AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು […]

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 19, 2020 | 2:10 PM

Share

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು ಪ್ರಯತ್ನಿಸುವ ವೇಳೆಗೆ ಚಿರತೆ ಅಟ್ಯಾಕ್ ಮಾಡಿ ಕಾಲನ್ನು ಹಿಡಿದುಕೊಳ್ಳುತ್ತೆ. ಆತ ಕಾಲನ್ನು ಅಲುಗಾಡಿಸಿದಾಗ ಚಿರತೆ ಆತನನ್ನು ಬಿಟ್ಟುಬಿಡುತ್ತೆ.

ಇದೇ ವೇಳೆ 6 ನಾಯಿಗಳು ಚಿರತೆಯನ್ನು ಸುತ್ತುವರೆಯುತ್ತೆ. ನಂತರ ಇನ್ನೂ ಒಂದು ನಾಯಿಯೂ ಸೇರಿಕೊಳ್ಳುತ್ತೆ. ಏಳೂ ನಾಯಿಗಳು ಚಿರತೆಯನ್ನ ನೋಡಿ ಬೊಗಳುತ್ತವೆ. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಚಿರತೆ ಅಂಗಡಿಯ ಷಟರ್ ಮೇಲೆ ಹಾರಲು ಯತ್ನಿಸುತ್ತೆ. ಆದ್ರೆ ಸಾಧ್ಯವಾಗುವುದಿಲ್ಲ. ಈ ವೇಳೆ ಕೋರೆಹಲ್ಲುಗಳನ್ನ ತೋರಿಸಿಕೊಂಡು ನಾಯಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತೆ. ನಂತರ ನಾಯಿಗಳು ಅಲ್ಲಿಂದ ತೆರಳಿದ ಬಳಿಕ ಚಿರತೆ ಲಾರಿ ಕೆಳಗೆ ಬಚ್ಚಿಟ್ಟುಕೊಂಡು, ಪರಾರಿಯಾಗುತ್ತೆ.

Published On - 12:23 pm, Tue, 19 May 20

Follow Us
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು