AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು […]

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 19, 2020 | 2:10 PM

Share

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು ಪ್ರಯತ್ನಿಸುವ ವೇಳೆಗೆ ಚಿರತೆ ಅಟ್ಯಾಕ್ ಮಾಡಿ ಕಾಲನ್ನು ಹಿಡಿದುಕೊಳ್ಳುತ್ತೆ. ಆತ ಕಾಲನ್ನು ಅಲುಗಾಡಿಸಿದಾಗ ಚಿರತೆ ಆತನನ್ನು ಬಿಟ್ಟುಬಿಡುತ್ತೆ.

ಇದೇ ವೇಳೆ 6 ನಾಯಿಗಳು ಚಿರತೆಯನ್ನು ಸುತ್ತುವರೆಯುತ್ತೆ. ನಂತರ ಇನ್ನೂ ಒಂದು ನಾಯಿಯೂ ಸೇರಿಕೊಳ್ಳುತ್ತೆ. ಏಳೂ ನಾಯಿಗಳು ಚಿರತೆಯನ್ನ ನೋಡಿ ಬೊಗಳುತ್ತವೆ. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಚಿರತೆ ಅಂಗಡಿಯ ಷಟರ್ ಮೇಲೆ ಹಾರಲು ಯತ್ನಿಸುತ್ತೆ. ಆದ್ರೆ ಸಾಧ್ಯವಾಗುವುದಿಲ್ಲ. ಈ ವೇಳೆ ಕೋರೆಹಲ್ಲುಗಳನ್ನ ತೋರಿಸಿಕೊಂಡು ನಾಯಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತೆ. ನಂತರ ನಾಯಿಗಳು ಅಲ್ಲಿಂದ ತೆರಳಿದ ಬಳಿಕ ಚಿರತೆ ಲಾರಿ ಕೆಳಗೆ ಬಚ್ಚಿಟ್ಟುಕೊಂಡು, ಪರಾರಿಯಾಗುತ್ತೆ.

Published On - 12:23 pm, Tue, 19 May 20

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!