ಜಾರ್ಖಂಡ್‌ನಿಂದ ಬಿಜೆಪಿಯನ್ನು ತೊಡೆದುಹಾಕುತ್ತೇವೆ: ಮಾಜಿ ಸಿಎಂ ಹೇಮಂತ್ ಸೊರೇನ್

|

Updated on: Jun 29, 2024 | 4:56 PM

ತಮ್ಮ ಪಕ್ಷದ ಕಾರ್ಯಕರನ್ನುದ್ದೇಶಿಸಿ ಮಾತನಾಡಿದ ಹೇಮಂತ್ ಸೊರೇನ್, ಯಾರೂ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ, ಅದು ಎಂದಾದರೊಂದು ಹೊತ್ತಲ್ಲಿ ಹೊರಬರುತ್ತದೆ" ಎಂದು ಸೊರೇನ್ ಹೇಳಿದ್ದಾರೆ. ನಿಮಗೆ ನಾಯಕತ್ವ ನೀಡಲು ಮತ್ತೊಮ್ಮೆ ನಿಮ್ಮ ನಡುವೆ ಬಂದಿದ್ದೇನೆ. ಲೋಕಸಭೆ ಚುನಾವಣೆಯ ಫಲಿತಾಂಶವು ಜಾರ್ಖಂಡ್‌ನ ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರಿಗೆ ಬಲವನ್ನು ನೀಡಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ.

ಜಾರ್ಖಂಡ್‌ನಿಂದ ಬಿಜೆಪಿಯನ್ನು ತೊಡೆದುಹಾಕುತ್ತೇವೆ: ಮಾಜಿ ಸಿಎಂ ಹೇಮಂತ್ ಸೊರೇನ್
ಹೇಮಂತ್ ಸೊರೇನ್
Follow us on

ರಾಂಚಿ ಜೂನ್ 29: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ನಾಯಕ ಹೇಮಂತ್ ಸೊರೇನ್  (Hemant Soren) ಅವರು ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ರಾಜ್ಯದಿಂದಲೇ ತೊಡೆದುಹಾಕುವುದಾಗಿ ಹೇಳಿದ್ದಾರೆ. “ಭಾರತದ ಸಾಮಾಜಿಕ ರಚನೆಯನ್ನು ನಾಶಪಡಿಸುವಲ್ಲಿ ಬಿಜೆಪಿ ಪರಿಣತಿಯನ್ನು ಹೊಂದಿದೆ.2024 ರ ಲೋಕಸಭೆ ಚುನಾವಣೆಯಲ್ಲಿ ಜನರು ಅವರಿಗೆ ಪಾಠ ಕಲಿಸಿದ್ದಾರೆ. ಅದು ಜಾರ್ಖಂಡ್‌ನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಹಗಲುಗನಸು ಕಾಣುತ್ತಿದೆ” ಎಂದು ರಾಂಚಿಯಲ್ಲಿ ಜೆಎಂಎಂ ಕಾರ್ಯಕರ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಸೊರೇನ್ ಹೇಳಿದ್ದಾರೆ.

ನಮ್ಮ ವಿರುದ್ಧ ಷಡ್ಯಂತ್ರ ರೂಪಿಸಿದವರಿಗೆ ತಕ್ಕ ಉತ್ತರ ನೀಡುತ್ತೇವೆ. ಬಿಜೆಪಿಯ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆಯುವ ಸಮಯ ಬಂದಿದೆ. ಜಾರ್ಖಂಡ್‌ನಿಂದ ಬಿಜೆಪಿಯನ್ನು ನಿರ್ನಾಮ ಮಾಡಲಾಗುವುದು. ರಾಜ್ಯದಲ್ಲಿ (ವಿಧಾನಸಭಾ) ಚುನಾವಣೆಗಳು ಮೊದಲೇ ನಡೆಯಬಹುದು ಎಂಬ ಮಾಹಿತಿ ನನಗೆ ಬಂದಿದೆ ಮತ್ತು ನಾವು ಅದಕ್ಕೆ ಸಿದ್ಧರಿದ್ದೇವೆ  ಎಂದು ಸೊರೇನ್ ಹೇಳಿದ್ದಾರೆ.

ಹೇಮಂತ್ ಸೊರೇನ್ ಟ್ವೀಟ್


ಜಾರ್ಖಂಡ್ ಹೈಕೋರ್ಟ್‌ನಿಂದ ಜಾಮೀನು ಆದೇಶದ ನಂತರ ಹೇಮಂತ್ ಸೊರೇನ್ ಬಿರ್ಸಾ ಮುಂಡಾ ಜೈಲಿನಿಂದ ಬಿಡುಗಡೆಯಾದರು.
ಆಪಾದಿತ ಭೂ ಹಗರಣ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜನವರಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸೊರೇನ್ ಅವರನ್ನು ಬಂಧಿಸಿತ್ತು. ನಕಲಿ ಮಾರಾಟಗಾರರು ಮತ್ತು ಖರೀದಿದಾರರು ಕೋಟಿಗಟ್ಟಲೆ ಮೌಲ್ಯದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ದಾಖಲೆಗಳ ಫೋರ್ಜರಿ ಮೂಲಕ ಗಣನೀಯ ಪ್ರಮಾಣದ ಆದಾಯದ ಬಗ್ಗೆ ತನಿಖೆಯು ಸಂಬಂಧಿಸಿದೆ.

ನ್ಯಾಯಾಲಯವು ಮೇಲ್ನೋಟಕ್ಕೆ ಅವರು ಅಪರಾಧದಲ್ಲಿ ತಪ್ಪಿತಸ್ಥರಲ್ಲ ಮತ್ತು “ಅರ್ಜಿದಾರರು ಜಾಮೀನಿನ ಮೇಲೆ ಅಪರಾಧ ಮಾಡುವ ಸಾಧ್ಯತೆಯಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Sanjay Jha: ಜೆಡಿಯು ಕಾರ್ಯಾಧ್ಯಕ್ಷರಾಗಿ ಸಂಜಯ್ ಝಾ ನೇಮಕ; ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಕರೆ ನೀಡಿದ ಕಾರ್ಯಕಾರಿ ಸಭೆ

ನಾಯಕತ್ವ ನೀಡಲು ಮತ್ತೊಮ್ಮೆ ಬಂದಿದ್ದೇನೆ: ಸೊರೇನ್

“ಯಾರೂ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ, ಅದು ಎಂದಾದರೊಂದು ಹೊತ್ತಲ್ಲಿ ಹೊರಬರುತ್ತದೆ” ಎಂದು ಸೊರೇನ್ ಹೇಳಿದ್ದಾರೆ.
ನಿಮಗೆ ನಾಯಕತ್ವ ನೀಡಲು ಮತ್ತೊಮ್ಮೆ ನಿಮ್ಮ ನಡುವೆ ಬಂದಿದ್ದೇನೆ. ಲೋಕಸಭೆ ಚುನಾವಣೆಯ ಫಲಿತಾಂಶವು ಜಾರ್ಖಂಡ್‌ನ ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರಿಗೆ ಬಲವನ್ನು ನೀಡಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಜಾರ್ಖಂಡ್‌ನ 14 ಲೋಕಸಭಾ ಸ್ಥಾನಗಳ ಪೈಕಿ 8 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡಿದೆ. ಜೆಎಂಎಂ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ ಎರಡು ಸ್ಥಾನಗಳನ್ನು ಮತ್ತು ಎಜೆಎಸ್‌ಯು ಪಕ್ಷವು ಒಂದು ಸ್ಥಾನವನ್ನು ಪಡೆದುಕೊಂಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ