Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ

Variant of Concern: ಇಷ್ಟು ದಿನ ಭಾರತದಲ್ಲಿ ಎರಡನೇ ಅಲೆಗೆ B.1.617 ಕಾರಣವಿರಬಹುದು ಎಂಬ ಅನುಮಾನ ಇತ್ತಾದರೂ ಅದನ್ನು ಹೊಸ ಮಾದರಿಯೆಂದು ಗಮನಿಸಲಾಗುತ್ತಿತ್ತು. ಇದೀಗ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಾಣುಗಳ ಸಾಲಿಗೆ ಭಾರತೀಯ ಮಾದರಿಯನ್ನೂ ಸೇರಿಸಲಾಗಿದೆ.

ಭಾರತದ ರೂಪಾಂತರಿ ಕೊರೊನಾ ಚಿಂತೆಗೀಡುಮಾಡುವ ತಳಿ ಎಂದ ವಿಶ್ವ ಆರೋಗ್ಯ ಸಂಸ್ಥೆ
ಸೌಜನ್ಯ : ಅಂತರ್ಜಾಲ
Follow us
Skanda
|

Updated on: May 11, 2021 | 7:58 AM

ದೆಹಲಿ: ಭಾರತವೀಗ ಕೊರೊನಾ ಎರಡನೇ ಅಲೆಯ ದುರ್ದೆಸೆಯಿಂದಾಗಿ ವಿಷಮ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಈಗ ಹರಡುತ್ತಿರುವ ವೈರಾಣು ಮೊದಲು ಇದ್ದಿದ್ದಕ್ಕಿಂತಲೂ ಹೆಚ್ಚು ವೇಗವಾಗಿ ಹಬ್ಬುತ್ತಿದ್ದು, ಅಪಾಯಕಾರಿಯಾಗಿಯೂ ವರ್ತಿಸುತ್ತಿದೆ. ಈ ರೂಪಾಂತರಿ ಕೊರೊನಾ ವೈರಾಣುವಿನ ಗುಣಲಕ್ಷಣಗಳನ್ನು ಗಮನಿಸಿದ ವಿಶ್ವ ಆರೋಗ್ಯ ಸಂಸ್ಥೆ ಭಾರತದಲ್ಲಿ ರೂಪಾಂತರಗೊಂಡಿರುವ ಕೊವಿಡ್​ 19 ಮಾದರಿಯು ಚಿಂತೆಗೀಡುಮಾಡುವ ತಳಿಯಾಗಿದೆ ಎಂದು ಸೋಮವಾರ (ಮೇ 10) ತನ್ನ ಅಭಿಪ್ರಾಯ ತಿಳಿಸಿದೆ.

ಸಂಯುಕ್ತ ರಾಷ್ಟ್ರಗಳ ಆರೋಗ್ಯ ಒಕ್ಕೂಟವೂ ಈ ಬಗ್ಗೆ ಅಭಿಪ್ರಾಯ ನೀಡಿದ್ದು, ಭಾರತದಲ್ಲಿ ಮೊದಲ ಬಾರಿಗೆ ಕಳೆದ ಅಕ್ಟೋಬರ್ ವೇಳೆಯಲ್ಲಿ ಕಂಡುಬಂದ B.1.617 ರೂಪಾಂತರಿ ಮಾದರಿಯು ಕೊವಿಡ್ 19 ಮೂಲ ವೈರಾಣುವಿಗಿಂತ ಪರಿಣಾಮಕಾರಿಯಾಗಿದ್ದು, ವೇಗವಾಗಿ ಹಬ್ಬುತ್ತಿದೆ. ಅಲ್ಲದೇ, ಸದರಿ ರೂಪಾಂತರಿ ಕೊರೊನಾ ಲಸಿಕೆಗೆ ಪ್ರತಿರೋಧ ಒಡ್ಡುವ ಗುಣಗಳನ್ನು ಬೆಳೆಸಿಕೊಂಡಿರುವ ಸಾಧ್ಯತೆಯೂ ಇದೆ ಎಂಬ ಆತಂಕ ವ್ಯಕ್ತಪಡಿಸಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಕೊವಿಡ್ 19 ನಿರ್ವಹಣಾ ವಿಭಾಗದ ಮುಖ್ಯಸ್ಥರಾಗಿರುವ ಮರಿಯಾ ವ್ಯಾನ್ ಕೇರ್ಕೋವೇ ಸಹ ಭಾರತೀಯ ರೂಪಾಂತರಿ ಬಗ್ಗೆ ಮಾತನಾಡಿ, ಈ ಬಗ್ಗೆ ಲಭ್ಯವಿರುವ ಕೆಲ ಮಾಹಿತಿಗಳನ್ನು ಗಮನಿಸಿದರೆ ಭಾರತದಲ್ಲಿ B.1.617 ಅತ್ಯಂತ ವೇಗವಾಗಿ ಹಬ್ಬುತ್ತಿದೆ ಎನ್ನುವುದು ಕಂಡುಬರುತ್ತದೆ. ಸದ್ಯ ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಾಣುವಿನ ವಿವಿಧ ಮಾದರಿಗಳನ್ನು ವಿಂಗಡಿಸಿ ನೋಡಲಾಗುತ್ತಿದ್ದು, ಭಾರತೀಯ ರೂಪಾಂತರಿ ಮಾದರಿಯನ್ನು ಚಿಂತೆಗೀಡುಮಾಡುವ ತಳಿಯೆಂದು ಪರಿಗಣಿಸಿದ್ದೇವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

ವಿಶ್ವ ಮಟ್ಟದಲ್ಲಿ ಭಾರತವು ಅತ್ಯಂತ ಕೆಟ್ಟ ಪರಿಸ್ಥಿತಿಗೆ ಸಾಕ್ಷಿಯಾಗುತ್ತಿದೆ. ಸೋಮವಾರ (ಮೇ 10) ಸುಮಾರು 3 ಲಕ್ಷದ 70 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,700 ಸೋಂಕಿತರು ಮೃತಪಟ್ಟಿದ್ದಾರೆ. ಎರಡನೇ ಅಲೆ ಭಾರತದಲ್ಲಿ ಬೀರುತ್ತಿರುವ ಪರಿಣಾಮ ಅತ್ಯಂತ ಗಂಭೀರವಾಗುತ್ತಿದ್ದು, ತಜ್ಞರ ಪ್ರಕಾರ ದಾಖಲೆಗಳಲ್ಲಿ ಇರುವ ಅಂಕಿ ಅಮಶಗಳಿಗಿಂತಲೂ ಹೆಚ್ಚು ಸಾವು ನೋವು ದೇಶದಲ್ಲಿ ಆಗುತ್ತಿದೆ ಎಂಬ ಅನುಮಾನವಿದೆ.

ಇಷ್ಟು ದಿನ ಭಾರತದಲ್ಲಿ ಎರಡನೇ ಅಲೆಗೆ B.1.617 ಕಾರಣವಿರಬಹುದು ಎಂಬ ಅನುಮಾನ ಇತ್ತಾದರೂ ಅದನ್ನು ಹೊಸ ಮಾದರಿಯೆಂದು ಗಮನಿಸಲಾಗುತ್ತಿತ್ತು. ಇದೀಗ ಸದ್ಯದ ಬೆಳವಣಿಗೆಗಳನ್ನು ಅವಲೋಕಿಸಿದ ನಂತರ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿ ವೈರಾಣುಗಳ ಸಾಲಿಗೆ ಭಾರತೀಯ ಮಾದರಿಯನ್ನೂ ಸೇರಿಸಲಾಗಿದ್ದು, ಚಿಂತೆಗೀಡುಮಾಡುವ ಮಾದರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಕರೆದಿದೆ.

(Indian variant of Covid 19 B.1.617 is Variant of Concern says WHO)

ಇದನ್ನೂ ಓದಿ: ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ