ಲಖಿಂಪುರ ಖೇರಿ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ ಸಲ್ಲಿಸಲು ಇಂದು ಶಹೀದ್​ ರೈತರ ದಿನ ಆಚರಣೆ

ಶಾಹೀದ್​ ಕಿಸಾನ್​ ದಿವಸ್​ ನಿಮಿತ್ತ, ಲಖಿಂಪುರ ಖೇರಿಯ ಸಾಹೀಬ್​ಜಾದಾ ಇಂಟರ್​ ಕಾಲೇಜಿನ ಎದುರು ಮೃತ ರೈತರಿಗೆ ಅಂತಿಮ್​ ಅರದಾಸ್​ ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ.

ಲಖಿಂಪುರ ಖೇರಿ ಹಿಂಸಾಚಾರ: ಮೃತ ರೈತರಿಗೆ ಅಂತಿಮ ನಮನ ಸಲ್ಲಿಸಲು ಇಂದು ಶಹೀದ್​ ರೈತರ ದಿನ ಆಚರಣೆ
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
Updated By: Lakshmi Hegde

Updated on: Oct 12, 2021 | 9:28 AM

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಇಂದು ಹುತಾತ್ಮ ರೈತರ ದಿನವನ್ನು ಆಚರಿಸಲು ನಿರ್ಧರಿಸಿವೆ. ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿಟ್ಟಿನಲ್ಲಿ ಇಂದು ಶಹೀದ್​ ಕಿಸಾನ್​ ದಿವಸ್​ ಆಚರಣೆ ಮಾಡುತ್ತಿರುವುದಾಗಿ ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.  ಈ ದಿನ ದೇಶಾದ್ಯಂತ ಇರುವ ವಿವಿಧ ರೈತ ಸಂಘಟನೆಗಳು, ಪ್ರಾರ್ಥನೆ, ಗೌರವ ಅರ್ಪಣೆ ಸಭೆಗಳನ್ನು ನಡೆಸಬೇಕು. ಸಂಜೆ ಕ್ಯಾಂಡಲ್​ ಲೈಟ್​ ಮೆರವಣಿಗೆ (ಮೇಣದ ಬತ್ತಿ ಹಿಡಿದು ಮೆರವಣಿಗೆ) ನಡೆಸಬೇಕು ಎಂದು ಕಿಸಾನ್​ ಮೋರ್ಚಾ ರೈತರಿಗೆ ಸೂಚಿಸಿದೆ. 

ಇಂದು ಶಹೀದ್​ ಕಿಸಾನ್​ ದಿವಸ್​ ನಿಮಿತ್ತ, ಲಖಿಂಪುರ ಖೇರಿಯ ಸಾಹೀಬ್​ಜಾದಾ ಇಂಟರ್​ ಕಾಲೇಜಿನ ಎದುರು ಮೃತ ರೈತರಿಗೆ ಅಂತಿಮ್​ ಅರದಾಸ್​(ಕೊನೇ ಪ್ರಾರ್ಥನೆ) ನಡೆಯಲಿದ್ದು, ಅದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ. ಈ ಪ್ರಾರ್ಥನೆಯಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದೂ ಸಂಯುಕ್ತ ಕಿಸಾನ್​ ಮೋರ್ಚಾ ತಿಳಿಸಿದೆ.  ಅದರಾಚೆಗೆ, ದೇಶದ ಪ್ರತಿಯೊಬ್ಬರೂ ಇಂದು ಸಂಜೆ 8 ಗಂಟೆಗೆ ತಮ್ಮ ಮನೆಯ ಹೊರಗೆ 5 ಮೇಣದ ಬತ್ತಿಗಳನ್ನು ಹಚ್ಚಬೇಕು ಎಂದು ಮನವಿ ಮಾಡಿದೆ.

ಇನ್ನು ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಆಶಿಶ್​ ಮಿಶ್ರಾರ ಪಾತ್ರವಿದೆ ಎಂದು ಅವರನ್ನು ಬಂಧಿಸಲಾಗಿದೆ. ಆದರೆ ಬೆಂಗಾವಲು ವಾಹನ ಕೇಂದ್ರ ಸಚಿವ ಅಜಯ್​ ಮಿಶ್ರಾರದ್ದು. ಅಷ್ಟಾದರೂ ಅಜಯ್​ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಅವರನ್ನು ಹುದ್ದೆಯಿಂದ ವಜಾಗೊಳಿಸಲಿಲ್ಲ ಎಂದು ರೈತ ಸಂಘಟನೆಗಳು ಆರೋಪಿಸಿವೆ. ಅಜಯ್​ ಮಿಶ್ರಾ ತೇನಿಯವರನ್ನು ವಜಾಗೊಳಿಸದೆ ಇರುವುದು ಮೋದಿ ಸರ್ಕಾರಕ್ಕೆ ನಾಚಿಕೆಗೇಡು ಎಂದೂ ಹೇಳಿವೆ. ಅಕ್ಟೋಬರ್​ 15ರಂದು ಅಂದರೆ ವಿಜಯದಶಮಿಯಂದು ಬಿಜೆಪಿ ನಾಯಕರ ಪ್ರತಿಕೃತಿ ದಹನ ಮಾಡುವುದಾಗಿಯೂ ಹೇಳಿದ್ದಾರೆ.

ಇದನ್ನೂ ಓದಿ: ನೀವು ಕುಡಿಯುವ ಹಾಲು ಶುದ್ಧವಾಗಿದೆಯೇ? ಈ ಸರಳ ಮಾರ್ಗಗಳಿಂದ ಹಾಲಿನ ಕಲಬೆರಕೆಯನ್ನು ಕಂಡುಕೊಳ್ಳಿ

ಬೆಂಗಳೂರಿನಲ್ಲಿ ಮಳೆ ಅವಾಂತರ; ಏರ್ಪೋರ್ಟ್ ರೋಡ್​ನಲ್ಲಿ ಕೆಟ್ಟು ನಿಂತ 20ಕ್ಕೂ ಹೆಚ್ಚು ಕಾರುಗಳು

Published On - 9:03 am, Tue, 12 October 21