ಲೋಕಸಭಾ ಚುನಾವಣೆ 2024: ಕಳೆದ 20 ದಿನಗಳಿಂದ ಕಾಣೆಯಾಗಿದ್ದ ನೀಲೇಶ್​ ಕುಂಭಾನಿ ಕಾಂಗ್ರೆಸ್​ ಬಗ್ಗೆ ಹೇಳಿದ್ದೇನು?

|

Updated on: May 12, 2024 | 12:38 PM

ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ನೀಲೇಶ್ ಕುಂಭಾನಿ 20 ದಿನಗಳ ನಂತರ ಮುನ್ನಲೆಗೆ ಬಂದಿದ್ದಾರೆ. ಈ ವೇಳೆ ಕಾಂಗ್ರೆಸ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ಕಾಂಗ್ರೆಸ್ ದ್ರೋಹ ಬಗೆದಿತ್ತು ಎಂದು ಕುಂಭಾನಿ ಹೇಳಿದರು. ಚುನಾವಣಾ ನಮೂನೆಯಲ್ಲಿನ ಅಕ್ರಮಗಳಿಂದಾಗಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ನಂತರ ಇಲ್ಲಿಂದ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಗೆದ್ದಿದ್ದಾರೆ.

ಲೋಕಸಭಾ ಚುನಾವಣೆ 2024: ಕಳೆದ 20 ದಿನಗಳಿಂದ ಕಾಣೆಯಾಗಿದ್ದ ನೀಲೇಶ್​ ಕುಂಭಾನಿ ಕಾಂಗ್ರೆಸ್​ ಬಗ್ಗೆ ಹೇಳಿದ್ದೇನು?
ನೀಲೇಶ್​
Follow us on

ಗುಜರಾತ್‌ನ ಸೂರತ್ ಲೋಕಸಭಾ ಕ್ಷೇತ್ರ(Surat Lok Sabha Constituency)ದಲ್ಲಿ ನಾಮಪತ್ರ ತಿರಸ್ಕೃತಗೊಂಡು ಬಳಿಕ ಕಾಂಗ್ರೆಸ್​ನಿಂದ ಅಮಾನತುಗೊಂಡಿದ್ದ ನೀಲೇಶ್​ ಕುಂಭಾನಿ 20 ದಿನಗಳ ಬಳಿಕ ಮುನ್ನಲೆಗೆ ಬಂದಿದ್ದು,  ಕಾಂಗ್ರೆಸ್​ ತನಗೆ ದ್ರೋಹ ಮಾಡಿದೆ ಎಂದು ಹೇಳಿದ್ದಾರೆ. ಏಪ್ರಿಲ್ 21 ರಂದು ಗುಜರಾತ್‌ನ ಸೂರತ್ ಕ್ಷೇತ್ರದಿಂದ ಕುಂಭಾನಿಯವರ ನಾಮಪತ್ರ ತಿರಸ್ಕೃತಗೊಂಡ ನಂತರ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಅಭ್ಯರ್ಥಿಯನ್ನು ಅಲ್ಲಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಯಿತು.

ಕಾಂಗ್ರೆಸ್ ರಾಜ್ಯ ಘಟಕದ ಮುಖ್ಯಸ್ಥ ಶಕ್ತಿಸಿಂಗ್ ಗೋಹಿಲ್ ಮತ್ತು ರಾಜ್‌ಕೋಟ್ ಲೋಕಸಭಾ ಅಭ್ಯರ್ಥಿ ಪರೇಶ್ ಧನಾನಿ ಅವರನ್ನು ಗೌರವಿಸುವ ಕಾರಣಕ್ಕಾಗಿ ಕುಂಭಾಣಿ ಅವರು ಇಷ್ಟು ದಿನ ಮೌನವಾಗಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕರು ನನಗೆ ದ್ರೋಹ ಬಗೆದಿದ್ದಾರೆ ಆದರೆ 2017 ರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಮೊದಲು ದ್ರೋಹ ಬಗೆದಿದ್ದು, ಕೊನೆಯ ಕ್ಷಣದಲ್ಲಿ ನನ್ನ ಸೂರತ್‌ನ ಕಾಮ್ರೇಜ್ ವಿಧಾನಸಭಾ ಸ್ಥಾನದ ಟಿಕೆಟ್ ರದ್ದಾಗಿತ್ತು, ಮೊದಲು ತಪ್ಪು ಮಾಡಿದ್ದು ಕಾಂಗ್ರೆಸ್, ನಾನಲ್ಲ ಎಂದರು.

ಎಎಪಿ (ಆಮ್ ಆದ್ಮಿ ಪಕ್ಷ) ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದರೂ, ನಾನು ಇಲ್ಲಿ ಆಪ್ ನಾಯಕರೊಂದಿಗೆ ಪ್ರಚಾರ ನಡೆಸುತ್ತಿದ್ದಾಗ ಕೆಲವು ನಾಯಕರ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಸೂರತ್​ನಲ್ಲಿ ಬಿಜೆಪಿ ಅಭ್ಯರ್ಥಿಯ ಅವಿರೋಧ ಆಯ್ಕೆ, ತನ್ನ ಅಭ್ಯರ್ಥಿಯನ್ನು ಉಚ್ಛಾಟಿಸಿದ ಕಾಂಗ್ರೆಸ್​

ಸೂರತ್​ನಲ್ಲಿ ನಡೆದಿದ್ದೇನು?
ಗುಜರಾತ್​ನ ಸೂರತ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿ ನೀಲೇಶ್​ ಕುಂಭಾನಿ ಅವರ ನಾಮಪತ್ರವನ್ನು ರದ್ದುಗೊಳಿಸಲಾಗಿತ್ತು. ನೀಲೇಶ್​ ನಾಮಪತ್ರ ರದ್ದಾದ ಬಳಿಕ ಇತರೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆದ ನಂತರ ಈ ಸ್ಥಾನದಿಂದ ಬಿಜೆಪಿ ಅಭ್ಯರ್ಥಿ ಮುಖೇಶ್​ ದಲಾಲ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಈ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗುವ ಕುರಿತು ಕಾಂಗ್ರೆಸ್​ ಮಾತನಾಡಿತ್ತು, ನೀಲೇಶ್​ ಕುಂಭಾನಿ ವಿಷಯದಲ್ಲೂ ಪಕ್ಷ ಕಠಿಣ ನಿಲುವು ತಳೆದಿತ್ತು, ನೀಲೇಶ್​ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್​ ಪಕ್ಷದಿಂದ ಉಚ್ಛಾಟಿಸಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:36 pm, Sun, 12 May 24