Elephant Attack: ಆಂಧ್ರ ಪ್ರದೇಶದಲ್ಲಿ ಆನೆ ಹಿಂಡುಗಳಿಂದ ದಾಳಿ, ಅರಣ್ಯ ಸಿಬ್ಬಂದಿ ಸಾವು
ಅರಣ್ಯ ವೀಕ್ಷಕನ ಮೇಲೆ ಆನೆ ಹಿಂಡುಗಳು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯಲ್ಲಿ ಅರಣ್ಯ ವೀಕ್ಷಕ ಆನೆಗಳು ಸಮೀಪದ ಗ್ರಾಮಗಳಿಗೆ ಪ್ರವೇಶಿಸದಂತೆ ತಡೆಯಲು ಯತ್ನಿಸಿದಾಗ ಆನೆಗಳ ಹಿಂಡು ತುಳಿದು ಹತ್ಯೆ ಮಾಡಿವೆ.

ಅರಣ್ಯ ವೀಕ್ಷಕನ ಮೇಲೆ ಆನೆ ಹಿಂಡುಗಳು ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯಲ್ಲಿ ಅರಣ್ಯ ವೀಕ್ಷಕ ಆನೆಗಳು ಸಮೀಪದ ಗ್ರಾಮಗಳಿಗೆ ಪ್ರವೇಶಿಸದಂತೆ ತಡೆಯಲು ಯತ್ನಿಸಿದಾಗ ಆನೆಗಳ ಹಿಂಡು ತುಳಿದು ಹತ್ಯೆ ಮಾಡಿವೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ ಪಾರ್ವತಿಪುರಂನ ಪಸಿಕುಡಿ ಗ್ರಾಮದ ಹೊರವಲಯದಲ್ಲಿ ಅರಣ್ಯ ವೀಕ್ಷಕ ಮೃತಪಟ್ಟ ಬಳಿಕ ಜನರು ಭಯಭೀತರಾಗಿದ್ದಾರೆ.
ಸಮೀಪದ ಗ್ರಾಮಗಳಿಗೆ ನುಗ್ಗದಂತೆ ತಡೆಯಲು ಯತ್ನಿಸುತ್ತಿದ್ದ ಆನೆಗಳ ಹಿಂಡು ಅವರ ಮೇಲೆ ದಾಳಿ ನಡೆಸಿತ್ತು. ಆನೆಗಳ ಹಿಂಡು ಗ್ರಾಮಕ್ಕೆ ಬಾರದಂತೆ ಆನೆಗಳನ್ನು ತಡೆಯಲು ಯತ್ನಿಸುತ್ತಿದ್ದಾಗ ಲಕ್ಷಿನಾರಾಯಣ ಮೇಲೆ ಆನೆಗಳು ದಾಳಿ ನಡೆಸಿವೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.
ಕಳೆದ ಕೆಲ ದಿನಗಳಿಂದ ಭಾಮಿನಿ ಭಾಗದಲ್ಲಿ ನಾಲ್ಕು ಕಾಡಾನೆಗಳ ಹಿಂಡು ಬೆಳೆದು ನಿಂತಿದ್ದ ಹತ್ತಿ ಬೆಳೆಯನ್ನು ನಾಶಪಡಿಸಿ ಅವಾಂತರ ಸೃಷ್ಟಿಸುತ್ತಿತ್ತು.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪಸುಕುಡಿ ಗ್ರಾಮಕ್ಕೆ ಆಗಮಿಸಿದ ಆನೆ ಟ್ರ್ಯಾಕರ್ ಲಕ್ಷ್ಮೀ ನಾರಾಯಣ ಅವರು ಅಗ್ನಿಶಾಮಕ ದಳದ ಮೂಲಕ ವಂಶಧಾರಾ ನದಿ ಪ್ರದೇಶದ ಕಡೆಗೆ ಓಡಿಸಿದರು.
ಆದರೆ ಬೆಂಕಿಯ ಜ್ವಾಲೆಯಿಂದ ಸಿಟ್ಟಿಗೆದ್ದ ಆನೆಯೊಂದು ಆತನ ಮೇಲೆ ದಾಳಿ ಮಾಡಿ ತುಳಿದು ಕೊಂದು ಹಾಕಿದೆ. ಅರಣ್ಯ ಇಲಾಖೆ ಸಿಬ್ಬಂದಿ ಪೊಲೀಸರ ಬೆಂಬಲದೊಂದಿಗೆ ಶವವನ್ನು ಹೊಲದಿಂದ ಹೊರತೆಗೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




