AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು […]

ವ್ಯಕ್ತಿಯ ಮೇಲೆ ಚಿರತೆ ಅಟ್ಯಾಕ್ ಮಾಡಿದಾಗ ನಾಯಿಗಳು ಏನು ಮಾಡಿದವು? ವಿಡಿಯೋ ಇದೆ
ಸಾಧು ಶ್ರೀನಾಥ್​
|

Updated on:May 19, 2020 | 2:10 PM

Share

ಹೈದರಾಬಾದ್‌: ಕೊರೊನಾ ಲಾಕ್​ಡೌನ್​ನಿಂದ ಮಾನವ ಸಂಚಾರವಿಲ್ಲದೆ ಎಲ್ಲಾ ನಗರಗಳು ಸ್ತಬ್ಧಗೊಂಡಿವೆ. ಇದೇ ಸಮಯದಲ್ಲಿ ಕಾಡು ಪ್ರಾಣಿಗಳು ನಗರಗಳಿಗೆ ಎಂಟ್ರಿ ಕೊಡುತ್ತಿರುವುದು ಸಾಮಾನ್ಯವಾಗಿದೆ. ಸದ್ಯ ಹೈದರಾಬಾದ್​ನ ಮಹಾನಗರದಲ್ಲಿ ಚಿರತೆ ಮನುಷ್ಯನ ಮೇಲೆ ಅಟ್ಯಾಕ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಮೇ 14ರಂದು ಈ ಘಟನೆ ನಡೆದಿದೆ. ಮೊದಲಿಗೆ ಇಬ್ಬರು ಮನುಷ್ಯರನ್ನು ಚಿರತೆ ಬೆನ್ನಟ್ಟುತ್ತೆ. ಚಿರತೆ ಸಮೀಪಿಸುವ ವೇಳೆಗೆ ಅದರಲ್ಲಿ ಒಬ್ಬ ಪಕ್ಕದಲ್ಲೇ ಇರುವ ಟ್ರಕ್​ ಮೇಲೆ ಹತ್ತಿ ರಕ್ಷಿಸಿಕೊಳ್ಳುತ್ತಾನೆ. ಆದ್ರೆ ಮತ್ತೊಬ್ಬ ಟ್ರಕ್ ಹತ್ತಲು ಪ್ರಯತ್ನಿಸುವ ವೇಳೆಗೆ ಚಿರತೆ ಅಟ್ಯಾಕ್ ಮಾಡಿ ಕಾಲನ್ನು ಹಿಡಿದುಕೊಳ್ಳುತ್ತೆ. ಆತ ಕಾಲನ್ನು ಅಲುಗಾಡಿಸಿದಾಗ ಚಿರತೆ ಆತನನ್ನು ಬಿಟ್ಟುಬಿಡುತ್ತೆ.

ಇದೇ ವೇಳೆ 6 ನಾಯಿಗಳು ಚಿರತೆಯನ್ನು ಸುತ್ತುವರೆಯುತ್ತೆ. ನಂತರ ಇನ್ನೂ ಒಂದು ನಾಯಿಯೂ ಸೇರಿಕೊಳ್ಳುತ್ತೆ. ಏಳೂ ನಾಯಿಗಳು ಚಿರತೆಯನ್ನ ನೋಡಿ ಬೊಗಳುತ್ತವೆ. ಆಗ ಅಲ್ಲಿಂದ ತಪ್ಪಿಸಿಕೊಳ್ಳಲು ಚಿರತೆ ಅಂಗಡಿಯ ಷಟರ್ ಮೇಲೆ ಹಾರಲು ಯತ್ನಿಸುತ್ತೆ. ಆದ್ರೆ ಸಾಧ್ಯವಾಗುವುದಿಲ್ಲ. ಈ ವೇಳೆ ಕೋರೆಹಲ್ಲುಗಳನ್ನ ತೋರಿಸಿಕೊಂಡು ನಾಯಿಗಳ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತೆ. ನಂತರ ನಾಯಿಗಳು ಅಲ್ಲಿಂದ ತೆರಳಿದ ಬಳಿಕ ಚಿರತೆ ಲಾರಿ ಕೆಳಗೆ ಬಚ್ಚಿಟ್ಟುಕೊಂಡು, ಪರಾರಿಯಾಗುತ್ತೆ.

Published On - 12:23 pm, Tue, 19 May 20

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್​ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ