AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey-Syria earthquake: ಟರ್ಕಿಯಲ್ಲಿ ಜೂಲಿ, ರೋಮಿಯೋ, ಹನಿ, ರಾಂಬೊ, ಮಹತ್ವದ ಕಾರ್ಯಚರಣೆಯಲ್ಲಿ ಭಾರತದ ಶ್ವಾನದಳ

ಟಿರ್ಕಿಯ ಭೂಕಂಪಕ್ಕೆ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಕಾಪಾಡಲು ಭಾರತದ ಜೂಲಿ, ರೋಮಿಯೋ, ಹನಿ ಮತ್ತು ರಾಂಬೊ ಎಂಬ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ನಾಲ್ಕು ಶ್ವಾನದಳಗಳು ಕಾರ್ಯಚರಣೆ ಮುಂದಾಗಿದೆ.

Turkey-Syria earthquake: ಟರ್ಕಿಯಲ್ಲಿ ಜೂಲಿ, ರೋಮಿಯೋ, ಹನಿ, ರಾಂಬೊ, ಮಹತ್ವದ ಕಾರ್ಯಚರಣೆಯಲ್ಲಿ ಭಾರತದ ಶ್ವಾನದಳ
Julie, Romeo, Honey, RamboImage Credit source: ANI
ಅಕ್ಷಯ್​ ಪಲ್ಲಮಜಲು​​
|

Updated on:Feb 08, 2023 | 3:39 PM

Share

ಟಿರ್ಕಿಯು (turkey) ಅಕ್ಷಶಃ ಭೂಕಂಪಕ್ಕೆ ನಲುಗಿದೆ. ದೇಶದಲ್ಲಿ ಹಲವು ಸಾವು-ನೋವು ಸಂಭವಿಸಿದೆ. ಇದೀಗ ಭಾರತ ಟಿರ್ಕಿಗೆ ಅಗತ್ಯದ ಸಹಾಯಗಳನ್ನು ನೀಡಿದೆ. ಟಿರ್ಕಿಯ ಭೂಕಂಪಕ್ಕೆ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಜನರನ್ನು ಕಾಪಾಡಲು ಭಾರತದ ಜೂಲಿ, ರೋಮಿಯೋ, ಹನಿ ಮತ್ತು ರಾಂಬೊ ಎಂಬ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (NDRF) ನಾಲ್ಕು ಶ್ವಾನದಳಗಳು ಕಾರ್ಯಚರಣೆ ಮುಂದಾಗಿದೆ. 7.8 ತೀವ್ರತೆ ಭೂಕಂಪದಿಂದ ತತ್ತರಿಸುತ್ತಿರುವ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಳುಹಿಸಲಾಗಿದೆ. ವಿಶೇಷವಾಗಿ ತರಬೇತಿ ಪಡೆದ ಲ್ಯಾಬ್ರಡಾರ್ ತಳಿಯ ಶ್ವಾನದಳ, ಸ್ನಿಫಿಂಗ್ ಮತ್ತು ವಿಪತ್ತು ಪೀಡಿತ ಪ್ರದೇಶಗಳಲ್ಲಿ ಇತರ ಪ್ರಮುಖ ರಕ್ಷಣಾ ಕಾರ್ಯಾಚರಣೆ ಕೌಶಲ್ಯಗಳಲ್ಲಿ ಪರಿಣಿತರು, 101 ಪುರುಷರನ್ನು ಒಳಗೊಂಡ NDRF ನ ಎರಡು ಪ್ರತ್ಯೇಕ ತಂಡಗಳೊಂದಿಗೆ ಮಂಗಳವಾರ ಟರ್ಕಿಯನ್ನು ತಲುಪಿದ್ದಾರೆ.

ಭೂಕಂಪದಿಂದ ಧ್ವಂಸಗೊಂಡ ಟರ್ಕಿಯ ಪ್ರದೇಶಗಳಲ್ಲಿ ತಂಡಗಳು ತೀವ್ರವಾದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಿವೆ, ಬಹು ಭೂಕಂಪಗಳಿಂದ ಆಸ್ಪತ್ರೆಗಳು, ಕಟ್ಟಡಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನೆಲಸಮವಾಗಿದೆ, ಸಾವಿರಾರು ಜನರು ಇನ್ನೂ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಅತುಲ್ ಕರ್ವಾಲ್ ಸುದ್ದಿ ಸಂಸ್ಥೆ ಎಎನ್‌ಐಗೆ ಶ್ವಾನದಳ ಮತ್ತು ತಂಡಗಳು ಅತ್ಯಾಧುನಿಕ ಶೋಧ ಮತ್ತು ಪಾರುಗಾಣಿಕಾ ಮತ್ತು ವೈಯಕ್ತಿಕ ಸುರಕ್ಷತಾ ಸಾಧನಗಳನ್ನು ಕೈಗೊಳ್ಳಲು ಸಂಪೂರ್ಣವಾಗಿ ಸಜ್ಜುಗೊಂಡಿವೆ ಮತ್ತು ಸ್ಥಳೀಯ ಟರ್ಕಿಯ ಅಧಿಕಾರಿಗಳಿಗೆ ಸಹಾಯ ಮಾಡಲಿವೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ.

ಇದನ್ನು ಓದಿ:Syria Earthquake: ಹುಟ್ಟು ಸಾವು ಎಲ್ಲವೂ ದೈವಿಚ್ಛೆ: ಅವಶೇಷಗಳಡಿ ಹುಟ್ಟಿ, ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

ಸಿ-17 ಗ್ಲೋಬ್‌ಮಾಸ್ಟರ್ ಮಿಲಿಟರಿ ವಿಮಾನಗಳ ಮೂಲಕ ಕೊರೆಯುವ ಯಂತ್ರಗಳು, ಪರಿಹಾರ ಸಾಮಗ್ರಿಗಳು, ಔಷಧಗಳು ಮತ್ತು ಇತರ ಸಲಕರಣೆಗಳೊಂದಿಗೆ ವಿಶೇಷ ತಂಡಗಳನ್ನು ಕಳುಹಿಸಲಾಗಿದೆ. 30 ಹಾಸಿಗೆಗಳ ವೈದ್ಯಕೀಯ ಸೌಲಭ್ಯವನ್ನು ಸ್ಥಾಪಿಸಲು ಭಾರತೀಯ ಸೇನೆಯ ಆಗ್ರಾ ಮೂಲದ ಸೇನಾ ಕ್ಷೇತ್ರ ಆಸ್ಪತ್ರೆಯ ತಂಡವನ್ನು ಸಹ ಕಳುಹಿಸಲಾಗಿದೆ. ಅವರು ಕ್ರಿಟಿಕಲ್ ಕೇರ್ ತಜ್ಞರು ಮತ್ತು ಮೂಳೆಚಿಕಿತ್ಸೆ ಮತ್ತು ಸಾಮಾನ್ಯ ಶಸ್ತ್ರಚಿಕಿತ್ಸಕರನ್ನು ಒಳಗೊಂಡಿರುತ್ತಾರೆ ಮತ್ತು ಎಕ್ಸ್-ರೇ ಯಂತ್ರಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಉತ್ಪಾದನಾ ಘಟಕ ಮತ್ತು ಇತರ ಉಪಕರಣಗಳನ್ನು ಹೊಂದಿದ್ದಾರೆ.

ಟರ್ಕಿ, ಸಿರಿಯಾದಾದ್ಯಂತ ಸಾವಿನ ಸಂಖ್ಯೆ 9,500 ಕ್ಕೆ ತಲುಪಿದೆ ಮತ್ತು ಟರ್ಕಿಯಲ್ಲಿ ಸುಮಾರು 7,000 ಜನ ಜೀವ ಕಳೆದುಕೊಂಡಿದ್ದಾರೆ. ಸಿರಿಯಾದಲ್ಲಿ ಬುಧವಾರದಂದು ಸಾವಿನ ಸಂಖ್ಯೆ 2,547 ಕ್ಕಿಂತ ಹೆಚ್ಚಿದೆ ಎಂದು AFP ಅಧಿಕಾರಿಗಳು ತಿಳಿಸಿದ್ದಾರೆ.

Published On - 3:37 pm, Wed, 8 February 23

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ