ಇಡುಕ್ಕಿಯಲ್ಲಿ ಕಂದಕಕ್ಕೆ ಬಿದ್ದ ಬಸ್, ನಾಲ್ವರು ಸಾವು, 32 ಮಂದಿಗೆ ಗಂಭೀರ ಗಾಯ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಜೆಟ್ ಟೂರಿಸಂ ಸೆಲ್‌ನ ಭಾಗವಾಗಿರುವ ಬಸ್ ತಮಿಳುನಾಡಿನ ತಂಜಾವೂರು ಪ್ರವಾಸ ಮುಗಿಸಿ ಅಲಪ್ಪುಳ ಜಿಲ್ಲೆಯ ಮಾವೆಲಿಕ್ಕಾರಕ್ಕೆ ಹಿಂತಿರುಗುತ್ತಿತ್ತು.ತಿರುವಿನಲ್ಲಿ ಬಸ್ ಬ್ರೇಕ್​ ಫೇಲ್ ಆಗಿತ್ತು. ಇದರಿಂದಾಗಿ ಬಸ್ಸು 70 ಅಡಿ ಆಳದ ಕಂದಕಕ್ಕೆ ಉರುಳಿತ್ತು. ಬಸ್ ಮರದಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ, ಹೆಚ್ಚಿನ ಸಾವು ನೋವುಗಳು ಸಂಭವಿಸಿಲ್ಲ.

ಇಡುಕ್ಕಿಯಲ್ಲಿ ಕಂದಕಕ್ಕೆ ಬಿದ್ದ ಬಸ್, ನಾಲ್ವರು ಸಾವು, 32 ಮಂದಿಗೆ ಗಂಭೀರ ಗಾಯ
ಬಸ್
Image Credit source: India Today

Updated on: Jan 06, 2025 | 3:22 PM

ಕೊಟ್ಟಾರಕರ-ದಿಂಡುಗಲ್ ರಾಷ್ಟ್ರೀಯ ಹೆದ್ದಾರಿಯ ಪುಲ್ಲುಪಾರ ಬಳಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ಕಂದಕಕ್ಕೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ಬಜೆಟ್ ಟೂರಿಸಂ ಸೆಲ್‌ನ ಭಾಗವಾಗಿರುವ ಬಸ್ ತಮಿಳುನಾಡಿನ ತಂಜಾವೂರು ಪ್ರವಾಸ ಮುಗಿಸಿ ಅಲಪ್ಪುಳ ಜಿಲ್ಲೆಯ ಮಾವೆಲಿಕ್ಕಾರಕ್ಕೆ ಹಿಂತಿರುಗುತ್ತಿತ್ತು.

ಇಡುಕ್ಕಿ ಜಿಲ್ಲೆಯ ಕಲ್ಲಿವಾಯಲ್ ಎಸ್ಟೇಟ್ ಬಳಿ ಬೆಳಗ್ಗೆ 6.15 ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಮೃತರನ್ನು ಮಾವೇಲಿಕ್ಕರ ನಿವಾಸಿಗಳಾದ ಅರುಣ್ ಹರಿ (55), ರಾಮ ಮೋಹನ್ (40), ಸಂಗೀತ್ (45), ಮತ್ತು ಬಿಂದು ಉನ್ನಿಥಾನ್ (59) ಎಂದು ಗುರುತಿಸಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ತಿರುವಿನಲ್ಲಿ ಬಸ್ ಬ್ರೇಕ್​ ಫೇಲ್ ಆಗಿತ್ತು. ಇದರಿಂದಾಗಿ ಬಸ್ಸು 70 ಅಡಿ ಆಳದ ಕಂದಕಕ್ಕೆ ಉರುಳಿತ್ತು. ಬಸ್ ಮರದಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ, ಹೆಚ್ಚಿನ ಸಾವು ನೋವುಗಳು ಸಂಭವಿಸಿಲ್ಲ.

ಸ್ಥಳೀಯ ನಿವಾಸಿಗಳು, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸೇರಿದಂತೆ ತುರ್ತು ಎಲ್ಲರೂ ತುರ್ತಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಾಳುಗಳನ್ನು ಮುಂಡಕಯಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆ ಮತ್ತು ಪಾಲಾದ ಮಾರ್ ಸ್ಲೀವಾ ಮೆಡಿಸಿಟಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಮತ್ತಷ್ಟು ಓದಿ: ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು

ಯಾರೂ ಸಿಕ್ಕಿಹಾಕಿಕೊಂಡಿಲ್ಲ ಎಂದು ಖಚಿತಪಡಿಸಿಕೊಳ್ಳಲು ಕ್ರೇನ್ ಬಳಸಿ ಬಸ್ ಅನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ. ಭಾನುವಾರ ಬೆಳಗ್ಗೆ ಮಾವೇಲಿಕ್ಕಾರದಿಂದ ಬಸ್‌ ಹೊರಟಿದ್ದು, ಸೋಮವಾರ ಮುಂಜಾನೆ ಹಿಂತಿರುಗಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:19 pm, Mon, 6 January 25

Loading...
Unable to load recommendations.
Follow Us