AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramayana Yatra: ಏಪ್ರಿಲ್ 7ರಂದು ಆರಂಭವಾಗಲಿದೆ 18 ದಿನಗಳ ರಾಮಾಯಣ ಯಾತ್ರೆ: ಟಿಕೆಟ್ ಬುಕಿಂಗ್ ಶುರು

ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ.

Ramayana Yatra: ಏಪ್ರಿಲ್ 7ರಂದು ಆರಂಭವಾಗಲಿದೆ 18 ದಿನಗಳ ರಾಮಾಯಣ ಯಾತ್ರೆ: ಟಿಕೆಟ್ ಬುಕಿಂಗ್ ಶುರು
ಶ್ರೀ ರಾಮಾಯಣ ಯಾತ್ರೆ
ನಯನಾ ರಾಜೀವ್
|

Updated on: Mar 16, 2023 | 11:04 AM

Share

ಭಾರತೀಯ ರೈಲ್ವೆ(Indian Railway) ಇಲಾಖೆಯು ಏಪ್ರಿಲ್ 7 ರಿಂದ ಶ್ರೀ ರಾಮಾಯಣ ಯಾತ್ರೆಯನ್ನು ಆರಂಭಿಸಲಿದ್ದು, 18 ದಿನಗಳ ಕಾಲ ನಡೆಯಲಿದೆ. ಈ ಪ್ರಯಾಣದಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಲಾಗುವುದು, ರಾಮಾಯಣ ಯಾತ್ರೆಯ ಮೊದಲ ನಿಲ್ದಾಣ ಅಯೋಧ್ಯೆಯಾಗಿರಲಿದೆ. ಈ ರೈಲು ದೆಹಲಿಯ ಸಫ್ದರ್​ಜಂಗ್ ನಿಲ್ದಾಣದಿಂದ ಪ್ರಾರಂಭವಾಗಲಿದೆ, ಪ್ರಯಾಣಿಕರು ಗಾಜಿಯಾಬಾದ್, ಅಲಿಗಢ, ತುಂಡ್ಲಾ, ಇಟಾವಾ, ಕಾನ್ಪುರ ಮತ್ತು ಲಕ್ನೋದಿಂದ ರೈಲಿನಲ್ಲಿ ಪ್ರಯಾಣವನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ.

ರೈಲು ಭೇಟಿ ನೀಡುವ ಸ್ಥಳ ಆಯೋಧ್ಯ: ರಾಮ ಜನ್ಮಭೂಮಿ ಮಂದಿರ, ಹನುಮಾನ್ ಗರ್ಹಿ, ಸರಯೂ ಘಾಟ್

ನಂದೀಗ್ರಾಮ:ಭಾರತ್ ಹನುಮಾನ್ ಮಂದಿರ,ಭಾರತ್ ಕುಂದ್

ಜನಕಪುರ: ರಾಮ ಜಾನಕಿ ಮಂದಿರ

ಸೀತಾಮರಾಹಿ: ಜಾನಕಿ ಮಂದಿರ ಹಾಗೂ ಪುನರ್ವ ಧಾಮ

ಬುಕ್ಸರ್ : ರಾಮ ರೇಖಾ ಘಾಟ್, ರಾಮೇಶ್ವರ ನಾಥ್ ದೇವಸ್ಥಾನ

ವಾರಾಣಸಿ : ತುಳಸಿ ಮಾನಸ ದೇವಸ್ಥಾನ, ಸಂಕಟ್ ಮೋಚನ್ ದೇವಸ್ಥಾನ, ವಿಶ್ವನಾಥ ದೇವಸ್ಥಾನ, ಗಂಗಾ ಆರತಿ

ಸೀತಾ ಸಮಾಹಿತಿ ಸ್ಥಳ್, ಸೀತಾಮರಾಹಿ: ಸೀತಾ ಮಾತಾ ದೇವಸ್ಥಾನ

ಪ್ರಯಾಗರಾಜ್ : ಭಾರದ್ವಾಜ ಆಶ್ರಮ, ಗಂಗಾ ಯಮುನಾ ಸಂಗಮ, ಹನುಮಾನ ದೇವಸ್ಥಾನ

ಶ್ರಿಂಗ್ವೆರ್ಪುರ್: ಶ್ರಿಂಗಿ ರಿಷಿ ಸಮಾಧಿ, ಶಾಂತಾ ದೇವಿ ದೇವಸ್ಥಾನ, ರಾಮಚೌರ

ಚಿತ್ರಕೂಟ: ಗುಪ್ತ ಗೋದಾವರಿ, ರಾಮ ಘಾಟ್, ಸತಿ ಅನಸೂಯ ದೇವಸ್ಥಾನ

ನಾಸಿಕ್ : ತ್ರಯಂಬಕೇಶ್ವರ ದೇವಸ್ಥಾನ, ಪಂಚವಟಿ, ಸೀತಾಗುಹ, ಕಲರಾಮ ಮಂದಿರ

ಹಂಪಿ: ಅಂಜನಾದ್ರಿ ಬೆಟ್ಟ, ವಿರೂಪಾಕ್ಷ ದೇವಸ್ಥಾನ, ವಿಠಲ ಮಂದಿರ

ರಾಮೇಶ್ವರಂ : ರಾಮನಾಥ ಸ್ವಾಮಿ ಮಂದಿರ, ಧನುಷ್ಕೋಡಿ

ಬದ್ರಾಚಲಂ: ಶ್ರೀ ಸೀತಾ ರಾಮಚಂದ್ರಸ್ವಾಮಿ ಮಂದಿರ, ಆಂಜನೇಯ ಸ್ವಾಮಿ ಮಂದಿರ

ನಾಗ್ಪುರ: ರಾಮತೇಕ್ ಕೋಟೆ ಹಾಗೂ ಮಂದಿರ

ಈ ರೈಲು ಎಸಿ ಫರ್ಸ್ಟ್​ ಹಾಗೂ ಎಸಿ ಸೆಕೆಂಡ್ ಕೋಚ್​ಗಳನ್ನು ಹೊಂದಿರುತ್ತದೆ. ಒಟ್ಟು 156 ಪ್ರಯಾಣಿಕರು ಶ್ರೀರಾಮಾಯಣ ಯಾತ್ರೆಗೆ ತೆರಳಲು ಸಾಧ್ಯವಾಗುತ್ತದೆ. ಈ ರೈಲುಗಳು ಎರಡು ರೈಲು ರೆಸ್ಟೋರೆಂಟ್​ಗಳನ್ನು ಸಹ ಒಳಗೊಂಡಿರುತ್ತದೆ. 7,500 ಕಿ,ಮೀ ನ ಪ್ರಯಾಣದಲ್ಲಿ ಹಲವು ಸೌಲಭ್ಯಗಳಿರುತ್ತವೆ. ಯಾತ್ರೆಯ ವೇಳೆ ಭಕ್ತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಎಸಿ ಫರ್ಸ್ಟ್​ ಕೋಚ್​ನ ಪ್ರತಿ ಪ್ರಯಾಣಿಕರಿಗೆ 1.68 ಲಕ್ಷ ರೂ, ಕ್ಯಾಬಿನ್​ಗೆ 1.46 ಲಕ್ಷ ರೂ, ಎಸಿ ಸೆಕೆಂಡ್ ಕೋಚ್​ಗೆ 1.14 ಲಕ್ಷ ರೂ ನೀಡಬೇಕಾಗುತ್ತದೆ. ಈ ಪ್ರಯಾಣದ ಬುಕಿಂಗ್​ ಅನ್ನು ಐಆರ್​ಸಿಟಿಸಿಯ ವೆಬ್​ಸೈಟ್​ನಲ್ಲಿ ಮಾಡಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ