ಜಮ್ಮು ಕಾಶ್ಮೀರ ಚುನಾವಣೆಗೆ ಬಿಜೆಪಿ 4ನೇ ಪಟ್ಟಿ ಬಿಡುಗಡೆ; ನೌಶೇರಾದಿಂದ ರವೀಂದರ್ ರೈನಾ ಸ್ಪರ್ಧೆ

ಇತ್ತೀಚಿನ ಪಟ್ಟಿಯಲ್ಲಿ ಪಕ್ಷವು ಲಾಲ್ ಚೌಕ್‌ನಿಂದ ಐಜಾಜ್ ಹುಸೇನ್, ಈಡಿಗಾದಿಂದ ಆರಿಫ್ ರಾಜಾ, ಖಾನ್ಸಾಹಿಬ್‌ನಿಂದ ಅಲಿ ಮೊಹಮ್ಮದ್ ಮಿರ್, ಚ್ರಾರ್-ಇ-ಶರೀಫ್‌ನಿಂದ ಜಾಹಿದ್ ಹುಸೇನ್, ನೌಶೇರಾದಿಂದ ರವೀಂದರ್ ರೈನಾ ಮತ್ತು ರಾಜೌರಿಯಿಂದ ವಿಬೋಧ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ. ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಮಾಜಿ ಸಚಿವರಾದ ಸತ್ ಪಾಲ್ ಶರ್ಮಾ, ಪ್ರಿಯಾ ಸೇಥಿ ಮತ್ತು ಶಾಮ್ ಲಾಲ್ ಚೌಧರಿ ಸೇರಿದಂತೆ ಹಿರಿಯ ನಾಯಕರನ್ನು ಈ ಬಾರಿ ಕೈಬಿಡಲಾಗಿದೆ.

ಜಮ್ಮು ಕಾಶ್ಮೀರ ಚುನಾವಣೆಗೆ ಬಿಜೆಪಿ 4ನೇ ಪಟ್ಟಿ ಬಿಡುಗಡೆ; ನೌಶೇರಾದಿಂದ ರವೀಂದರ್ ರೈನಾ ಸ್ಪರ್ಧೆ
ಬಿಜೆಪಿ
Follow us
|

Updated on:Sep 02, 2024 | 8:27 PM

ಶ್ರೀನಗರ ಸೆಪ್ಟೆಂಬರ್ 02: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir Elections)ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ  (BJP) ತನ್ನ ಆರು ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ, ನೌಶೇರಾ ಕ್ಷೇತ್ರದಿಂದ ಪಕ್ಷದ ಘಟಕದ ಮುಖ್ಯಸ್ಥ ರವೀಂದರ್ ರೈನಾ ಕಣಕ್ಕಿಳಿಯಲಿದ್ದಾರೆ. ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡುವುದರೊಂದಿಗೆ, 90 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ಬಿಜೆಪಿ ಇದೀಗ 51 ಅಭ್ಯರ್ಥಿಗಳನ್ನು ಘೋಷಿಸಿದ್ದು, ಸೆಪ್ಟೆಂಬರ್ 18 ರಂದು ಚುನಾವಣೆ ನಡೆಯಲಿದೆ.

ಎರಡನೇ ಹಂತವನ್ನು ಸೆಪ್ಟೆಂಬರ್ 25 ರಂದು ನಿಗದಿಪಡಿಸಲಾಗಿದೆ. ಮೂರನೇ ಹಂತವು ಅಕ್ಟೋಬರ್ 1 ರಂದು ನಡೆಯಲಿದೆ. ಭಾರತದ ಚುನಾವಣಾ ಆಯೋಗವು ಹರ್ಯಾಣ ಜೊತೆಗೆ ಅಕ್ಟೋಬರ್ 8 ರಂದು ಫಲಿತಾಂಶಗಳನ್ನು ಪ್ರಕಟಿಸಲಿದೆ.

ಇತ್ತೀಚಿನ ಪಟ್ಟಿಯಲ್ಲಿ ಪಕ್ಷವು ಲಾಲ್ ಚೌಕ್‌ನಿಂದ ಐಜಾಜ್ ಹುಸೇನ್, ಈಡಿಗಾದಿಂದ ಆರಿಫ್ ರಾಜಾ, ಖಾನ್ಸಾಹಿಬ್‌ನಿಂದ ಅಲಿ ಮೊಹಮ್ಮದ್ ಮಿರ್, ಚ್ರಾರ್-ಇ-ಶರೀಫ್‌ನಿಂದ ಜಾಹಿದ್ ಹುಸೇನ್, ನೌಶೇರಾದಿಂದ ರವೀಂದರ್ ರೈನಾ ಮತ್ತು ರಾಜೌರಿಯಿಂದ ವಿಬೋಧ್ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.

ಮಾಜಿ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಮತ್ತು ಮಾಜಿ ಸಚಿವರಾದ ಸತ್ ಪಾಲ್ ಶರ್ಮಾ, ಪ್ರಿಯಾ ಸೇಥಿ ಮತ್ತು ಶಾಮ್ ಲಾಲ್ ಚೌಧರಿ ಸೇರಿದಂತೆ ಹಿರಿಯ ನಾಯಕರನ್ನು ಈ ಬಾರಿ ಕೈಬಿಡಲಾಗಿದೆ.

ಜಮ್ಮು ಮತ್ತು ಕಾಶ್ಮೀರ ರಾಜ್ಯವಾಗಿದ್ದಾಗ 2014 ರಲ್ಲಿ ಕೊನೆಯ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿತ್ತು. ಆ ವರ್ಷದ ಚುನಾವಣೆಯು ಮೈತ್ರಿ ಸರ್ಕಾರದ ತೀರ್ಪು ನೀಡಿದ ನಂತರ, ಮಾಧವ್ 2015 ರಿಂದ 2018 ರವರೆಗೆ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಬಿಜೆಪಿ ಮತ್ತು ಮುಫ್ತಿ ಮೊಹಮ್ಮದ್ ಸಯೀದ್ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬಿಜೆಪಿ ಕೇಂದ್ರಾಡಳಿತ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮಾಜಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಮತ್ತು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಅವರನ್ನು ಉಸ್ತುವಾರಿಗಳನ್ನಾಗಿ ಮಾಡಿದೆ.

ಆಂಧ್ರಪ್ರದೇಶದವರಾದ ಮಾಧವ್ ಅವರು 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ನಂತರ ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನಿಂದ ಬಿಜೆಪಿಗೆ ಸೇರ್ಪಡೆಗೊಂಡರು.

ಇದನ್ನೂ ಓದಿ: ಕೋಲ್ಕತ್ತಾ ಕೊಲೆ ಪ್ರಕರಣ: ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ವಿಧಿಸುವ ಮಸೂದೆ ಮಂಡಿಸಲಿದೆ ಮಮತಾ ಸರ್ಕಾರ

ಜಮ್ಮು ಪ್ರದೇಶ ಸೇರಿದಂತೆ ಭಯೋತ್ಪಾದನೆ ಸಂಬಂಧಿತ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಯುತ್ತಿದೆ. ಕಾಶ್ಮೀರ ಕಣಿವೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ಕೇಂದ್ರವು ಸುಮಾರು 300 ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಿದೆ.

ಶ್ರೀನಗರ, ಹಂದ್ವಾರ, ಗಂದರ್‌ಬಾಲ್, ಬುದ್ಗಾಮ್, ಕುಪ್ವಾರಾ, ಬಾರಾಮುಲ್ಲಾ, ಬಂಡಿಪೋರಾ, ಅನಂತನಾಗ್, ಶೋಪಿಯಾನ್, ಪುಲ್ವಾಮಾ, ಅವಂತಿಪೋರಾ ಮತ್ತು ಕುಲ್ಗಾಮ್‌ನಲ್ಲಿ ಸೇನಾ ತುಕಡಿ ನಿಯೋಜಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:26 pm, Mon, 2 September 24