AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kerala Assembly Elections 2021: ವಿಭಿನ್ನ ಘೋಷವಾಕ್ಯಗಳೊಂದಿಗೆ ಕೇರಳ ಚುನಾವಣೆ ಪ್ರಚಾರಕ್ಕಿಳಿದ ಎಲ್​ಡಿಎಫ್, ಯುಡಿಎಫ್ ಮತ್ತು ಎನ್​ಡಿಎ

Kerala Elections Slogan: ಈ ಬಾರಿ ಎಡಪಕ್ಷ ( LDF) 'ಉರಪ್ಪಾಣ್ ಎಲ್​ಡಿಎಫ್ ' ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. 'ಉರಪ್ಪಾಣ್ ಎಲ್​ಡಿಎಫ್ ಎಂಬ ಪದದ ಅರ್ಥ 'ಹೌದು ನಿಸ್ಸಂದೇಹವಾಗಿ ಎಲ್​ಡಿಎಫ್' ಎಂಬುದಾಗಿದೆ.

Kerala Assembly Elections 2021: ವಿಭಿನ್ನ ಘೋಷವಾಕ್ಯಗಳೊಂದಿಗೆ ಕೇರಳ ಚುನಾವಣೆ ಪ್ರಚಾರಕ್ಕಿಳಿದ ಎಲ್​ಡಿಎಫ್, ಯುಡಿಎಫ್ ಮತ್ತು ಎನ್​ಡಿಎ
ರಮೇಶ್ ಚೆನ್ನಿತ್ತಲ- ಪಿಣರಾಯಿ ವಿಜಯನ್- ಕೆ.ಸುರೇಂದ್ರನ್
Follow us
ರಶ್ಮಿ ಕಲ್ಲಕಟ್ಟ
|

Updated on: Mar 09, 2021 | 1:34 PM

ತಿರುವನಂತಪುರಂ: ಕೋವಿಡ್-19 ಸಾಂಕ್ರಾಮಿಕದ ನಡುವೆಯೇ ಕೇರಳದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ. ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಕೊವಿಡ್ ನಿಬಂಧನೆ ಪಾಲಿಸಬೇಕು ಎಂದು ಕೇರಳ ಸರ್ಕಾರ ಹೇಳಿದ್ದರೂ ಇದ್ಯಾವುದಕ್ಕೂ ರಾಜಕಾರಣಿಗಳು ಕಿವಿಗೊಡುತ್ತಿಲ್ಲ. ಚುನಾವಣೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚುನಾವಣಾ ಪ್ರಚಾರಗಳ ಕಾವು ಏರತೊಡಗಿದೆ. ವಿಭಿನ್ನ ರೀತಿಯ ಘೋಷವಾಕ್ಯಗಳೊಂದಿಗೆ ಆಡಳಿತಾರೂಢ ಎಲ್​ಡಿಎಫ್, ವಿಪಕ್ಷ ಯುಡಿಎಫ್ ಮತ್ತು ಎನ್​ಡಿಎ ಮೈತ್ರಿಕೂಟಗಳು ಮತದಾರರನ್ನು ಸಮೀಪಿಸುತ್ತಿವೆ.

ಕೇರಳದ ಚುನಾವಣೆ ಎಂದಾಕ್ಷಣ ಸ್ಲೋಗನ್ ವಾರ್ ಇದ್ದೇ ಇರುತ್ತದೆ. ಘೋಷವಾಕ್ಯ ಬಿಡುಗಡೆಯೇ ಚುನಾವಣಾ ಪ್ರಚಾರದ ಮೊದಲ ಹೆಜ್ಜೆ. ಈ ಬಾರಿ ಎಡಪಕ್ಷ ( LDF) ‘ಉರಪ್ಪಾಣ್ ಎಲ್​ಡಿಎಫ್ ‘ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿದೆ. ‘ಉರಪ್ಪಾಣ್ ಎಲ್​ಡಿಎಫ್ ಎಂಬ ಪದದ ಅರ್ಥ ‘ಹೌದು ನಿಸ್ಸಂದೇಹವಾಗಿ ಎಲ್​ಡಿಎಫ್ ‘ ಎಂಬುದಾಗಿದೆ. ‘ಉರಪ್ಪ್’ ಎಂಬ ಮಲಯಾಳಂ ಪದಕ್ಕೆ ಹಲವಾರು ಅರ್ಥಗಳಿವೆ. ಉರಪ್ಪ್ ಎಂದರೆ- ಸದೃಢ, ವಾಗ್ದಾನ, ಭರವಸೆ, ಖಾತ್ರಿ, ಶಕ್ತಿಶಾಲಿ. ಎರಡನೇ ಬಾರಿಯೂ ಪಿಣರಾಯಿ ವಿಜಯನ್ ನೇತೃತ್ವದ ಎಲ್​ಡಿಎಫ್ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸವನ್ನು ಈ ಪದ ಧ್ವನಿಸುತ್ತದೆ. ಅದೇ ವೇಳೆ 2016ರಲ್ಲಿ ನೀಡಿದ ಭರವಸೆಗಳನ್ನು ಪಿಣರಾಯಿ ಸರ್ಕಾರ ಪೂರೈಸಿದೆ ಎಂಬುದನ್ನೂ ಇದು ಹೇಳುತ್ತದೆ. ‘ಉರಪ್ಪಾಣ್ ಎಲ್​ಡಿಎಫ್ ‘ ಎಂಬ ಘೋಷವಾಕ್ಯವು ಎಲ್​ಡಿಎಫ್ ಎಲ್ಲ ಭರವಸೆಗಳನ್ನು ಪೂರೈಸಿದ್ದೇವೆ ಎಂಬುದನ್ನು ಹೇಳುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಫೇಸ್​ಬುಕ್ ಪುಟದಲ್ಲಿ ಬರೆದಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ‘ಎಲ್​ಡಿಎಫ್ ವರುಂ ಎಲ್ಲ ಶೆರಿಯಾವುಂ’ ಎಂಬುದು ಎಲ್​ಡಿಎಫ್ ಘೋಷಣೆಯಾಗಿತ್ತು. ಅಂದರೆ ಎಲ್​ಡಿಎಫ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ , ಎಲ್ಲವೂ ಸರಿ ಹೋಗುತ್ತದೆ. ಈ ಘೋಷಣೆ ಜನಪ್ರಿಯವಾಗಿತ್ತು. ಈ ಹಿಂದೆ ಕೇರಳದಲ್ಲಿ ಅಧಿಕಾರದಲ್ಲಿದ್ದ ಯುಡಿಎಫ್ ಸರ್ಕಾರದ ಭ್ರಷ್ಟಾಚಾರ, ಲಂಚ, ಕಾಂಗ್ರೆಸ್ ನಾಯಕರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪಗಳು, ಸೋಲಾರ್ ಹಗರಣ ಮೊದಲಾದ ಪ್ರಕರಣಗಳನ್ನೇ ಯುಡಿಎಫ್ ವಿರುದ್ಧದ ಅಸ್ತ್ರವಾಗಿ ಎಲ್ ಡಿಎಫ್ ಬಳಸಿಕೊಂಡಿತ್ತು.

ರಾಜ್ಯದ ಒಳಿತಿಗಾಗಿ ಯುಡಿಎಫ್ ಉರಪ್ಪಾಣ್ ಎಲ್​ಡಿಎಫ್ ಎಂಬ ಘೋಷಣೆಯೊಂದಿಗೆ ಎಲ್​​ಡಿಎಫ್ ಚುನಾವಣೆ ಪ್ರಚಾರ ನಡೆಸುತ್ತಿರುವಾಗ ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂಬ ಘೋಷಣೆಯನ್ನು ಯುಡಿಎಫ್ ಬಿಡುಗಡೆ ಮಾಡಿದೆ. ‘ನಾಡ್ ನನ್ನಾಕ್ಕಾನ್ ಯುಡಿಎಫ್’ ಎಂದರೆ ರಾಜ್ಯದ ಒಳಿತಿಗಾಗಿ ಯುಡಿಎಫ್ ಎಂದು ಅರ್ಥ. ಚಿನ್ನ ಕಳ್ಳಸಾಗಾಣಿಕೆ ಪ್ರಕರಣ, ಲೈಫ್ ಮಿಷನ್ ಹಗರಣ ಮೊದಲಾದವುಗಳನ್ನು ಅಸ್ತ್ರವಾಗಿರಿಸಿಕೊಂಡು ಎಲ್​ಡಿಎಫ್ ವಿರುದ್ಧ ಯುಡಿಎಫ್ ಪ್ರಚಾರ ನಡೆಸುತ್ತಿದೆ. ಎಲ್​​ಡಿಎಫ್ ಅಧಿಕಾರದಿಂದ ರೋಸಿ ಹೋದ ಜನರಿಗೆ ನಾವು ಅಧಿಕಾರಕ್ಕೇರುವ ಮೂಲಕ ಬದಲಾವಣೆ ತರುತ್ತೇವೆ ಎಂದು ಯುಡಿಎಫ್ ಹೇಳುತ್ತಿದೆ. 2016ರಲ್ಲಿ ‘ವಳರಣಂ ಈ ನಾಡ್, ತುಡರಣಂ ಈ ಭರಣಂ’ (ಈ ರಾಜ್ಯ ಪ್ರಗತಿ ಹೊಂದಬೇಕು, ಅಧಿಕಾರ ಮುಂದುವರಿಯಬೇಕು) ಎಂಬುದಾಗಿತ್ತು ಯುಡಿಎಫ್ ನ ಘೋಷವಾಕ್ಯ.

ಮೋದಿ ಜತೆ ಹೊಸ ಕೇರಳ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ( NDA) ಕಳೆದ ಭಾನುವಾರ ಸ್ಲೋಗನ್ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿರುವನಂತಪುರಂನಲ್ಲಿ ನಡೆದ ಕೇರಳ ಬಿಜೆಪಿಯ ವಿಜಯ್ ಯಾತ್ರಾ ಸಮಾರೋಪ ಸಮಾರಂಭದಲ್ಲಿ ಎನ್​ಡಿಎ ಘೋಷವಾಕ್ಯ ಬಿಡುಗಡೆ ಮಾಡಿದ್ದಾರೆ. ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೈಲೈಟ್ ಮಾಡಿದೆ. ‘ಪುದಿಯ ಕೇರಳಂ ಮೋದಿಕ್ಕೊಪ್ಪಂ’ (ಮೋದಿ ಜತೆ ನವ ಕೇರಳ) ಎಂಬ ಘೋಷವಾಕ್ಯವನ್ನು ಬಿಡುಗಡೆ ಮಾಡಿದ ಅಮಿತ್ ಶಾ, ಪಿಣರಾಯಿ ವಿಜಯನ್ ವಿರುದ್ಧ ಹರಿಹಾಯ್ದಿದ್ದರು. ಕಳೆದ ವರ್ಷ ‘ಎನ್​​ ಡಿಎ ವಝಿ ಮುಟ್ಟಿಯ ಕೇರಳಂ, ವಝಿ ಕಾಟ್ಟಾನ್ ಬಿಜೆಪಿ’ (ದಾರಿ ಕಾಣದ ಕೇರಳ, ದಾರಿ ತೋರಿಸಲು ಬಿಜೆಪಿ) ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಕಣಕ್ಕಿಳಿದಿತ್ತು.

ಇದನ್ನೂ ಓದಿ: Kerala Elections 2021: ಕೇರಳದ ಜನತೆ ಬದಲಾವಣೆ ಬಯಸಿದ್ದಾರೆ; ಅಮಿತ್ ಶಾ

Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?

Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ