ್​ನ ತಜ್ಞ ಶೋಧ ಮತ್ತು ರಕ್ಷಣಾ ತಂಡವೊಂದೂ ಇದೆ.

India Help: ಟರ್ಕಿಗೆ ಭಾರತದ ಪರಿಹಾರ ಸಾಮಗ್ರಿ ರವಾನೆ; ಕಷ್ಟಕ್ಕಾಗುವವನೇ ಸ್ನೇಹಿತ ಎಂದು ಮಿಡಿದ ರಾಯಭಾರಿ
ಭೂಕಂಪಪೀಡಿತ ಟರ್ಕಿಗೆ ಭಾರತ ನೆರವು
Follow us
|

Updated on:Feb 07, 2023 | 9:06 AM

ನವದೆಹಲಿ: ಟರ್ಕಿಯಲ್ಲಿ ಸುಮಾರು 4 ಸಾವಿರ ಮಂದಿಯನ್ನು ಬಲಿತೆಗೆದುಕೊಂಡಿರುವ ಭೂಕಂಪಕ್ಕೆ (Turkey Earthquake) ಭಾರತ ಮಿಡಿದಿದೆ. ನಿನ್ನೆ ಕರ್ನಾಟಕ ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಟರ್ಕಿ ದೇಶಕ್ಕೆ ನೆರವು ಒದಗಿಸುವುದಾಗಿ ಹೇಳಿದ್ದರು. ಅದರಂತೆ ಇದೀಗ ಭೂಕಂಪ ಪರಿಹಾರ ಸಾಮಗ್ರಿಗಳ ಮೊದಲ ಪ್ಯಾಕೇಜ್ ಅನ್ನು (First batch of Quake Relief material) ಟರ್ಕಿ ದೇಶಕ್ಕೆ ವಿಮಾನದ ಮೂಲಕ ಕಳುಹಿಸಿಕೊಡಲಾಗಿದೆ. ಈ ಪ್ಯಾಕೇಜ್​ನಲ್ಲಿ ಎನ್​ಡಿಆರ್​ಎಫ್​ನ ತಜ್ಞ ಶೋಧ ಮತ್ತು ರಕ್ಷಣಾ ತಂಡವೊಂದೂ ಇದೆ. ಈ ತಂಡದಲ್ಲಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಇದ್ದಾರೆ. ಈ ಪ್ಯಾಕೇಜ್​ನಲ್ಲಿ ತಜ್ಞರ ಜೊತೆ ವಿವಿಧ ರೀತಿಯ ಔಷಧಗಳು, ಡ್ರಿಲಿಂಗ್ ಮೆಷೀನ್ ಇತ್ಯಾದಿ ಹಲವು ಉಪಕರಣಗಳಿವೆ. ತರಬೇತಿ ಪಡೆದ ಶ್ವಾನಗಳ ದಳವೂ ವಿಮಾನದ ಮೂಲಕ ಟರ್ಕಿ ದೇಶ ತಲುಪಿದೆ.

ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಈ ಬಗ್ಗೆ ಟ್ವೀಟ್ ಮಾಡಿದ್ದು, ಭೂಕಂಪಪೀಡಿತ ಟರ್ಕಿಗೆ ಭಾರತದಿಂದ ಪರಿಹಾರ ಸಾಮಗ್ರಿಗಳಿರುವ ಮೊದಲ ಬ್ಯಾಚ್ ಅನ್ನು ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಭಾರತದ ಈ ನೆರವಿಗೆ ಟರ್ಕಿ ಕೃತಜ್ಞತೆ ಸಲ್ಲಿಸಿದೆ. ಕಷ್ಟದಲ್ಲಿರುವಾಗ ಆಗುವವನೇ ನಿಜವಾದ ಸ್ನೇಹಿತ ಎಂದು ಭಾರತಕ್ಕೆ ಟರ್ಕಿ ರಾಯಭಾರಿ ಫಿರತ್ ಸುನೆಲ್ ತಮ್ಮ ದೇಶದ ನಾಣ್ನುಡಿಯೊಂದನ್ನು ಉಲ್ಲೇಖಿಸಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: India Weather Updates: ಉತ್ತರಪ್ರದೇಶದಲ್ಲಿ ಮಂಜು, ಪಂಜಾಬ್​ನಲ್ಲಿ ಮಳೆ ಸಾಧ್ಯತೆ, ಉತ್ತರ ಭಾರತದಲ್ಲಿ ತಾಪಮಾನ ಮತ್ತೆ ಕುಸಿಯುವ ನಿರೀಕ್ಷೆ

“ಟರ್ಕಿ ಮತ್ತು ಹಿಂದಿಯಲ್ಲಿ ದೋಸ್ತ್ ಎಂಬುದು ಸಾಮಾನ್ಯ ಪದ. ನಮ್ಮಲ್ಲಿ ಟರ್ಕಿ ನಾಣ್ನುಡಿಯೊಂದಿದೆ: ದೋಸ್ತ್ ಕರಾ ಗೂಂಡೇ ಬೆಲ್ಲಿ ಒಲುರ್ (ಕಷ್ಟದಲ್ಲಿರುವಾಗ ಸಹಾಯ ಮಾಡುವವನೇ ಸ್ನೇಹಿತ). ಧನ್ಯವಾದಗಳು” ಎಂದು ಅವರು ತಮ್ಮ ಟ್ವೀಟ್​ನಲ್ಲಿ ಪ್ರಧಾನಿ ಕಾರ್ಯಾಲಯ, ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಭಾರತದಂತೆ ವಿಶ್ವದ ಹಲವು ದೇಶಗಳು ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ನೆರವು ಘೋಷಿಸಿವೆ. ಅಮೆರಿಕ, ಬ್ರಿಟನ್, ಐರೋಪ್ಯ ಒಕ್ಕೂಟ, ಜಪಾನ್, ಸೌತ್ ಕೊರಿಯಾ, ಮೆಕ್ಸಿಕೋ, ಜೋರ್ಡಾನ್ ಮೊದಲಾದ ದೇಶಗಳು ಪರಿಹಾರ ತಂಡಗಳನ್ನು ಟರ್ಕಿ ಮತ್ತು ಸಿರಿಯಾಗೆ ಕಳುಹಿಸಿವೆ.

ಟರ್ಕಿ ಮತ್ತು ಸಿರಿಯಾದಲ್ಲಿ ಭೀಕರ ಭೂಕಂಪ

ಮೊನ್ನೆ ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ 7.8, 7.9 ಮತ್ತು 6.0 ತೀವ್ರತೆಯ ಭೂಕಂಪಗಳು ಸಂಭವಿಸಿದ್ದು, ಮಂಗಳವಾರ ಬೆಳಗ್ಗೆಯವರೆಗೂ ಸಾವಿನ ಸಂಖ್ಯೆ 4 ಸಾವಿರ ಗಡಿದಾಟಿದೆ. ಟರ್ಕಿ ದೇಶದಲ್ಲಿ ಸಾವಿನ ಸಂಖ್ಯೆ 3 ಸಾವಿರ ಸಮೀಪ ಇದೆ. ಸಿರಿಯಾದಲ್ಲಿ ಸುಮಾರು ಒಂದೂವರೆ ಸಾವಿರ ಮಂದಿ ಬಲಿಯಾಗಿರುವುದು ತಿಳಿದುಬಂದಿದೆ. ಈ ಶತಮಾನದಲ್ಲಿ ಕಂಡ ಅತ್ಯಂತ ಘೋರ ಭೂಕಂಪಗಳಲ್ಲಿ ಇದೂ ಒಂದಾಗಿದೆ. ಕಟ್ಟಡಗಳು ನೋಡನೋಡುತ್ತಲೇ ಕುಸಿದುಹೋಗುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹೋಗಿವೆ. ಮೂರು ಭೂಕಂಪದ ಜೊತೆಗೆ ನೂರಕ್ಕೂ ಹೆಚ್ಚು ಪಶ್ಚಾತ್ ಕಂಪನಗಳಿಂದಲೂ ಈ ಎರಡು ದೇಶಗಳು ನಲುಗಿ ಹೋಗಿವೆ.

ಇದನ್ನೂ ಓದಿ: Hajj Pilgrimage: ಹಜ್ ಯಾತ್ರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ; ಹೆಚ್ಚುವರಿ ಶುಲ್ಕವಿಲ್ಲದೆ 50 ಸಾವಿರ ರೂ.ಗೆ ಯಾತ್ರೆ

ಶವ ಸಿಕ್ಕ ಸಂಖ್ಯೆ 4 ಸಾವಿರ ಇದೆ. ಆದರೆ, ಸಾವಿರ ಸಾವಿರ ಜನರು ಕಣ್ಮರೆಯಾಗಿದ್ದಾರೆ. ಕಟ್ಟಡಗಳ ಅವಶೇಷಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕೆ ಬಹಳ ದಿನಗಳು ಬೇಕಾಗಬಹುದು. ಸಾವಿನ ಸಂಖ್ಯೆ ಇನ್ನೂ ಬಹಳಷ್ಟು ಹೆಚ್ಚುವ ಸಾಧ್ಯತೆ ಇದೆ.

ಟರ್ಕಿ ದೇಶದ ಅಧ್ಯಕ್ಷ ರೆಸೆಪ್ ಟಯ್ಯಿಪ್ ಎರ್ಡೋಗನ್ ಅವರು ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಟರ್ಕಿಯಾದ್ಯಂತ ಹಾಗೂ ವಿದೇಶಗಳಲ್ಲಿರುವ ಅದರ ರಾಯಭಾರ ಕಚೇರಿಗಳಲ್ಲಿ ಟರ್ಕಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಮಾತ್ರ ಹಾರಿಸಲಾಗುತ್ತದೆ.

Published On - 8:33 am, Tue, 7 February 23

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ