ಕೃಷ್ಣ ಜನ್ಮಭೂಮಿ-ಈದ್ಗಾ ಪ್ರಕರಣ: ಸಮೀಕ್ಷೆ ವಿಚಾರಣೆಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮಥುರಾ ನ್ಯಾಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ

ಕೆಳ ನ್ಯಾಯಾಲಯವು ಕತ್ರಾ ಕೇಶವ ದೇವ್ ದೇವಾಲಯದ ಸಂಕೀರ್ಣದಲ್ಲಿರುವ ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಮೀಪದಿಂದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಲು ಮತ್ತು ಮಸೀದಿಯ ಸಮೀಕ್ಷೆಗೆ...

ಕೃಷ್ಣ ಜನ್ಮಭೂಮಿ-ಈದ್ಗಾ ಪ್ರಕರಣ: ಸಮೀಕ್ಷೆ ವಿಚಾರಣೆಯನ್ನು 4 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಮಥುರಾ ನ್ಯಾಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್ ನಿರ್ದೇಶನ
ಕೃಷ್ಣ ಜನ್ಮಭೂಮಿ-ಈದ್ಗಾ ಪ್ರಕರಣ
Updated By: ರಶ್ಮಿ ಕಲ್ಲಕಟ್ಟ

Updated on: Aug 29, 2022 | 3:22 PM

ದೆಹಲಿ: ಶಾಹಿ ಈದ್ಗಾ ಮಸೀದಿಯ ಸಮೀಕ್ಷೆಗೆ ಸಂಬಂಧಿಸಿದ ವಿಚಾರಣೆಯನ್ನು   ನಾಲ್ಕು ತಿಂಗಳೊಳಗೆ ಪೂರ್ಣಗೊಳಿಸುವಂತೆ ಮಥುರಾ ಜಿಲ್ಲಾ ನ್ಯಾಯಾಲಯಕ್ಕೆ ಅಲಹಾಬಾದ್ ಹೈಕೋರ್ಟ್  (Allahabad High Court)ಸೋಮವಾರ ನಿರ್ದೇಶನ ನೀಡಿದೆ. ಮಥುರಾ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯ ನಿರಂತರ ಮುಂದೂಡಿಕೆ ಮತ್ತು ವಿಳಂಬದಿಂದಾಗಿ ಅರ್ಜಿದಾರ ಮನೀಶ್ ಯಾದವ್ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಕೆಳ ನ್ಯಾಯಾಲಯವು ಕತ್ರಾ ಕೇಶವ ದೇವ್ ದೇವಾಲಯದ ಸಂಕೀರ್ಣದಲ್ಲಿರುವ ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಮೀಪದಿಂದ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಲು ಮತ್ತು ಮಸೀದಿಯ ಸಮೀಕ್ಷೆಗೆ ನ್ಯಾಯಾಲಯದ ಆಯುಕ್ತರನ್ನು ನೇಮಿಸುವ ನಂತರದ ಮಧ್ಯಂತರ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.
ಅರ್ಜಿದಾರರು ಮಸೀದಿಯ ಸಮೀಕ್ಷೆಯನ್ನು ಕೋರಿದ್ದಾರೆ. ಅದರಲ್ಲಿರುವ “ಓಂ, ಸ್ವಸ್ತಿಕ ಮತ್ತು ಕಮಲದ” ನಂತಹ ದೇವಾಲಯಗಳ ಹಲವಾರು ಚಿಹ್ನೆಗಳು “ಹಿಂದೂ ವಾಸ್ತುಶೈಲಿ” ಎಂದು ಹೇಳಲಾಗುತ್ತದೆ.

ಹೈಕೋರ್ಟ್ ಆದೇಶದ ಪ್ರಕಾರ ಸರ್ವೆ ವೇಳೆ ಫಿರ್ಯಾದಿ ಹಾಗೂ ಪ್ರತಿವಾದಿಯೂ ಹಾಜರಿರುತ್ತಾರೆ. ಹೈಕೋರ್ಟ್‌ನ ಈ ತೀರ್ಪನ್ನು ಹಿಂದೂ ಕಡೆಯವರು ಶ್ಲಾಘಿಸಿದ್ದಾರೆ, ಆದರೆ ಮುಸ್ಲಿಂ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಇದಕ್ಕೂ ಮುನ್ನ ಮಥುರಾದ ಸ್ಥಳೀಯ ನ್ಯಾಯಾಲಯದಲ್ಲಿ ಶ್ರೀಕೃಷ್ಣ ಜನ್ಮಭೂಮಿ-ಶಾಹಿ ಮಸೀದಿ ಈದ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಶಾಹಿ ಮಸೀದಿ ಈದ್ಗಾದ ಇಂತೇಜಾಮಿಯಾ ಸಮಿತಿ ಪ್ರಶ್ನಿಸಿತ್ತು. ಸಿಪಿಸಿಯ ನಿಯಮ 7/11 ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಅರೇಂಜ್‌ಮೆಂಟ್ ಕಮಿಟಿಯು ಪ್ರಕರಣದ ನಿರ್ವಹಣೆಯ ಸಮಸ್ಯೆಯನ್ನು (ವಿಷಯವನ್ನು ನಿರ್ವಹಿಸಬಹುದೇ ಅಥವಾ ಇಲ್ಲವೇ) ಎತ್ತಿದೆ.

ಆರಾಧನಾ ಸ್ಥಳ ಕಾಯಿದೆಯಿಂದ ನಿಷೇಧಿಸಲ್ಪಟ್ಟಿರುವುದರಿಂದ ದಾವೆಯನ್ನು ನಿರ್ವಹಿಸಲಾಗುವುದಿಲ್ಲ ಎಂದು  ವಕೀಲ ನೀರಜ್ ಶರ್ಮಾ ವಾದಿಸಿದ್ದಾರೆ.